ನಗರ ಅರಮನೆಯನ್ನು ವಿನಯ ವಿಲಾಸ ಮಹಲ್ ಎಂದೂ ಕೂಡಾ ಕರೆಯಲಾಗುತ್ತದೆ. ಇದು ಮಹಾರಾಜ ನಗರ ಜೀವನದ ವೈಭೋಗವನ್ನು ಸಾರುತ್ತದೆ. 1793ರಲ್ಲಿ ರಾಜ ಭಕ್ತಾವರರಿಂದ ಅತಿ ದೊಡ್ಡದಾದ ಮೂರ್ತಿಯನ್ನು ನಿರ್ಮಿಸಲಾಗಿದೆ. ಈ ಅರಮನೆಯು ಅದ್ಭುತವಾದ ಇತಿಹಾಸವನ್ನು ಹೊಂದಿದೆ. ಮೊಘಲ್ ರಾಜರುಗಳಾದ ಬಾಬರ್ , ಜಹಾಂಗೀರ ಮತ್ತು ರಜಪೂತ ರಾಜ ಮಹಾರಾಹ ಪ್ರತಾಪ ಸಿಂಗ್ರು ಈ ಕೋಟೆಯಲ್ಲಿ ಕಾಲ ಕಳೆದಿದ್ದಾರೆ.ಸುಂದರವಾದ ರಚನೆಯು ಪ್ರಸಿದ್ಧವಾಗಿದ್ದು ಕೋರ್ಟ್ಯಾರ್ಡ್ನಲ್ಲಿರುವ ತನ್ನ ಕಮಲ ಗೋಪುರದಿಂದಾಗಿ. ದೈತ್ಯಾಕಾರದ ಅರಮನೆಯು ಮ್ಯೂರಲ್ ವರ್ಕ್ನಿಂದಾಗಿ ಮತ್ತು ಕನ್ನಡಿಗಳಿಂದಾಗಿ ನೋಡುಗರಿಗೆ ಹಬ್ಬ. ಹಾಗೇ ಇಲ್ಲಿ ಅಪಾರವಾದ ಸೂಕ್ಷ್ಮ ಕೆತ್ತನೆಗಳಿವೆ. ಅರಮನೆಯ ಭಂಡಾರವು ಚಿನ್ನದ ಆಭರಣಗಳು, ವೆಲ್ವೆಟ್ ಸಿಂಹಾಸನ ಮತ್ತು ಏಕಶಿಲೆಯಿಂದ ಮಾಡಿದ ಅಪಾರ ಪ್ರಮಾಣದ ತಟ್ಟೆಗಳನ್ನು ಹೊಂದಿದೆ. ಮಾವುತ ಮತ್ತು ನಾಲ್ಕು ಆನೆಗಳ ನೈಜ ಆಕೃತಿಯಿದೆ. ಈ ಅರಮನೆಯಲ್ಲಿ ಈಗ ರಾಜಮನೆತನದ ನೆನಪುಗಳನ್ನು, ಐತಿಹಾಸಿಕ ಸಂಸ್ಕೃತಿಯನ್ನು, ಅಮೂಲ್ಯವಾದ ಸಾಮಗ್ರಿಗಳನ್ನು ಮತ್ತು ಕೆಲವು ಅಪರೂಪದ ಹಸ್ತಪ್ರತಿಗಳನ್ನು ಸಂಗ್ರಹಿಡಲಾಗಿದೆ.