ಅಕ್ಬರನ ಪಟ್ಟಾಭಿಷೇಕ ಈ ಜಾಗದಲ್ಲಾಯಿತು. ಈ ಪಟ್ಟಾಭಿಷೇಕವು ಅಕ್ಬರನ ತಂದೆಯ ಮರಣಾನಂತರ ಇಲ್ಲಿ ನಡೆಯಿತು. ಈ ಸಮಾರಂಭವು 14 ನೇ ಫೆಬ್ರವರಿ 1556 ರಂದು ನಡೆಯಿತು. ಅಕ್ಬರ್ ಆ ವೇಳೆಗೆ 13 ವರ್ಷದವನಾಗಿದ್ದ. ಅಕ್ಬರನು ಅವನ ತಂದೆಯ ಅಂತ್ಯದವೇಳೆಗೆ ತನ್ನ ಗುರುವಾದ ಬೈರಾಮ್ ಖಾನ್ ರೊಂದಿಗೆ ಇಲ್ಲಿ ಬಂದಿದ್ದನು. ಅವರು ಗುರುದಾಸ್ಪುರದ ಹತ್ತಿರದ ಕಾಲೋನುರ್ ಎಂಬಲ್ಲಿ ಉಳಿದುಕೊಂಡಿದ್ದರು. ಅದು ನಗರದಿಂದ 25 ಕಿ.ಮೀ. ದೂರದಲ್ಲಿದೆ. ಈಗ ಅದನ್ನು ಭಾರತದ ಪುರಾತತ್ವ ಇಲಾಖೆ ಕಾಪಾಡಿಕೊಂಡು ಬಂದಿದೆ.