ಸುಖ್ನಾ ಸರೋವರ ಮತ್ತು ಕ್ಯಾಪಿಟಲ್ ಕಾಂಪ್ಲೆಕ್ಸ್ ಮಧ್ಯೆ ಸೆಕ್ಟರ್ 1ರಲ್ಲಿ ಈ ರಾಕ್ ಗಾರ್ಡನ್ ಇದೆ. ಇದು ನಗರದ ಅತ್ಯಂತ ಆಕರ್ಷಣೀಯ ತಾಣ. 40 ವರ್ಷ ಮೊದಲು ನೆಕ್ ಚಾಂದ್ ಎನ್ನುವವರು ಈ ಗಾರ್ಡನ್ ನನ್ನು ನಿರ್ಮಿಸಿದ್ದು, ಕೈಗಾರಿಕೆ ಮತ್ತು ನಗರದ ತ್ಯಾಜ್ಯವನ್ನು ಉಪಯೋಗಿಸಿಕೊಂಡು ಮಾಡಿದಂತಹ ಹಲವಾರು ಕಲಾಕೃತಿಗಳು ಇದರಲ್ಲಿದೆ....
ಈ ಗುಲಾಬಿ ಉದ್ಯಾನವನ್ನು ಚಂದೀಗಢ್ ನಲ್ಲಿ 1967ರಲ್ಲಿ ನಿರ್ಮಿಸಲಾಗಿತ್ತು. ಇದು ಏಶ್ಯಾದಲ್ಲಿರುವ ಅತ್ಯಂತ ದೊಡ್ಡ ಗುಲಾಬಿ ಉದ್ಯಾನವಾಗಿದೆ. ಜಾಕೀರ್ ಹುಸೈನ್ ಗುಲಾಬಿ ತೋಟವೆಂದು ಕರೆಯಲ್ಪಡುವ ಈ ಉದ್ಯಾನ ಸುಮಾರು 17 ಎಕ್ರೆ ಜಾಗದಲ್ಲಿದೆ. ಇದರಲ್ಲಿ ಸುಮಾರು 17 ಸಾವಿರ ವಿಧದ ಗಿಡಗಳಿದ್ದು, 1600 ವಿಧದ ಹೂಗಳಿವೆ. ಗುಲಾಬಿ...
ಸುಖ್ನಾ ಅಭಯಾರಣ್ಯವು ಸುಖ್ನಾ ಸರೋವರದ ಈಶಾನ್ಯ ಭಾಗದಲ್ಲಿದ್ದು, ಚಂದೀಗಢ್ ನ ವಿಸ್ತಾರವಾದ ರಕ್ಷಿತಾರಣ್ಯವಾಗಿದೆ. ಸುಖ್ನಾ ಸರೋವರದ ನೀರುಕಟ್ಟಿನ ಒಂದು ಭಾಗದಲ್ಲಿ ಈ ಪ್ರದೇಶವನ್ನು ಲಿ ಕೊರ್ಬಸೈಯರ್ 1958ರಲ್ಲಿ ನಿರ್ಮಿಸಿದರು. ಆದರೆ 1998ರಲ್ಲಿ ಇದನ್ನು ವನ್ಯಜೀವಿಗಳ ಅಭಯಾರಣ್ಯವೆಂದು ಘೋಷಿಸಲಾಯಿತು.
ಶಿವಾಲಿಕ್ ನ...
ಛತ್ಬೀರ್ ಮೃಗಾಲಯವು ನಗರದಿಂದ 17 ಕಿ.ಮೀ. ದೂರದಲ್ಲಿ ಮೊಹಾಲಿ ಜಿಲ್ಲೆಯಲ್ಲಿ ಚಂದೀಗಢ್-ಜಿರ್ಕಾಪುರ್-ಪಾಟಿಯಾಲ ರಸ್ತೆಯಲ್ಲಿದೆ. 1977ರ ಎಪ್ರಿಲ್ 13ರಂದು ಉದ್ಘಾಟನೆಗೊಂಡ ಈ ಮೃಗಾಲಯಕ್ಕೆ ಪಂಜಾಬ್ ನ ಅಂದಿನ ರಾಜ್ಯಪಾಲರಾದ ಮಹೇಂದ್ರ ಚೌಧರಿ ಝೂಲಾಜಿಕಲ್ ಪಾರ್ಕ್ ಎಂದು ಹೆಸರಿಡಲಾಗಿತ್ತು. ಈ ಮೃಗಾಲಯವು ಸುಮಾರು 202 ಎಕ್ರೆ...
ಚಂದೀಗಢ್ ನ ಸೆಕ್ಟರ್ 1ರಲ್ಲಿರುವ ಕ್ಯಾಪಿಟಲ್ ಕಾಂಪ್ಲೆಕ್ಸ್ ರಚನೆ ಕಣ್ಣಿಗೆ ಮುದ ನೀಡುತ್ತದೆ. ಪಂಜಾಬ್ ಮತ್ತು ಹರ್ಯಾಣ ಸರ್ಕಾರಗಳೆರಡರ ವಿಧಾನಸಭೆಗಳು ಇಲ್ಲಿದೆ. ಇದರ ವಾಸ್ತು ವೈಭವದ ಶ್ರೇಯಸ್ಸು ಸಂಪೂರ್ಣವಾಗಿ ಲಿ ಕೊರ್ಬಸೈಯರ್ ಅವರಿಗೆ ಸಲ್ಲುತ್ತದೆ. ಈ ಕಟ್ಟಡವು ಯೋಜಿತ ಚಂದೀಗಢ್ ನಗರದ ಪ್ರತಿಬಿಂಬದಂತಿದೆ.
ಸಂಕೀರ್ಣದ...
ಚಂದೀಗಢ್ ನ ಹೊರವಲಯದಲ್ಲಿ ಕನ್ಸಾಲ್ ಎನ್ನುವ ಸಣ್ಣ ಹಳ್ಳಿಯಿದೆ. ಪಂಜಾಬ್ ನಿಂದ ಈ ಪ್ರದೇಶವನ್ನು ಕೇಂದ್ರಾಡಳಿತ ಪ್ರದೇಶಕ್ಕೆ ಲೀಸ್ ಗೆ ನೀಡಿದೆ. ಈ ಹಳ್ಳಿಯಲ್ಲಿ ನಿಸರ್ಗದತ್ತ ಮೀಸಲು ಪ್ರದೇಶವಿದ್ದು, ಇದನ್ನು ಕನ್ಸಾಲ್ ಅರಣ್ಯವೆಂದು ಕರೆಯುತ್ತಾರೆ. ಕತ್ತೆಕಿರುಬ, ಹುಲ್ಲೆ, ನೀಲ ಜಿಂಕೆ ಮತ್ತು ಮೊಲ ಸಹಿತ ಹಲವಾರು ಜಾತಿಯ...
ಕನ್ಸಲ್ ಹಳ್ಳಿಯಿಂದ ಸ್ವಲ್ಪ ದೂರದಲ್ಲೇ ನೆಪ್ಲಿ ಇದೆ. 3245 ಹೆಕ್ಟೇರ್ ನ ಅರಣ್ಯ ಪ್ರದೇಶ ಚಂದೀಗಢ್ ನ ಉತ್ತರದ ಅಂಚಿನಲ್ಲಿದೆ. ಹರ್ಯಾಣದಿಂದ ಲೀಸ್ ಪಡೆಯಲಾಗಿರುವ ಈ ನೈಸರ್ಗಿಕ ಮೀಸಲು ಅರಣ್ಯವು ಕನ್ಸಲ್ ಅರಣ್ಯಕ್ಕಿಂತ ದಟ್ಟ ಹಾಗೂ ವಿಸ್ತಾರವಾಗಿದೆ. ಸಾರಂಗ, ಕತ್ತೆಕಿರುಬ, ನರಿ, ಮೊಲ, ನೀಲಜಿಂಕೆ ಸಹಿತ ವೈವಿಧ್ಯಮ...
ಚಂದೀಗಢ್ ನ ಸೆಕ್ಟರ್ 10ರಲ್ಲಿರುವ ಸರ್ಕಾರಿ ಮ್ಯೂಸಿಯಂ ಮತ್ತು ಆರ್ಟ್ ಗ್ಯಾಲರಿ ಜನಪ್ರಿಯ ಪ್ರವಾಸಿ ತಾಣ. ಇದನ್ನು ನಿರ್ಮಿಸಿದ ಶ್ರೇಯಸ್ಸು ಲಿ ಕೊರ್ಬಸೈಯರ್ ಅವರಿಗೆ ಸಲ್ಲುತ್ತದೆ. ಈ ಅತ್ಯಾಕರ್ಷಕ ಕಟ್ಟಡದಲ್ಲಿ ದೊಡ್ಡದಾದ ಭೇಟಿ ಕೊಠಡಿ, ಒಂದು ಸಂರಕ್ಷಣಾ ಪ್ರಯೋಗಾಲಯ, ಲಾಬಿ, ಮೀಸಲು ಸಂಗ್ರಹ ಶೇಖರಣೆ, ತಾತ್ಕಾಲಿಕ ಪ್ರದರ್ಶನ...
ಜೀವವಿಕಸನ ಮ್ಯೂಸಿಯಂ ಹೆಸರು ಸೂಚಿಸುವಂತೆ ಸಿಂಧೂ ಕಣೆವೆ ನಾಗರಿಕತೆಯಿಂದ ಹಿಡಿದು ವರ್ತಮಾನದ ಮನುಷ್ಯನ ಉಗಮದ ವಿವರಗಳನ್ನು ನೀಡುತ್ತದೆ. 1973ರಲ್ಲಿ ಸರ್ಕಾರಿ ಮ್ಯೂಸಿಯಂ ಮತ್ತು ಆರ್ಟ್ ಗ್ಯಾಲರಿಯ ಅಂಗವಾಗಿ ಇದನ್ನು ಸ್ಥಾಪಿಸಲಾಯಿತು. ಏಕಕೋಶೀಯ ಜೀವಿಯಿಂದ ಮನುಷ್ಯನ ಜೀವವಿಕಸನ ಮತ್ತು ಜೈವಿಕ ವೈವಿಧ್ಯತೆಯನ್ನು ಬಿಂಬಿಸುವ ಮನೆ...
ಅಂತಾರಾಷ್ಟ್ರೀಯ ಗೊಂಬೆ ಮ್ಯೂಸಿಯಂ ಸೆಕ್ಟರ್ 23ರಲ್ಲಿ ಬಾಲಭವನದಲ್ಲಿದೆ. ಇದು ಚಂದೀಗಢ್ ನಲ್ಲಿರುವ ಭಾರತೀಯ ಮಕ್ಕಳ ಕಲ್ಯಾಣ ಇಲಾಖೆ ನಿಯಂತ್ರಣದಲ್ಲಿದೆ. ಮಕ್ಕಳಿಗೆ ಮನರಂಜನೆ ನೀಡುವ ಉದ್ದೇಶದಿಂದ 1985ರಲ್ಲಿ ಇದನ್ನು ಆರಂಭಿಸಲಾಗಿತ್ತು. ಈ ಮ್ಯೂಸಿಯಂನಲ್ಲಿ ಅಪಾರ ಪ್ರಮಾಣದ ಗೊಂಬೆಗಳು ಹಾಗೂ ಆಟಿಕೆಗಳಿವೆ. ಜರ್ಮನಿ, ಸ್ಪೇನ್,...
ಗುರುದ್ವಾರ ಕೂಹ್ನಿನ್ನು ಬಗೀಚಾ ಸಾಹಿಬ್ ಎಂದು ಕರೆಯುತ್ತಾರೆ. ಇಲ್ಲಿ ಗುರು ಗೋವಿಂದ ಸಿಂಗ್ ಜಿ ಅವರು ತನ್ನ ಸೈನಿಕರೊಂದಿಗೆ ಒಂದು ವಾರ ತನಕ ವಾಸ್ತವ್ಯ ಹೂಡಿದ್ದರಂತೆ. ಪುರಾಣಗಳ ಪ್ರಕಾರ ತನ್ನ ಪತಿ ರಾಮ್ ರಾಯ್ ನ್ನನು ಬಿಟ್ಟು ಡೆಹ್ರಾಡೂನ್ ನಿಂದ ಇಲ್ಲಿಗೆ ಬಂದು ನೆಲೆ ನಿಂತಿದ್ದ ಮಾತಾ ರಾಜ್ ಕೌರ್ ಅವರನ್ನು ಭೇಟಿ ಮಾಡಲು...