Search
  • Follow NativePlanet
Share
» »ಮಳೆಗಾಲದಲ್ಲಿ ಭೇಟಿ ನೀಡಲು ಭಾರತದ ಅತ್ಯುತ್ತಮ ಗಿರಿಧಾಮಗಳು.

ಮಳೆಗಾಲದಲ್ಲಿ ಭೇಟಿ ನೀಡಲು ಭಾರತದ ಅತ್ಯುತ್ತಮ ಗಿರಿಧಾಮಗಳು.

ಇಂದು ಜಾಗತಿಕ ತಾಪಮಾನದಲ್ಲಿಏರುಪೇರು ಮತ್ತು ಹವಾಮಾನವೂ ಸಹ ಎಲ್ಲಾ ಕಡೆ ಅನಿರೀಕ್ಷಿತವಾಗಿರುವುದರಿಂದ ಪ್ರಪಂಚದಾದ್ಯಂತದ ಪ್ರವಾಸಿಗರು ಮತ್ತು ಪ್ರಯಾಣಿಕರು ಬೇರೆ ಹಾಟ್ ಸ್ಪಾಟ್ ಗಳಿಗಿಂತ ಗಿರಿಧಾಮಗಳಲ್ಲಿಯ ಅನುಕೂಲಕರ ವಾತಾವರಣಗಳು ಸುಂದರ ಭೂದೃಶ್ಯಗಳಿಂದಾಗಿ ಅವುಗಳಿಗೆ ಭೇಟಿ ಕೊಡುವುದನ್ನುಹೆಚ್ಚಾಗಿ ಆಯ್ಕೆ ಮಾಡಿಕೊಳ್ಳುತ್ತಾರೆ. ಭಾರತದಾದ್ಯಂತ ಹಲವಾರು ಕಡೆ ಅನೇಕ ಗಿರಿಧಾಮಗಳಿದ್ದು, ಇವುಗಳು ಅತ್ಯಂತ ಹೆಚ್ಚಾಗಿ ರಜಾದಿನಗಳಲ್ಲಿ ಪ್ರಯಾಣಿಕರು ಮತ್ತು ಪ್ರವಾಸಿಗರಿಂದ ಭೇಟಿ ಕೊಡಲ್ಪಡುವ ಪ್ರಮುಖ ತಾಣಗಳಲ್ಲಿ ಒಂದೆನಿಸಿವೆ. ನೀವೇನಾದರು ಪ್ರವಾಸವನ್ನು ಆಯೋಜಿಸುತ್ತಿರುವಿರಾದಲ್ಲಿ ನೇಟಿವ್ ಪ್ಲಾನೆಟ್ ನಿಮಗಾಗಿ ಮಾನ್ಸೂನ್ ಋತುವಿನಲ್ಲಿ ಭೇಟಿ ನೀಡಬಹುದಾದ ಭಾರತದ ಅತ್ಯುತ್ತಮ ಗಿರಿಧಾಮಗಳ ಪಟ್ಟಿಯನ್ನು ನೀಡುತ್ತಿದೆ.ಇದರಿಂದಾಗಿ ನಿಮ್ಮ ಗಮ್ಯಸ್ಥಾನವನ್ನು ಸುಲಭವಾಗಿ ಆಯ್ಕೆ ಮಾಡಿಕೊಳ್ಳಲು ಸಹಾಯವಾಗುತ್ತದೆ.

ಝಿರೋ

ಝಿರೋ ಸಮುದ್ರ ಮಟ್ಟದಿಂದ 1500 ಮೀ ಎತ್ತರದಲ್ಲಿದ್ದು ಈಶಾನ್ಯ ಭಾರತದಲ್ಲಿಯ ಅತ್ಯಂತ ಹೆಚ್ಚು ಭೇಟಿ ಕೊಡಲ್ಪಡುವ ಗಿರಿಧಾಮಗಳಲ್ಲಿ ಒಂದೆನಿಸಿದೆ. ಇಲ್ಲಿಯ ಸೊಂಪಾದ ತೋಟಗಳು,ಬೆಟ್ಟಗಳು, ಮತ್ತು ಪ್ರಶಾಂತವಾದ ಸರೋವರಗಳ ಸೌಂದರ್ಯತೆಗಳು ಭಾರತಾದ್ಯಂತದ ಸಾವಿರಾರು ಜನರನ್ನು ಆಕರ್ಷಿಸುತ್ತದೆ. ಈ ಪ್ರದೇಶದಲ್ಲಿ ಅಪಾಟಮಿ ಬುಡಕಟ್ಟು ಜನಾಂಗದವರು ವಾಸಿಸುತ್ತಿದ್ದು, ಇಲ್ಲಿಗೆ ಭೇಟಿ ನೀಡಿ ಇಲ್ಲಿಯ ಸ್ಥಳೀಯ ಸಂಸ್ಕೃತಿಯ ಬಗ್ಗೆ ಇನ್ನಷ್ಟು ತಿಳಿಯಬಹುದಾಗಿದೆ. ಈ ಸ್ಥಳವು ಎತ್ತರವಾದ ಪೈನ್ ಮತ್ತು ಬಿದಿರಿನ ಮರಗಳಿಂದ ಅಲಂಕೃತವಾಗಿದೆ ಇದಲ್ಲದೆ ಇಲ್ಲಿಯ ಪರ್ವತಗಳು ಅಲ್ಲಿರುವ ದಟ್ಟ ಸಸ್ಯವರ್ಗಗಳಿಂದಾಗಿ ನೈಸರ್ಗಿಕವಾದ ಹೊಗೆಭರಿತ ಮಂಜಿನಿಂದ ಆವೃತವಾಗಿರುತ್ತದೆ. ಯುನೆಸ್ಕೋ ಈ ಸ್ಥಳವನ್ನು ವಿಶ್ವ ಪರಂಪರೆಯ ತಾಣವೆಂದು ಗುರುತಿಸಿದ್ದು, ಇಲ್ಲಿಯ ನೈಸರ್ಗಿಕ ಸೌಂದರ್ಯ ಮತ್ತು ಹಸಿರಿನ ಅದ್ಬುತ ನೋಟವು ಎಲ್ಲಾ ತರಹದ ಜನರನ್ನು ಆಕರ್ಷಿಸುತ್ತದೆ. ಹಿಂದಿನಿಂದಲೂ ಭೂಮಿಯ ಮೇಲಿರುವ ಸ್ವರ್ಗವೆಂದು ಕರೆಯಲ್ಪಡುವ ಜಮ್ಮು ಮತ್ತು ಕಾಶ್ಮೀರದಲ್ಲಿರುವ ಶ್ರೀನಗರವು ಝೀಲಂ ನದಿಯ ದಡದಲ್ಲಿ ಸುಂದರವಾಗಿ ನೆಲೆಗೊಂಡಿದೆ.

srinagar

ಶ್ರೀನಗರದ

ಪ್ರಾಚೀನ ಭೂಮಿಯಾದ ಜಮ್ಮು ಮತ್ತು ಕಾಶ್ಮೀರವು ಪರ್ವತ ಶ್ರೇಣಿಗಳಿಂದ ಕೂಡಿದ್ದು, ಆಕರ್ಷಕವಾದ ಗಿರಿಧಾಮಗಳನ್ನು ಹೊಂದಿದೆ. ಜಮ್ಮು ಮತ್ತು ಕಾಶ್ಮೀರದ ಶ್ರೀನಗರದ ದಿ ಹೆವ್ ಆನ್ ಅರ್ಥ್ ( ಎಂದು ಪ್ರಸಿದ್ಧವಾಗಿದೆ, ಇದು ಝೀಲಂ ನದಿಯ ತೀರದಲ್ಲಿ ಸುಂದರವಾಗಿ ನೆಲೆಗೊಂಡಿದೆ. ಇಲ್ಲಿಯ ಸ್ವರ್ಗ ಸದೃಶವಾದ ಸುಂದರ ದೃಶ್ಯಗಳು ತನ್ನ ಸಾಂಪ್ರದಾಯಿಕ ಆಕರ್ಷಣೆಯೊಂದಿಗೆ ಎಲ್ಲಾ ತರಹದ ಪ್ರವಾಸಿಗರು ಮತ್ತು ಪ್ರಯಾಣಿಕರನ್ನು ತನ್ನಲ್ಲಿ ಆಕರ್ಷಿಸುತ್ತದೆ.ದಾಲ್ ಸರೋವರದ ಉತ್ಕೃಷ್ಟತೆಯನ್ನು ಅನುಭವಿಸಲು ಮತ್ತು ಇಲ್ಲಿಯ ಇತರ ನೈಸರ್ಗಿಕ ಕೊಡುಗೆಗಳ ಜೊತೆಗೆ, ಸಮತಟ್ಟಾದ ತಳ ಇರುವ ದೋಣಿ ಸವಾರಿ (ಶಿಕಾರ), ಅಂದವಾದ ಹೌಸ್‌ಬೋಟ್‌ಗಳು ಮತ್ತು ಗಮನಾರ್ಹವಾದ ಉದ್ಯಾನವನಗಳು ಇತ್ಯಾದಿಗಳನ್ನು ಅನುಭವಿಸಲು ಮತ್ತು ನೋಡಲು ಶ್ರೀನಗರಕ್ಕೆ ಭೇಟಿ ನೀಡಿ. ಶ್ರೀನಗರವು ಈ ಮಾನ್ಸೂನ್ ಋತುವಿನಲ್ಲಿ ಭೇಟಿ ನೀಡುವ ಭಾರತದ ಅತ್ಯಂತ ರೋಮ್ಯಾಂಟಿಕ್ ಗಿರಿಧಾಮಗಳಲ್ಲಿ ಒಂದಾಗಿದೆ.

ಮೌಂಟ್ ಅಬು

ಇದು ರಾಜ್ಯದ ಏಕೈಕ ಗಿರಿಧಾಮವಾಗಿರುವುದರಿಂದ ಸ್ಥಳೀಯರು ಇದನ್ನು ರಾಜಸ್ಥಾನದ ಬೇಸಿಗೆಯ ರಾಜಧಾನಿ ಎಂದು ಕರೆಯುತ್ತಾರೆ. ಮೌಂಟ್ ಅಬು ಇಲ್ಲಿಯ ದಿಲ್ವಾರಾ ಜೈನ ದೇವಾಲಯಗಳಿಗೆ ಪ್ರಸಿದ್ದವಾಗಿದೆ. ಇದು ಅನೇಕ ಮನಮೋಹಕ ಸೂರ್ಯೋದಯ ಸೂರ್ಯಾಸ್ತವಾಗುವ ಸ್ಥಳವನ್ನು ಹೊಂದಿದ್ದು, ಈ ಜಾಗದಲ್ಲಿ ನಿಮ್ಮ ಪ್ರೀತಿಪಾತ್ರರೊಂದಿಗೆ ಉತ್ತಮ ಸಮಯವನ್ನು ಕಳೆಯಬಹುದಾಗಿದೆ. ಗುಜರಾತ್ ನ ಗಡಿಯಲ್ಲಿರುವ ಈ ಸ್ಥಳವು ರಾಜಸ್ಥಾನಿ ಮತ್ತು ಗುಜರಾತಿ ಕೈಮಗ್ಗಗಳು, ಕಲಾಕೃತಿಗಳು, ಜವಳಿ ಮತ್ತು ಇನ್ನಿತರ ವಸ್ತುಗಳನ್ನು ತನ್ನಲ್ಲಿ ಹೊಂದಿದೆ.

ಡಾರ್ಜಿಲಿಂಗ್

ಡಾರ್ಜಿಲಿಂಗ್ ಪೂರ್ವದ ಒಂದು ಸುಂದರವಾದ ಕಾಲ್ಪನಿಕ ಭೂಮಿ ಎಂದು ಗುರುತಿಸಲ್ಪಟ್ಟಿದೆ. ಇದು ತನ್ನಲ್ಲಿ ಪ್ರವಾಸಿಗರನ್ನು ಆಕರ್ಷಿಸಲು ಬೇಕಾದಷ್ಟು ನೈಸರ್ಗಿಕ ಸೌಂದರ್ಯತೆಯನ್ನು ಒಳಗೊಂಡಿದ್ದು , ಪದೇ ಪದೇ ಭೇಟಿ ನೀಡುವಂತೆ ಪ್ರೇರೆಪಿಸುತ್ತದೆ. ಮನಮೋಹಕ ಹಾಗೂ ಅಪರೂಪದ ಜಲಪಾತಗಳು, ಬಣ್ಣ ಬಣ್ಣದ ಅರಳಿದ ಹೂವುಗಳಿಂದ ಕೂಡಿದ ಪರ್ವತಗಳು, ಚಹಾ ತೋಟಗಳು ಇತ್ಯಾದಿಗಳನ್ನು ಹೊಂದಿರುವ ಡಾರ್ಜಿಲಿಂಗ್ ನ ಚಹಾವು ವಿಶ್ವದ ಅತ್ಯಂತ ಜನಪ್ರಿಯ ಚಹಾಗಳಲ್ಲಿ ಒಂದಾಗಿದೆ.

manali

ಮನಾಲಿ

ರಜಾ ದಿನಗಳಲ್ಲಿ ಗಿರಿಧಾಮಗಳಿಗೆ ಭೇಟಿಕೊಡುವ ಬಗ್ಗೆ ಯೋಚನೆ ಮಾಡಿದಲ್ಲಿ ಹೆಚ್ಚಾಗಿ ಎಲ್ಲರ ಮನಸ್ಸಿನಲ್ಲಿ ಬರುವ ಸ್ಥಳವೆಂದರೆ ಅದು ಮನಾಲಿ. ಇದು ಏಕೆಂದರೆ ಈ ಸ್ಥಳದಲ್ಲಿ ಹಿಮಪಾತದ ಸೌಂದರ್ಯತೆ ಒಂದೆಡೆಯಾದರೆ ಇನ್ನೊಂದೆಡೆ ಇಳಿಜಾರು ಬೆಟ್ಟಗಳನ್ನು ಹೊಂದಿದ್ದು ಸುಂದರವಾದ ನೈಸರ್ಗಿಕ ಪ್ರಕೃತಿ ಸೌಂದರ್ಯವನ್ನು ತನ್ನಲ್ಲಿ ಹೊಂದಿದೆ. ಈ ಸ್ಥಳವು ಸಮುದ್ರ ಮಟ್ಟದಿಂದ 6796 ಅಡಿ ಎತ್ತರದಲ್ಲಿದ್ದು, ಪ್ರಸಿದ್ದ ಹಿಮಾಲಯನ್ ಎಕ್ಸ್ಟ್ರೀಮ್ ಸೆಂಟರ್ ನಂತಹ ಪ್ರಸಿದ್ದ ಸ್ನೋ ರೆಸಾರ್ಟ್ ನ ನೆಲೆಯಾಗಿದೆ ಹಾಗೂ ಸಾಹಸ ಪ್ರಿಯರು ಮತ್ತು ಮೋಜು ಪ್ರಿಯರಿಗಾಗಿ ಇಲ್ಲಿ ಸ್ಕಿಯಿಂಗ್, ಸ್ನೊ ಬೊರ್ಡಿಂಗ್, ಮತಿ ಐಸ್ ಸ್ಕೇಟಿಂಗ್ ನಂತಹ ಅತ್ಯಂತ ಆಕರ್ಷಕ ಚಟುವಟಿಕೆಗಳನ್ನು ತನ್ನಲ್ಲಿ ಬರುವವರಿಗಾಗಿ ಒದಗಿಸಿಕೊಡುತ್ತದೆ.

coorg

ಕೂರ್ಗ್

ಕೂರ್ಗ್, ಮಡಿಕೇರಿ ಅಥವಾ ಕನ್ನಡದಲ್ಲಿ ಕೊಡಗು ಎಂದು ಕರೆಯಲ್ಪಡುವ ಈ ಸ್ಥಳವು ತನ್ನಲ್ಲಿ ಹೆಕ್ಟೇರುಗಟ್ಟಲೆಗಳಲ್ಲಿ ಹರಡಿರುವ ಬೆಟ್ಟಗಳು, ಮತ್ತು ತೋಟಗಳನ್ನು ಹೊಂದಿರುವುದಕ್ಕೆ ಹೆಸರುವಾಸಿಯಾಗಿದೆ. ಅದರಲ್ಲೂ ಮಳೆಗಾಲದಲ್ಲಿ ಹಚ್ಚ ಹಸುರಿನ ಹೊದ್ದಿಕೆಯನ್ನು ಹೊದ್ದಂತೆ ಕಾಣುವ ಈ ಸ್ಥಳವು ಭಾರತದ ಸ್ಕಾಟ್ ಲ್ಯಾಂಡ್ ಎಂದೇ ಪ್ರಸಿದ್ದವಾಗಿದೆ ಅಲ್ಲದೆ ಇದು ತನ್ನಲ್ಲಿಯ ಪಾಕಪದ್ದತಿ, ದೇವಾಲಯಗಳು ಮತ್ತು ಪುರಾತನ ಅವಶೇಷಗಳಿಂದ ಜನರನ್ನು ಆಕರ್ಷಿಸುತ್ತದೆ. ಇಲ್ಲಿಯ ಹೇರಳವಾದ ನೈಸರ್ಗಿಕ ಸೌಂದರ್ಯತೆಯ ಜೊತೆಗೆ ಬೈಲಕುಪ್ಪೆಯಲ್ಲಿರುವ ಪ್ರಸಿದ್ದ ಟಿಬೇಟಿಯನ್ ಮಠವನ್ನು ಹೊಂದಿದ್ದು, ನಿಮ್ಮ ಮನಸ್ಸು ಮತ್ತು ದೇಹವನ್ನು ಪುನಶ್ಛೇತನಗೊಳಿಸಲು ನೀವು ಈ ಮಠದಲ್ಲಿ ಒಂದೆರಡು ದಿನ ಕಳೆಯಬಹುದಾಗಿದೆ. ಹೀಗೆ ಕೂರ್ಗ್ ಎಲ್ಲಾ ವರ್ಗದ ಜನರಿಗೆ ಬೇಕಾದುದನ್ನು ಒದಗಿಸುತ್ತದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X