Search
  • Follow NativePlanet
Share
» » ತಮಿಳುನಾಡಿನಲ್ಲಿ ಪ್ರಸಿದ್ಧಿ ಹೊಂದಿರುವ 10 ಸಂಗತಿಗಳು

ತಮಿಳುನಾಡಿನಲ್ಲಿ ಪ್ರಸಿದ್ಧಿ ಹೊಂದಿರುವ 10 ಸಂಗತಿಗಳು

ಉದ್ದದ ಕರಾವಳಿ ಮತ್ತು ಅಸಾಧಾರಣ ಬೆಟ್ಟಗಳು, ಬೀಚ್‌ಗಳು ತಮಿಳುನಾಡಿನ ಪ್ರಸಿದ್ಧಿಯನ್ನು ಹೆಚ್ಚಿಸಿವೆ. ಆದರೆ ಈ ದೃಶ್ಯಗಳಿಂದ ಹೊರತುಪಡಿಸಿ, ತಮಿಳುನಾಡು ವಿಶಿಷ್ಟವಾದ ಕೆಲವು ಸ್ಥಳಗಳು ಮತ್ತು ವಸ್ತುಗಳಿಗೆ ಪ್ರಸಿದ್ಧಿ ಪಡೆದಿದೆ.

ದೇವಾಲಯಗಳ ನಗರಿ ಎಂದೇ ಪ್ರಸಿದ್ಧವಾಗಿರುವ ತಮಿಳುನಾಡು ಸಾಕಷ್ಟು ಪ್ರವಾಸಿ ತಾಣಗಳನ್ನು ಹೊಂದಿದೆ. ಉದ್ದದ ಕರಾವಳಿ ಮತ್ತು ಅಸಾಧಾರಣ ಬೆಟ್ಟಗಳು, ಬೀಚ್‌ಗಳು ತಮಿಳುನಾಡಿನ ಪ್ರಸಿದ್ಧಿಯನ್ನು ಹೆಚ್ಚಿಸಿವೆ. ಆದರೆ ಈ ದೃಶ್ಯಗಳಿಂದ ಹೊರತುಪಡಿಸಿ, ತಮಿಳುನಾಡು ವಿಶಿಷ್ಟವಾದ ಕೆಲವು ಸ್ಥಳಗಳು ಮತ್ತು ವಸ್ತುಗಳಿಗೆ ಪ್ರಸಿದ್ಧಿ ಪಡೆದಿದೆ. ಪ್ರವಾಸಿಗರು ಅಥವಾ ಯಾತ್ರಾರ್ಥಿಗಳು ತಮಿಳುನಾಡಿಗೆ ಭೇಟಿ ಮಾಡಿದಾಗ ತಮಿಳುನಾಡಿನ ಅನನ್ಯತೆ ಮತ್ತು ರಾಜ್ಯದ ಪ್ರಸಿದ್ಧಿಯನ್ನು ಹೊಂದಿರುವ ಈ ವಿಷಯಗಳನ್ನು ಪರೀಕ್ಷಿಸಲು ಮರೆಯದಿರಿ.

ಮೀನಾಕ್ಷಿ ಅಮ್ಮನ್ ದೇವಾಲಯ

ಮೀನಾಕ್ಷಿ ಅಮ್ಮನ್ ದೇವಾಲಯ

ಮಧುರೈ ಮೀನಾಕ್ಷಿ ಅಮ್ಮನ್ ದೇವಾಲಯ ತಮಿಳುನಾಡಿನ ಅತ್ಯಂತ ಜನಪ್ರಿಯ ಪ್ರವಾಸಿ ಆಕರ್ಷಣೆಗಳಲ್ಲಿ ಒಂದಾಗಿದೆ. ದಕ್ಷಿಣ ಭಾರತದ ದೇವಸ್ಥಾನದ ವಾಸ್ತುಶಿಲ್ಪವು ಉತ್ತರ ಭಾರತದಲ್ಲಿನ ತಾಜ್ ಮಹಲ್ನಂತೆಯೇ ಇದೆ. ದೇವಾಲಯದ ಸಂಕೀರ್ಣವು ಎತ್ತರದ ನಿಂತಿರುವ 12 ಗೋಪುರಗಳನ್ನು ಹೊಂದಿರುವ ಆರು ಹೆಕ್ಟೇರ್ ಭೂಪ್ರದೇಶದಲ್ಲಿ ವ್ಯಾಪಿಸಿದೆ.

ಅಂಬುರ್ ದಮ್ ಬಿರಿಯಾನಿ ವೆಲ್ಲೂರ್

ಅಂಬುರ್ ದಮ್ ಬಿರಿಯಾನಿ ವೆಲ್ಲೂರ್

PC:Umesh Tongbra
ತಮಿಳುನಾಡಿನ ವೆಲ್ಲೂರ್ ಜಿಲ್ಲೆಯ ಅಂಬುರ್ ದಮ್ ಬಿರಿಯಾನಿ ಆಹಾರ ಪ್ರಿಯರಲ್ಲಿ ಹೆಸರುವಾಸಿಯಾಗಿದೆ. ಇದು ತಮಿಳುನಾಡಿನ ವೆಲ್ಲೂರು ಜಿಲ್ಲೆಯ ಅಂಬುರ್ ಎಂಬ ಸಣ್ಣ ಪಟ್ಟಣದಲ್ಲಿದೆ. ವಿಶೇಷ ದಕ್ಷಿಣ ಭಾರತೀಯ ಬಿರಿಯಾನಿಗಳಲ್ಲಿ ವೆಲ್ಲೂರು ಅಂಬುರ್ ಚಿಕನ್ ಬಿರಿಯಾನಿ ಕೂಡಾ ಒಂದು.

ಕಾಂಚೀಪುರಂ ಸಾರಿ

ಕಾಂಚೀಪುರಂ ಸಾರಿ ಅಥವಾ ಕಂಜಿವರಮ್ ಸಾರಿ, ಕಾಂಚೀಪುರಂನಿಂದ ನೇಕಾರರು ಸಾಂಪ್ರದಾಯಿಕವಾಗಿ ನೇಯ್ದ ಒಂದು ಸೀರೆ. ಈ ಸೀರೆಗಳು ತಮ್ಮ ಸಂಕೀರ್ಣವಾದ ವಿನ್ಯಾಸಗಳು, ಬಣ್ಣಗಳು, ಜರಿ ಮತ್ತು ಚಿನ್ನದ ಥ್ರೆಡ್‌ನಂತ ವಸ್ತುಗಳನ್ನು ಬಳಸಲಾಗುತ್ತವೆ.

ಕಾರೈಕುಡಿ ಚೆಟ್ಟಿನಾಡ್ ಪಾಕಪದ್ಧತಿ

ಕಾರೈಕುಡಿ ಚೆಟ್ಟಿನಾಡ್ ಪಾಕಪದ್ಧತಿ

PC:Yashima
ಚೆಟ್ಟಿನಾಡ್ ತಿನಿಸು ಸಹ ಕಾರೈಕುಡಿ ಪಾಕಪದ್ಧತಿ ಎಂದು ಕರೆಯಲ್ಪಡುತ್ತದೆ. ತಿನಿಸು ತಮಿಳುನಾಡಿನ ಶಿವಗಂಗೈ ಜಿಲ್ಲೆಯ ಕಾರೈಕುಡಿ ನಗರದ ಒಂದು ಹೆಮ್ಮೆಯಾಗಿದೆ. ಅನೇಕ ಮಸಾಲೆಗಳು ಮತ್ತು ಗಿಡಮೂಲಿಕೆಗಳನ್ನು ಬಳಸಿ ಭಕ್ಷ್ಯಗಳನ್ನು ತಯಾರಿಸಲಾಗುತ್ತದೆ. ಈ ಪಾಕಪದ್ಧತಿಯನ್ನು ಸ್ಥಳೀಯರು 'ಆಚಿ ಸಮಯಲ್' ಎಂದು ಕರೆಯುತ್ತಾರೆ. ಅಡುಗೆ ವಿಧಾನವು ಚೆಟ್ಟಿನಾಡ್ ತಿನಿಸುಗಳನ್ನು ಇತರ ಪಾಕಪದ್ಧತಿಗಳಲ್ಲಿ ಅನನ್ಯವಾಗಿ ಮಾಡುತ್ತದೆ.

ಕನ್ಯಾಕುಮಾರಿಯಲ್ಲಿನ ಸೂರ್ಯೋದಯ

ಕನ್ಯಾಕುಮಾರಿಯಲ್ಲಿನ ಸೂರ್ಯೋದಯ

ನೀವು ಇಲ್ಲಿನವರೆಗೂ ಆಕಾಶ ಬಣ್ಣ ಬದಲಿಸುವುದನ್ನು ನೋಡಿಲ್ಲವೆಂದಾದಲ್ಲಿ ಕನ್ಯಾಕುಮಾರಿಗೆ ಭೇಟಿ ಮಾಡಿ. ಕನ್ಯಾಕುಮಾರಿಯಲ್ಲಿನ ಸೂರ್ಯೋದಯದ ಸಂದರ್ಭ ಆಕಾಶಗಳು ಹೇಗೆ ಛಾಯೆಗಳನ್ನು ಬದಲಾಯಿಸುತ್ತವೆ ಎಂಬುದನ್ನು ಕಂಡರೆ ನಿಜಕ್ಕೂ ಮೈ ಮನ ಪುಳಕಿತಗೊಳ್ಳುವುದು . ಕಿತ್ತಳೆ ಬಣ್ಣದ ಛಾಯೆಗಳಿಂದ ಆಳವಾದ ಉಗ್ರ ಮತ್ತು ಪ್ರಕಾಶಮಾನವಾದ ಛಾಯೆಗಳು ಆಕಾಶದಲ್ಲಿ ಕಂಡುಬರುವ ಮತ್ತು ಕಣ್ಮರೆಯಾಗುವುದನ್ನು ನೋಡುವುದೇ ಒಂದು ಖುಷಿ.

ಮರೀನಾ ಬೀಚ್

ಮರೀನಾ ಬೀಚ್

ಚೆನೈ ನಗರದ ಮರೀನಾ ಬೀಚ್ ವಿಶ್ವದ ಎರಡನೆಯ ಅತಿ ಉದ್ದದ ಕಡಲತೀರವಾಗಿದೆ. ಭಾರತದ ಅತಿ ಉದ್ದವಾದ ನಗರ ಕಡಲತೀರವಾಗಿದೆ. 13 ಕಿಮೀ ಉದ್ದದ ತೀರದಲ್ಲಿ ಪ್ರಶಾಂತ ಮತ್ತು ಉಗ್ರ ಅಲೆಗಳು ನಿಮ್ಮನ್ನು ಸ್ವಾಗತಿಸುತ್ತದೆ. ಕಡಲ ಕಿನಾರೆಯಲ್ಲಿ ಮರಳಿನಲ್ಲಿ ನಿಮ್ಮ ಪಾದಗಳನ್ನು ಮುಳುಗಿಸುತ್ತಾ ನೀವು ನಡೆದುಕೊಂಡು ಹೋಗುವುದು ಚೆನ್ನೈನಲ್ಲಿನ ನಿಜವಾದ ಉಲ್ಲಾಸಕರ ಅನುಭವವಾಗಿದೆ.

ತಲಯೆಟ್ಟಿ ಬೊಮ್ಮೈತಲಯೆಟ್ಟಿ ಬೊಮ್ಮೈ

ತಲಯೆಟ್ಟಿ ಬೊಮ್ಮೈತಲಯೆಟ್ಟಿ ಬೊಮ್ಮೈ

PC:Booradleyp

ಈ ಗೊಂಬೆಗಳನ್ನು ತಲಯೆಟ್ಟಿ ಬೊಮ್ಮೈ ಎನ್ನಲಾಗುತ್ತದೆ. ಇದು ಪ್ರಸಿದ್ಧತಲಯೆಟ್ಟಿ ಬೊಮ್ಮೈಪೈಂಟಿಂಗ್ಸ್ ಗೆ ಹೆಸರುವಾಸಿಯಾಗಿದೆ. ತಂಜಾವೂರು ಪೈಂಟಿಂಗ್ಸ್ ಇವನ್ನು ಇತರ ಜಿಲ್ಲೆಗಳಿಂದ ವಿಭಿನ್ನವಾಗಿಸಿದೆ.

ಪಂಬನ್ ಸೇತುವೆ

ಪಂಬನ್ ಸೇತುವೆ

PC:IM3847
ತಮಿಳುನಾಡಿನಲ್ಲಿ ತಪ್ಪಿಸಿಕೊಳ್ಳಬಾರದ ಸ್ಥಳಗಳಲ್ಲಿ ಪಂಬನ್ ಸೇತುವೆ ಕೂಡಾ ಒಂದು. ಪಂಬನ್ ಸೇತುವೆಯು 2.3 ಕಿಮೀ ಉದ್ದದಲ್ಲಿದೆ. ಈ ಸೇತುವೆಯು ಭಾರತದ ಎರಡನೇ ಅತಿ ಉದ್ದ ಸಮುದ್ರ ಸೇತುವೆಯಾಗಿದೆ. ಪಂಬನ್ ಸೇತುವೆ ರಾಮೇಶ್ವರಂ ಅನ್ನು ತಮಿಳುನಾಡಿನ ಉಳಿದ ಭಾಗಕ್ಕೆ ಸಂಪರ್ಕಿಸುತ್ತದೆ.

ಕಳನೈ ಅಣೆಕಟ್ಟು

ವಿಶ್ವದಲ್ಲೇ ಅತ್ಯಂತ ಹಳೆಯದಾದ ಅಣೆಕಟ್ಟುಗಳಲ್ಲಿ ಕಳನೈ ಅಣೆಕಟ್ಟು ಒಂದಾಗಿದೆ. ಇದನ್ನು ಇಲ್ಲಿಯವರೆಗೂ ಬಳಸಲಾಗುತ್ತಿದೆ. ಕಾವೇರಿ ನದಿಗೆ ನಿರ್ಮಿಸಿದ ಈ ಅಣೆಕಟ್ಟು 329 ಮೀ ಉದ್ದ ಮತ್ತು 20 ಮೀ ಅಗಲವಿದೆ. ತಮಿಳುನಾಡು ಹೆಸರುವಾಸಿಯಾದ ಪ್ರಸಿದ್ಧ ಅಣೆಕಟ್ಟ.

ಶಿವಕಾಶಿ ಪಟಾಕಿ ತಾಯರಿಕ ಘಟಕ

ಶಿವಕಾಶಿ ಪಟಾಕಿ ತಾಯರಿಕ ಘಟಕ

PC:Mathanagopal

ತಮಿಳುನಾಡಿನಲ್ಲಿ ಸಣ್ಣ ಮಕ್ಕಳಿಗೂ ಕೂಡ ಶಿವಕಾಶಿ ಪಟಾಕಿ ತಯಾರಿಕ ದಳದ ಬಗ್ಗೆ ಚೆನ್ನಾಗಿ ತಿಳಿದಿದೆ. ಪಟ್ಟಣವು ಅದರ ಪಟಾಕಿ ತಯಾರಿಕ ಮತ್ತು ಮ್ಯಾಚ್ ಫ್ಯಾಕ್ಟರಿಗಳಿಗೆ ಜನಪ್ರಿಯವಾಗಿದೆ. ಹಬ್ಬದ ಋತುವಿನಲ್ಲಿ, ಜನರು ಈ ಸ್ಥಳದಿಂದ ಅಧಿಕೃತ ಮತ್ತು ಅಗ್ಗದ ಪಟಾಕಿಗಳನ್ನು ಪಡೆಯಲು ಸೇರುತ್ತಾರೆ.

ತಲುಪುವುದು ಹೇಗೆ?


ತಮಿಳುನಾಡಿಗೆ ತಲುಪುವ ಅತ್ಯಂತ ಅನುಕೂಲಕರವಾದ ಮಾರ್ಗವೆಂದರೆ ವಾಯು ಮಾರ್ಗ. ಇಲ್ಲಿನ ಪ್ರಮುಖವಾದ ವಿಮಾನ ನಿಲ್ದಾಣವು ಚೆನ್ನೈನಲ್ಲಿದೆ. ವಿಮಾನ ನಿಲ್ದಾಣ ದೇಶೀಯ ಮತ್ತು ಅಂತರಾಷ್ಟ್ರೀಯ ವಿಮಾನಯಾನ ಸೇವೆಗಳನ್ನು ಒದಗಿಸುತ್ತದೆ. ಇಲ್ಲಿಂದ ನೀವು ತಿರುಚ್ಚಿ, ಮಧುರೈ, ಸೇಲಂ ಮತ್ತು ಕೊಯಮತ್ತೂರು ಮುಂತಾದ ತಮಿಳುನಾಡಿನ ಗಮ್ಯಸ್ಥಾನಗಳಿಗೆ ವಾಯು ಸಂಪರ್ಕವನ್ನು ಪಡೆಯಬಹುದು.

ತಮಿಳುನಾಡು ಉತ್ತಮವಾದ ರಸ್ತೆ ಸಂಪರ್ಕವನ್ನು ಹೊಂದಿದೆ ಮತ್ತು ಖಾಸಗಿ ಮತ್ತು ಸರ್ಕಾರಿ ಬಸ್ಸುಗಳ ಸೇವೆಗಳು ತಮಿಳುನಾಡಿನೊಂದಿಗೆ ಹಲವಾರು ನೆರೆಯ ಸ್ಥಳಗಳೊಂದಿಗೆ ಸಂಪರ್ಕ ಕಲ್ಪಿಸುತ್ತವೆ. ಕರ್ನಾಟಕ, ಕೇರಳ ಮತ್ತು ಆಂಧ್ರಪ್ರದೇಶ ರಾಜ್ಯಗಳು ತಮಿಳುನಾಡಿನೊಂದಿಗೆ ರಾಜ್ಯ ಎಕ್ಸ್ಪ್ರೆಸ್ ಸಾರಿಗೆ ಸಂಸ್ಥೆಯ ಮೂಲಕ ಸಂಪರ್ಕ ಹೊಂದಿವೆ.

ತಮಿಳುನಾಡುಗೆ ರೈಲುಮಾರ್ಗಗಳ ಮೂಲಕ ಸುಲಭವಾಗಿ ತಲುಪಬಹುದು. ರಾಜ್ಯದ ಎರಡು ಪ್ರಮುಖ ರೈಲ್ವೆ ನಿಲ್ದಾಣಗಳು ಚೆನ್ನೈ ಸೆಂಟ್ರಲ್ ಮತ್ತು ಎಗ್ಮೋರ್ ನಿಲ್ದಾಣಗಳಾಗಿವೆ. ಬ್ರಾಡ್ ಗೇಜ್ ಮಾರ್ಗಗಳು, ಮೀಟರ್‌ ಗೇಜ್ ಎರಡು ನಿಲ್ದಾಣಗಳಿಗೆ ಸೇವೆ ಸಲ್ಲಿಸುತ್ತವೆ ಚೆನ್ನೈ ಸೆಂಟ್ರಲ್ ಭಾರತದ ಇತರ ನಗರಗಳೊಂದಿಗೆ ನವ ದೆಹಲಿ, ಮುಂಬೈ, ಕಲ್ಕತ್ತಾ, ಕೊಚ್ಚಿನ್, ತಿರುವನಂತಪುರಂ, ಹೈದರಾಬಾದ್, ಬೆಂಗಳೂರು, ಕೊಯಮತ್ತೂರು, ಲಕ್ನೌ, ಮತ್ತು ಗುವಾಹಾಟಿಯನ್ನು ಸಂಪರ್ಕಿಸುತ್ತದೆ.

More News

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+