ಹೊನ್ನೇಮರಡುವಿನಲ್ಲಿರುವ ಜೋಗ್ ಜಲಪಾತದ ಹತ್ತಿರದಲ್ಲಿಯೇ ಸಾಗರ ಪಟ್ಟಣವಿದೆ. ಶಿವಮೊಗ್ಗ ಜಿಲ್ಲೆಯಲ್ಲಿರುವ ಈ ಪಟ್ಟಣವು ಪ್ರವಾಸಿಗರಿಗೆ ಉತ್ತಮ ಪ್ರವಾಸಿ ತಾಣವಾಗಿದೆ. ಸಾಗರ ಪಟ್ಟಣವು ಐತಿಹಾಸಿಕ ಸ್ಥಳಗಳಾದ ಇಕ್ಕೇರಿ ಹಾಗೂ ಕೆಳದಿಯ ಹತ್ತಿರದಲ್ಲಿಯೇ ಇದೆ. ಇಲ್ಲಿರುವ ಸದಾಶಿವ ಸಾಗರ ಕೆರೆಯು ಕೆಳದಿಯನ್ನು ಆಳಿದ ರಾಜವಂಶದ ದೊರೆ ಸದಾಶಿವ ನಾಯಕ್ ಎಂಬವನಿಂದ ಸ್ಥಾಪಿಸಲ್ಪಟ್ಟಿತು. ಆದರೆ ಈಗ ಈ ಕೆರೆಯನ್ನು ಗಣಪತಿ ಕೆರೆ ಎಂದು ಕರೆಯಲಾಗುತ್ತದೆ.
ಪ್ರವಾಸಿಗರ ಹಾಗೂ ಯಾತ್ರಾರ್ಥಿಗಳ ನಡುವಿನಲ್ಲಿ ಅತ್ಯಂತ ಪ್ರಸಿದ್ಧವಾದ ಮಾರಿಕಾಂಬ ದೇವಾಲಯ ಹಾಗೂ ಮಹಾಗಣಪತಿ ದೇವಾಲಯಗಳು ಕೂಡಾ ಇಲ್ಲಿ ಕಂಡುಬರುತ್ತವೆ. ವರದಾ ನದಿಯು ಹುಟ್ಟುವ ವರದಾಮೂಲದಲ್ಲಿಯೇ ಪಟ್ಟಣವನ್ನು ಕಾಣಬಹುದು. ಸಾಗರ ಪಟ್ಟಣವು ಸಂಪೂರ್ಣವಾಗಿ ಶುದ್ಧವಾದ ನೀರು ಹಾಗೂ ದಟ್ಟ ಕಾಡಿನಿಂದ ಸುತ್ತುವರಿದಿದೆ. ವರದಾ ನದಿಯು ಬುಗ್ಗೆಗಳು ಪ್ರಾಚೀನ ನೈಸರ್ಗಿಕ ಸೌಂದರ್ಯವನ್ನು ಮರುಕಳಿಸುವಂತೆ ಮಾಡುತ್ತವೆ, ಪ್ರೇಕ್ಷಕರನ್ನು ಉತ್ಸಾಹಿಗಳನ್ನಾಗಿ ಮಾಡುತ್ತದೆ.