ಇದು ಗುರುದಾಸ್ಪುರದಿಂದ 45 ಕಿ.ಮೀ. ದೂರ ಇದ್ದು, ಇದನ್ನು ಗುರುನಾನಕ್ ದೇವರನ್ನು ಪ್ರಾರ್ಥಿಸಿ ಕೊಂಡಾಡುವುದಕ್ಕಾಗಿ ಕಟ್ಟಲಾಗಿದೆ. ಅವರು ಇಲ್ಲಿ ಸುಮಾರು 12 ವರ್ಷಗಳ ಕಾಲ ಇದ್ದರೆನ್ನಲಾಗುತ್ತದೆ. ಅವರು ಮೆಕ್ಕಾ ಯಾತ್ರೆ ಕೈಗೊಂಡಾಗ ಸ್ವಿಕರಿಸಿದ್ದ ವಸ್ತ್ರಗಳನ್ನು ಇಲ್ಲಿ ಕಾಪಾಡಿಕೊಂಡು ಬಂದಿದ್ದಾರೆ. ಇಲ್ಲಿ ಜನವರಿ ಎರಡನೇ ವಾರದ ಮಾಘಿಯ ಸಂದರ್ಭದಲ್ಲಿ ಬಹಳಷ್ಟು ಜನ ಸೇರುತ್ತಾರೆ. ಇದರ ಆವರಣದಲ್ಲಿ ಗುರುದ್ವಾರ ತಾಹ್ಲಿ ಸಾಹಿಬ್ ಅನ್ನು ನಿರ್ಮಿಸಿದ್ದಾರೆ . ಇದು ರಾವಿ ನದಿಯ ಎಡ ದಂಡೆಯಲ್ಲಿದೆ.
ಇದು ಪಾಕಿಸ್ತಾನದ ಗಡಿಗೆ ಹೊಂದಿಕೊಂಡಂತಿದೆ. ಗುರುಜಿಯವರು ಇಲ್ಲಿ ವಾಸ ಮಾಡುತ್ತಾ ಇದ್ದರಂತೆ ಹಾಗು ತಮ್ಮ ಕೊನೆಯ ಗಳಿಗೆಯನ್ನು ದೇರಾ ಬಾಬಾ ನಾನಕ್ ನ ಎದುರಿಗೆ ಕಳೆದರೆನ್ನಲಾಗುತ್ತದೆ. ಇದನ್ನು ಗುರುಜಿಯವರು 'ಕರ್ತಾರ್ಪುರ್' ಎಂದು ಕರೆದರು. ಇದು ನಂತರ ಪಾಕಿಸ್ತಾನಕ್ಕೆ ಸೇರಿಹೋಯಿತು. ಗುರುಜಿಯವರ ಹಿಂಬಾಲಕರು ಒಂದು ಹೊಸ ಊರನ್ನು ಕಟ್ಟಿ ಅದಕ್ಕೆ ಈಗಿನ ಹೆಸರನ್ನು ನೀಡಿದ್ದಾರೆ. ಪಾಕಿಸ್ತಾನದಲ್ಲಿರುವ ಕರ್ತಾರ್ಪುರ್ ಗುರುದ್ವಾರವನ್ನು ಇಲ್ಲಿಂದಲೇ ನೋಡಬಹುದು.