ಅಂಬಸಮುದ್ರಂ ಪಕ್ಕದಲ್ಲಿರುವ ಪಶ್ಚಿಮಘಟ್ಟಗಳಲ್ಲಿರುವ ಪೊತ್ತಿಗೈ ಬೆಟ್ಟಗಳ ಮೂಲಕ ಹರಿದುಬರುವ ತಮಿರಂಬರಣಿ ನದಿಗೆ ಅಡ್ಡಲಾಗಿ ಕಟ್ಟಲಾಗಿರುವ ಅಣೆಕಟ್ಟು. ಈ ಪ್ರದೇಶದಲ್ಲಿ ಸಂತ ಅಗಸ್ತಿಯರ್ ರಿಗೆ ಶಿವ ಪಾರ್ವತಿಯರು ಪ್ರತ್ಯಕ್ಷರಾಗಿದ್ದರು ಎಂಬ ಪ್ರಪೀತಿಯಿರುವುದರಿಂದ ಧಾರ್ಮಿಕ ಮಹತ್ವವನ್ನೂ ಪಡೆದುಕೊಂಡಿದೆ. ಈ ಭೇಟಿಯ ಕುರುಹಾಗಿ ಸಂತ ಅಗಸ್ತಿಯರ್ ಹೆಸರಿನ ದೇವಾಲಯವನ್ನೂ ಕಟ್ಟಲಾಗಿದೆ. ಪಕ್ಕದಲ್ಲಿಯೇ ಅಗಸ್ತಿಯರ್ ಜಲಪಾತವೂ ಇದೆ. ಈ ಸ್ಥಳದಲ್ಲಿ ಮಿಂದು ಅಗಸ್ತಿಯರ್ ದೇವಾಲಯವನ್ನು ಸಂದರ್ಶಿಸುವುದರಿಂದ ಪಾಪಗಳು ಪರಿಹಾರವಾಗುವುದು ಎಂಬ ನಂಬಿಕೆಯಿಂದಲೇ ಈ ಸ್ಥಳಕ್ಕೆ ಪಾಪನಾಸಂ (ಪಾಪದ ನಾಶ) ಎಂಬ ಹೆಸರು ಬಂದಿದೆ. ಈ ದೇವಾಲಯದಲ್ಲಿ ವಿವಾಹವಾಗುವುದು ಮಂಗಳಕರ ಎಂಬ ನಂಬಿಕೆಯಿರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಈ ದೇವಾಲಯದಲ್ಲಿ ನವದಂಪತಿಗಳು ವೈವಾಹಿಕ ಬಂಧನಕ್ಕೆ ಒಳಗಾಗುತ್ತಾರೆ.