ಬಿಂದು, ಭಾರತ-ಭೂತಾನ್ ಗಡಿಯಲ್ಲಿರುವ ಕೊನೆಯ ಹಳ್ಳಿ. ಇದು ದೆ. ಈ ಪ್ರದೇಶದ ಬಗೆಗಿನ ಪ್ರತಿಯೊಂದೂ ಅದ್ಭುತವೇ. ಈ ಪ್ರದೇಶಕ್ಕೆ ಭೇಟಿ ನೀಡುತ್ತಿದ್ದಂತೆ ಇದರ ಸೌಂದರ್ಯಕ್ಕೆ ಪ್ರತಿಯೊಬ್ಬರೂ ಮರುಳಾಗುತ್ತಾರೆ.ಪ್ರವಾಸಿಗರು ಇಲ್ಲಿಂದ ಮುಂದಕ್ಕೆ ಭೂತಾನ್ ಪ್ರವಾಸ ಕೈಗೊಳ್ಳಲು ಸಹ ಬಯಸಬಹುದು. ಇಲ್ಲಿಗೆ ಹೋಗುವ ಮಾರ್ಗವು ಟೀ ಎಸ್ಟೇಟಗಳ ನಡುವೆ ಸಾಗುತ್ತದೆ ಮತ್ತು ಈ ಹಾದಿಯಲ್ಲಿ ಸಿಗುವ ಪ್ರಶಾಂತ ಸುಂದರ ಹಳ್ಳಿಗಳು ಬಿಂದುವಿನ ಪ್ರಯಾಣವನ್ನು ಸ್ಮರಣೀಯವಾಗಿಸುತ್ತದೆ.
ಸುತ್ತಮುತ್ತಲ ಪ್ರೇಕ್ಷಣೀಯ ಸ್ಥಳಗಳು
ಈ ಹಳ್ಳಿಯಲ್ಲಿ ಹರಿಯುವ ಜಲ್ಧಾಕ ಝರಿಯು ಇಲ್ಲಿನ ಸುಂದರ ಸ್ಥಳಗಳಲ್ಲೊಂದು. ಛಾಯಾಗ್ರಾಹಕರು ಇಲ್ಲಿ ಸುಂದರ ಫೋಟೋಗಳನ್ನು ತೆಗೆಯುವ ಸಲುವಾಗಿಯೇ ಇಲ್ಲಿಗೆ ಭೇಟಿ ನೀಡುತ್ತಾರೆ. ಜಲ್ಧಾಕ ನದಿಗೆ ಅಡ್ಡಲಾಗಿಯೇ ಬಿಂದು ಅಣೆಕಟ್ಟನ್ನು ಕಟ್ಟಲಾಗಿದೆ. ಜಲ್ಧಾಕ ಹೈಡಲ್ ಪ್ರಾಜೆಕ್ಟ್ಗೆ ಈ ನದಿಯ ನೀರೇ ಆಧಾರ.
ಬಿಂದುವಿನಲ್ಲಿ ಚಾರಣ
ಬಿಂದುವಿನಲ್ಲಿರುವ ಕೆಲವು ಗುಂಪುಗಳು ಇಲ್ಲಿ ಕೆಲವು ಚಿಕ್ಕ ಚಿಕ್ಕ ಚಾರಣಗಳನ್ನು ಏರ್ಪಡಿಸುತ್ತವೆ. ಟೊಡೆಯಿಂದ ತಾಂಗ್ತಾಗೆ ಹೋಗುವ ಚಾರಣ ಮತ್ತು ನೆರೊರ ಕಣಿವೆಯ ರಾಷ್ಟ್ರೀಯ ಉದ್ಯಾನವನದ ಚಾರಣಗಳು ಪ್ರಸಿದ್ಧವಾದುದು. ಇವು ಹಿಮಾಲಯದ ತಪ್ಪಲಿನ ಕೆಳಭಾಗದ ಪ್ರದೇಶವಾದ ಕಾಲಿಂಪಾಂಗ್ನಲ್ಲಿ ನಡೆಯುವ ಚಾರಣಗಳು.
ವಸತಿ ಮತ್ತು ವ್ಯಾಪಾರ
ಬಿಂದುವಿನಲ್ಲಿ ಕೆಲವು ಹೋಟೆಲ್ಗಳು ಉತ್ತಮ ವಸತಿಯನ್ನು ಒದಗಿಸುತ್ತವೆ. ಸಿವಾಜಿ ಇನ್ ಎನ್ನುವ ಹೋಟೆಲ್ ಉತ್ತಮ ಪ್ಯಾಕೇಜ್ ಒದಗಿಸುತ್ತದೆ. ಬಿಂದುವಿನಲ್ಲಿ ಸಣ್ಣ ಮಾರುಕಟ್ಟೆಯಿದ್ದು ಇಲ್ಲಿನ ಸಾಂಪ್ರದಾಯಿಕ ವಸ್ತುಗಳನ್ನು ಇಲ್ಲಿ ಕಾಣಬಹುದು. ಬಿಂದು ಸಿಲಿಗುರಿಗೆ ಸಮೀಪದಲ್ಲಿದ್ದು ಇಲ್ಲಿ ವಿಮಾನ ನಿಲ್ದಾಣವಿದೆ. ಸಿಲಿಗುರಿಯಿಂದ ಬಿಂದುವಿಗೆ ಮೂರು ಗಂಟೆಗಳ ಪ್ರಯಾಣ.
ಹವಾಮಾನ
ಬಿಂದುವಿಗೆ ಭೇಟಿ ನೀಡಲು ಉತ್ತಮ ಸಮಯ ಅಕ್ಟೋಬರ್ ನಂತರದ ದಿನಗಳು.
ತಲುಪುವುದು ಹೇಗೆ?
ಬಿಂದುವು ಉತ್ತಮ ರಸ್ತೆ ಸಂಪರ್ಕ ಹೊಂದಿದೆ. ರೈಲು ಮತ್ತು ವಿಮಾನದ ಮೂಲಕ ಬರಲಿಚ್ಛಿಸುವ ಪ್ರಯಾಣಿಕರು ಸಿಲಿಗುರಿಗೆ ಬಂದು ಅಲ್ಲಿಂದ ಇಲ್ಲಿಗೆ ಬರಬೇಕು.


Click it and Unblock the Notifications