ಮಹಾಬಲೇಶ್ವರವು ಮಹಾರಾಷ್ಟ್ರದಲ್ಲಿರುವ ಅತ್ಯಂತ ಸುಂದರವಾದ ಗಿರಿಧಾಮಗಳಲ್ಲಿ ಒಂದಾಗಿದೆ. ಹಚ್ಚಹಸಿರು ದೃಶ್ಯಗಳು, ಆಹ್ಲಾದಕರ ಹವಾಮಾನ, ಜಲಪಾತಗಳು ಮತ್ತು ಅನೇಕ ದೇವಾಲಯಗಳಿಗೆ ಹೆಸರುವಾಸಿಯಾಗಿದೆ. ಈ ದೇವಾಲಯಗಳಲ್ಲಿ ಕೃ ಷ್ಣಾಬಾಯಿ ಅತ್ಯಂತ ಸಾಂಪ್ರದಾಯಿಕವಾದ ದೇವಾಲಯವಾಗಿದೆ. ಹಾಗಾದರೆ ಬನ್ನಿ ದೇವಸ್ಥಾನದ ಮಹತ್ವ, ವಾಸ್ತುಶಿಲ್ಪ, ಇತಿಹಾಸ ಹಾಗೂ ಇಲ್ಲಿಗೆ ಸಮೀಪವಿರುವ ಪ್ರವಾಸಿ ಸ್ಥಳಗಳ ಬಗ್ಗೆ ಒಂದಿಷ್ಟು ಮಾಹಿತಿ ತಿಳಿಯೋಣ...
ದೇವಸ್ಥಾನದ ಇತಿಹಾಸ
ಕೃಷ್ಣಾಬಾಯಿ ದೇವಸ್ಥಾನವು ಕೃಷ್ಣಾ ನದಿಯ ದಡದಲ್ಲಿರುವ ಬೆಟ್ಟದ ಮೇಲೆ ನೆಲೆಗೊಂಡಿದೆ. ಇದನ್ನು ಕೃಷ್ಣಾಬಾಯಿ ದೇವಿಗೆ ಸಮರ್ಪಿಸಲಾಗಿದೆ. 19ನೇ ಶತಮಾನದ ಉತ್ತರಾರ್ಧದಲ್ಲಿ ರತ್ನಗಿರಿಯ ರಾಜಾ ಭೋನ್ಸಾಲೆ ಎಂಬ ರಾಜನಿಂದ ಈ ದೇವಾಲಯವನ್ನು ನಿರ್ಮಿಸಲಾಗಿದೆ ಎಂದು ನಂಬಲಾಗಿದೆ. ಕೃಷ್ಣಾಬಾಯಿ ದೇವಸ್ಥಾನವನ್ನು ಹೇಮಡ್ಪಂಥಿ ವಾಸ್ತುಶೈಲಿಯಲ್ಲಿ ನಿರ್ಮಿಸಲಾಗಿದೆ, ಇದು ಕಪ್ಪು ಕಲ್ಲು ಮತ್ತು ಸುಣ್ಣದ ಬಳಕೆಯಿಂದ ಮಾಡಲ್ಪಟ್ಟಿದೆ.
ಹಸುವಿನ ಬಾಯಿಯಿಂದ ಬರುವ ನೈಸರ್ಗಿಕ ನೀರು
ಕೃಷ್ಣಾಬಾಯಿ ದೇವಾಲಯದ ಅತ್ಯಂತ ಆಕರ್ಷಕವಾದ ಸಂಗತಿಯೆಂದರೆ ಕಲ್ಲಿನಲ್ಲಿ ಕೆತ್ತಿರುವ ಹಸುವಿನ ಬಾಯಿಯ ಪ್ರತಿಮೆಯಿಂದ ಹೊರಹೊಮ್ಮುವ ನೈಸರ್ಗಿಕ ನೀರು. ಆ ನಂತರ ಈ ನೀರು ಸಣ್ಣ ಕೊಳಕ್ಕೆ ಹರಿಯುತ್ತದೆ. ದೇವಾಲಯದ ಮುಖ್ಯ ಗರ್ಭಗುಡಿಯು ವಿಷ್ಣುವಿನ ಅವತಾರವೆಂದು ಪರಿಗಣಿಸಲ್ಪಟ್ಟಿರುವ ಶ್ರೀಕೃಷ್ಣನ ವಿಗ್ರಹವನ್ನು ಹೊಂದಿದೆ. ಈ ವಿಗ್ರಹವು ಕಪ್ಪು ಕಲ್ಲಿನಿಂದ ಮಾಡಲ್ಪಟ್ಟಿದೆ ಮತ್ತು ಆರು ಅಡಿ ಎತ್ತರದಲ್ಲಿದೆ. ಈ ದೇವಾಲಯವು ಶಿವನಿಗೆ ಸಮರ್ಪಿತವಾಗಿದೆ.

ಪ್ರಮುಖ ಪ್ರವಾಸಿ ಆಕರ್ಷಣೆ
ಈ ದೇವಾಲಯವು ಧಾರ್ಮಿಕ ಸ್ಥಳ ಮಾತ್ರವಲ್ಲದೆ, ಮಹಾಬಲೇಶ್ವರದ ಪ್ರಮುಖ ಪ್ರವಾಸಿ ಆಕರ್ಷಣೆಯಾಗಿದೆ. ದೇವಾಲಯದ ಜೊತೆಗೆ ನೀವಿಲ್ಲಿ ಸುತ್ತಮುತ್ತಲು ಬೆಟ್ಟಗಳು ಮತ್ತು ಆಕರ್ಷಕ ಕಣಿವೆಗಳನ್ನು ನೋಡಬಹುದು. ಕಣಿವೆಯ ಸುಂದರವಾದ ನೋಟವು ಪ್ರವಾಸಿಗರನ್ನು ಆಕರ್ಷಿಸದೆ ಇರಲಾರದು. ಮಳೆಗಾಲದ ಸಮಯದಲ್ಲಿ ಇದು ಸುಂದರವಾದ ಜಲಪಾತಗಳೊಂದಿಗೆ ಇನ್ನು ಅದ್ಭುತವಾಗಿ ಕಾಣುತ್ತದೆ. ಪ್ರವಾಸಿಗರು ದೇವಾಲಯದ ಸಂಕೀರ್ಣದ ಸುತ್ತಲೂ ಇರುವ ಸುಂದರವಾದ ಉದ್ಯಾನಗಳನ್ನು ವೀಕ್ಷಿಸಬಹುದು. ಉದ್ಯಾನಗಳು ವಿವಿಧ ವಿಶಿಷ್ಟ ಜಾತಿಯ ಸಸ್ಯಗಳು ಮತ್ತು ಮರಗಳಿಗೆ ನೆಲೆಯಾಗಿದೆ. ಈ ಮರಗಳು ಶಾಂತಿಯುತ ಮತ್ತು ಪ್ರಶಾಂತ ವಾತಾವರಣವನ್ನು ಒದಗಿಸುತ್ತವೆ.
ಹಬ್ಬಗಳ ಆಚರಣೆ
ಈ ದೇವಾಲಯದಲ್ಲಿ ದೀಪಾವಳಿ, ನವರಾತ್ರಿ ಮತ್ತು ಮಹಾಶಿವರಾತ್ರಿಯಂತಹ ಪ್ರಮುಖ ಹಬ್ಬಗಳನ್ನು ಬಹಳ ಉತ್ಸಾಹದಿಂದ ಆಚರಿಸಲಾಗುತ್ತದೆ. ವರ್ಷಕ್ಕೊಮ್ಮೆ ಕೃಷ್ಣಾ ನದಿಯ ಉತ್ಸವದ ಸಮಯದಲ್ಲಿ ಆಶೀರ್ವಾದ ಪಡೆಯಲು ಭಕ್ತರು ನದಿಯಲ್ಲಿ ಸ್ನಾನ ಮಾಡುತ್ತಾರೆ.

ದೇವಾಲಯದ ವಿಳಾಸ , ಸಮಯ
ಕೃಷ್ಣಾಬಾಯಿ ದೇವಸ್ಥಾನ, ಹಳೆಯ ಮಹಾಬಲೇಶ್ವರ, ಮಹಾರಾಷ್ಟ್ರ 412806 ದೇವಾಲಯವು ಪ್ರತಿದಿನ ಬೆಳಿಗ್ಗೆ 5 ರಿಂದ ರಾತ್ರಿ 9 ರವರೆಗೆ ತೆರೆದಿರುತ್ತದೆ.
ಸಮೀಪವಿರುವ ಪ್ರವಾಸಿ ಸ್ಥಳಗಳು
ವಿಲ್ಸನ್ ಪಾಯಿಂಟ್ : ಇದು ಮಹಾಬಲೇಶ್ವರದ ಅತ್ಯಂತ ಎತ್ತರದ ಸ್ಥಳಗಳಲ್ಲಿ ಒಂದಾಗಿದೆ. ನೀವಿಲ್ಲಿ ಹಚ್ಚಹಸಿರ ಬೆಟ್ಟಗಳು ಹಾಗೂ ಕಣಿವೆಗಳ ವಿಹಂಗಮ ನೋಟವನ್ನು ಕಣ್ತುಂಬಿಕೊಳ್ಳಬಹುದು.
ವೆನ್ನಾ ಸರೋವರ: ದೋಣಿ ವಿಹಾರ ಮತ್ತು ಪಿಕ್ನಿಕ್ಗೆ ಜನಪ್ರಿಯ ತಾಣವಾಗಿದೆ, ವೆನ್ನಾ ಸರೋವರವು ಹಚ್ಚ ಹಸಿರಿನಿಂದ ಆವೃತವಾಗಿದ್ದು, ಪರ್ವತಗಳ ದೃಶ್ಯ ಕಣ್ಣಿಗೆ ಕಟ್ಟುವಂತಿದೆ.
ಆರ್ಥರ್ ಸೀಟ್ : ಮತ್ತೊಂದು ಜನಪ್ರಿಯ ತಾಣ. ಆರ್ಥರ್ ಸೀಟ್ ಸೂರ್ಯಾಸ್ತ ಮತ್ತು ಸುತ್ತಮುತ್ತಲಿನ ಬೆಟ್ಟಗಳ ನೋಟಕ್ಕೆ ಮನಸೋಲದೆ ಇರಲಾರಿರಿ.

ಲಿಂಗಮಾಲಾ ಜಲಪಾತ: ಸುಂದರವಾದ ಕಾಡಿನ ಬೆಟ್ಟಗಳ ನಡುವೆ ನೆಲೆಗೊಂಡಿರುವ ಲಿಂಗಮಾಲಾ ಜಲಪಾತವು ಪ್ರಕೃತಿ ಪ್ರಿಯರಿಗೆ ಹೇಳಿ ಮಾಡಿಸಿದ ತಾಣವಾಗಿದೆ.
ಮ್ಯಾಪ್ರೋ ಗಾರ್ಡನ್: ಆಹಾರ ಪ್ರಿಯರಿಗೆ ಜನಪ್ರಿಯ ಆಕರ್ಷಣೆಯಾಗಿದ್ದು, ಮ್ಯಾಪ್ರೋ ಗಾರ್ಡನ್ ತನ್ನ ರುಚಿಕರವಾದ ಸ್ಟ್ರಾಬೆರಿ ಆಧಾರಿತ ಉತ್ಪನ್ನಗಳಿಗೆ ಹೆಸರುವಾಸಿಯಾಗಿದೆ.
ಹಾಥಿ ಮಠ: ಹಾಥಿ ಮಠ ಪಾಯಿಂಟ್ ಸುತ್ತಮುತ್ತಲಿನ ಕಣಿವೆಗಳು ಮತ್ತು ಬೆಟ್ಟಗಳ ರುದ್ರರಮಣೀಯ ನೋಟ ಒಮ್ಮೆ ನೋಡಲೇಬೇಕಾದ್ದು.
ಪಂಚಗಣಿ: ಮಹಾಬಲೇಶ್ವರದಿಂದ ಸ್ವಲ್ಪ ದೂರದಲ್ಲಿರುವ ಪಂಚಗಣಿಯು ಸುಂದರವಾದ ಗಿರಿಧಾಮವಾಗಿದ್ದು, ವರ್ಣರಂಜಿತ ದೃಶ್ಯಾವಳಿಗೆ ಹೆಸರುವಾಸಿಯಾಗಿದೆ.
ಪ್ರತಾಪಗಢ ಕೋಟೆ: ಮಹಾಬಲೇಶ್ವರದಿಂದ ಸ್ವಲ್ಪ ದೂರದಲ್ಲಿರುವ ಐತಿಹಾಸಿಕ ಕೋಟೆ. ಪ್ರತಾಪಗಢವು ಇತಿಹಾಸ ಪ್ರಿಯರಿಗೆ ಒಂದು ಜನಪ್ರಿಯ ಆಕರ್ಷಣೆಯಾಗಿದೆ.
ಕನ್ನಾಟ್ ಶಿಖರ: ಇದು ಮಹಾಬಲೇಶ್ವರದ ಅತಿ ಎತ್ತರದ ಸ್ಥಳವಾಗಿದೆ ಮತ್ತು ಸುತ್ತಮುತ್ತಲಿನ ಕಣಿವೆಗಳು ಹಾಗೂ ಪರ್ವತಗಳ ಅದ್ಭುತ ನೋಟ ನಿಮ್ಮನ್ನು ಕೈ ಬೀಸಿ ಕರೆಯುತ್ತದೆ.
ಭೇಟಿ ನೀಡಲು ಉತ್ತಮ ಸಮಯ
ಮಹಾಬಲೇಶ್ವರಕ್ಕೆ ಭೇಟಿ ನೀಡಲು ಉತ್ತಮ ಸಮಯವೆಂದರೆ ಮಾರ್ಚ್ ನಿಂದ ಮೇ ಮತ್ತು ಅಕ್ಟೋಬರ್ ನಿಂದ ನವೆಂಬರ್.

ತಲುಪುವುದು ಹೇಗೆ?
ವಿಮಾನ: ಹತ್ತಿರದ ವಿಮಾನ ನಿಲ್ದಾಣವೆಂದರೆ ಪುಣೆ ಅಂತರಾಷ್ಟ್ರೀಯ ವಿಮಾನ ನಿಲ್ದಾಣ.
ರೈಲು: ಹತ್ತಿರದ ರೈಲು ನಿಲ್ದಾಣವು ಸತಾರಾ ರೈಲು ನಿಲ್ದಾಣವಾಗಿದೆ. ಅಲ್ಲಿಂದ ಟ್ಯಾಕ್ಸಿಗಳು ಮತ್ತು ಬಸ್ಸುಗಳು ಸುಲಭವಾಗಿ ಲಭ್ಯವಿವೆ.
ರಸ್ತೆ: ಮುಂಬೈ, ಪುಣೆ ಮತ್ತು ಗೋವಾದಂತಹ ಪ್ರಮುಖ ನಗರಗಳಿಂದ ಮಹಾಬಲೇಶ್ವರವನ್ನು ಸುಲಭವಾಗಿ ತಲುಪಬಹುದು.
ನೋಡಲೇಬೇಕಾದ ಸ್ಥಳ
ಕೃಷ್ಣಾಬಾಯಿ ದೇವಸ್ಥಾನದ ಬಳಿ ರೆಸಾರ್ಟ್ಗಳು, ಹೋಟೆಲ್ಗಳು ಮತ್ತು ಹೋಂಸ್ಟೇಗಳು ಸೇರಿದಂತೆ ಹಲವು ವಸತಿಗಳಿವೆ. ಕೃಷ್ಣಾಬಾಯಿ ದೇವಸ್ಥಾನ ಮಹಾಬಲೇಶ್ವರಕ್ಕೆ ಭೇಟಿ ನೀಡುವ ಪ್ರತಿಯೊಬ್ಬರೂ ನೋಡಲೇಬೇಕಾದ ಸ್ಥಳವಾಗಿದೆ . ದೇವಾಲಯದ ಶಾಂತಿಯುತ ವಾತಾವರಣ, ನೈಸರ್ಗಿಕ ಜಲಪಾತ ಮತ್ತು ಕೃಷ್ಣ ಕಣಿವೆಯ ವಿಹಂಗಮ ನೋಟ ಅದ್ಭುತವಾಗಿದೆ. ದೇವಾಲಯದ ಭೇಟಿಯು ಖಂಡಿತವಾಗಿಯೂ ಸಂದರ್ಶಕರ ಮನಸ್ಸಿನಲ್ಲಿ ಶಾಶ್ವತವಾಗಿರುತ್ತದೆ.


Click it and Unblock the Notifications

















