ಸರ್ಜಿ ಸಾಹಿಬ್ ಗುರುದಾಸ್ಪುರ್ ಜಿಲ್ಲೆಯಲ್ಲಿದೆ. ಇಲ್ಲಿ ಬಾಬಾ ಅಜಿತ್ ರಾಂಧವ ಅವರು ನಿರ್ಮಿಸಿದ ಒಂದು ಬಾವಿಯಿದೆ. ಇದು ಈಗ ಒಂದು ಬಾವೊಲಿಯನ್ನು ಹೋಲುತ್ತದೆ. ಈ ಬಾವಿಯ ಹತ್ತಿರ ಗುರು ನಾನಕರು ಉಪನ್ಯಾಸ ನೀಡುತ್ತಿದ್ದರೆಂದು ಹೇಳುತ್ತಾರೆ. ಹಾಗು ಅವರು ಸರ್ಜಿ ಸಾಹಿಬ್ ನಲ್ಲಿ ಪ್ರಾರ್ಥನೆಯನ್ನು ಸಲ್ಲಿಸುತ್ತಿದ್ದರು. ಬಾಬ ಅಜಿತ್ ರಾಂಧವರವರು ಸಿಖ್ ಧಾರ್ಮಿಕ ಪಂಥ ಬಗ್ಗೆ ತಿಳುವಳಿಕೆಯನ್ನು ಗುರುನಾನಕ್ ರಿಂದ ಇಲ್ಲಿ ಪಡೆದರು.