ಸದ್ಯ ಪವಿತ್ರ ಮಾಸ ಶ್ರಾವಣ ನಡೆಯುತ್ತಿದೆ. ಈ ತಿಂಗಳು ಶಿವನಿಗೆ ಸಮರ್ಪಿತವಾಗಿದೆ. ಆದ್ದರಿಂದ ಈ ಅವಧಿಯಲ್ಲಿ ಗ್ರೇಟರ್ ನೋಯ್ಡಾದಲ್ಲಿರುವ ಮಹಾದೇವನ ದೇವಾಲಯದ ಬಗ್ಗೆ ತಿಳಿದುಕೊಳ್ಳೋಣ. ಏಕೆಂದರೆ ಇದು ಬಹಳ ಜನಪ್ರಿಯವಾಗಿದೆ. ಗ್ರೇಟರ್ ನೋಯ್ಡಾದಲ್ಲಿರುವ ಬಿಸ್ರಖ್ ಗ್ರಾಮದಲ್ಲಿ ಶಿವನ ವಿಶಿಷ್ಟವಾದ ದೇವಾಲಯವಿದೆ. ಇದನ್ನು ಶಿವ ಪುರಾಣದಲ್ಲಿಯೂ ಉಲ್ಲೇಖಿಸಲಾಗಿದೆ. ಹಾಗಾದೆ ಬನ್ನಿ ಈ ದೇವಾಲಯದ ವಿಶೇಷತೆ ಏನು?, ನೀವು ಇಲ್ಲಿಗೆ ಹೇಗೆ ತಲುಪಬಹುದು ಎಂದು ನೋಡೋಣ...
ರಾವಣನಿಗೆ ಸಂಬಂಧಿಸಿದೆ ಶಿವ ದೇವಾಲಯದ ಇತಿಹಾಸ
ಈ ದೇವಾಲಯದ ಇತಿಹಾಸವು ಲಂಕಾಪತಿ ರಾವಣನಿಗೆ ಸಂಬಂಧಿಸಿದೆ. ಧಾರ್ಮಿಕ ನಂಬಿಕೆಗಳ ಪ್ರಕಾರ, ಈ ಶಿವಲಿಂಗವನ್ನು ರಾವಣನ ತಂದೆ ಋಷಿ ವಿಶ್ರವನಿಂದ ಬಿಸ್ರಖ್ ಗ್ರಾಮದಲ್ಲಿ ಸ್ಥಾಪಿಸಲಾಗಿದೆ ಎಂದು ನಂಬಲಾಗಿದೆ. ಅಷ್ಟೇ ಅಲ್ಲ, ರಾವಣನ ಜನ್ಮಕ್ಕಾಗಿ ಋಷಿ ವಿಶ್ರವ ಈ ದೇವಾಲಯದಲ್ಲಿ ಶಿವಲಿಂಗವನ್ನು ಸ್ಥಾಪಿಸಿ ಪೂಜಿಸಿದ್ದರು. ಅದರ ನಂತರವೇ ರಾವಣನ ಜನನ. ಇದಾದ ನಂತರ ರಾವಣನೂ ಇಲ್ಲಿ ಹಲವು ವರ್ಷಗಳ ಕಾಲ ತಪಸ್ಸು ಮಾಡಿದ.
ಬಹಳ ಪ್ರಸಿದ್ಧವಾಗಿದೆ ಎಂಟು ಶಸ್ತ್ರಸಜ್ಜಿತ ಶಿವಲಿಂಗ
ಈ ಶಿವಲಿಂಗ ಇಂದಿಗೂ ಗ್ರಾಮದ ದೇವಸ್ಥಾನದಲ್ಲಿದೆ. ಎಂಟು ತೋಳುಗಳ ಶಿವಲಿಂಗವನ್ನು ನೀವು ಭಾರತದಲ್ಲಿ ಎಲ್ಲಿಯೂ ನೋಡುವುದಕ್ಕೆ ಸಾಧ್ಯವಿಲ್ಲ. ಈ ದೇವಾಲಯದ ಶಿವಲಿಂಗದ ಆಳವನ್ನು ಇಂದಿಗೂ ನಿಗೂಢವೆಂದು ಪರಿಗಣಿಸಲಾಗಿದೆ. ದೇವಾಲಯದಲ್ಲಿ ಪ್ರತಿಷ್ಠಾಪಿಸಲಾಗಿರುವ ಶಿವಲಿಂಗದ ಆಳವು ತುಂಬಾ ಹೆಚ್ಚಿದ್ದು, ಇದುವರೆಗೆ ಯಾರೂ ಅಂದಾಜು ಮಾಡಲು ಸಾಧ್ಯವಾಗಿಲ್ಲ. ಪ್ರಾಚೀನ ಕಾಲದಲ್ಲಿ ಇಲ್ಲಿ ಉತ್ಖನನ ನಡೆಸಲಾಗುತ್ತಿತ್ತು ಎಂದು ಹೇಳಲಾಗುತ್ತದೆ, ಆದರೆ ಅಂತ್ಯ ಸಿಗದಿದ್ದಾಗ ಉತ್ಖನನವನ್ನು ನಿಲ್ಲಿಸಲಾಯಿತು. ಶಿವನ ದೇವಾಲಯದ ಬಳಿ ರಾವಣನ ದೇವಾಲಯವೂ ಇದೆ. ರಾವಣ ಹುಟ್ಟಿದ್ದು ಇಲ್ಲೇ, ಹಾಗಾಗಿ ಇಂದಿಗೂ ಇಲ್ಲಿನ ಜನರು ದಸರಾದಂದು ರಾವಣನನ್ನು ಸುಡುವುದಿಲ್ಲ, ಆದರೆ ಪೂಜಿಸುತ್ತಾರೆ.

ಈ ದೇವಾಲಯದ ವಿಶೇಷತೆ ಏನು?
ಈ ದೇವಾಲಯದಲ್ಲಿರುವ ಅರ್ಚಕರು ಮತ್ತು ಗ್ರಾಮದ ಜನರು ಶ್ರಾವಣದಲ್ಲಿ ಈ ಶಿವಲಿಂಗವನ್ನು ನೋಡಲು ಬಂದರೆ, ಶಿವನು ನಿಮ್ಮ ಎಲ್ಲಾ ಇಷ್ಟಾರ್ಥಗಳನ್ನು ಪೂರೈಸುತ್ತಾನೆ ಎಂದು ನಂಬುತ್ತಾರೆ. ಶಿವನ ಮೇಲಿನ ನಂಬಿಕೆಯು ತನ್ನ ಭಕ್ತರನ್ನು ಈ ಸ್ಥಳಕ್ಕೆ ಸೆಳೆಯುತ್ತದೆ. ದೇವಾಲಯದಲ್ಲಿ ವಿವಿಧ ದೇವತೆಗಳ ವಿಗ್ರಹಗಳನ್ನು ಸ್ಥಾಪಿಸಲಾಗಿದೆ. ಶ್ರಾವಣ ಮಾಸದಲ್ಲಿ ದೇವಾಲಯದ ಪ್ರಾಮುಖ್ಯತೆಯು ಮತ್ತಷ್ಟು ಹೆಚ್ಚಾಗುತ್ತದೆ. ಶ್ರಾವಣ ಮಾಸವಿಡೀ ಇಲ್ಲಿ ಶಿವಭಕ್ತರ ನಿರಂತರ ಉಪಸ್ಥಿತಿ ಇರುತ್ತದೆ.
ಯಾಗ ನೆರವೇರಿಸಿದ್ದ ಖ್ಯಾತ ತಂತ್ರಿ ಚಂದ್ರಸ್ವಾಮಿ
ದೇವಾಲಯದಲ್ಲಿ ಇತರ ದೇವತೆಗಳ ವಿಗ್ರಹಗಳಿರುವುದರಿಂದ ಇಲ್ಲಿ ಶ್ರಾವಣ ಮಾಸ ಮಾತ್ರವಲ್ಲದೆ ನವರಾತ್ರಿಯ ಸಂದರ್ಭದಲ್ಲೂ ಜನಸಂದಣಿ ಇರುತ್ತದೆ. 1984ರಲ್ಲಿ ಖ್ಯಾತ ತಂತ್ರಿ ಚಂದ್ರಸ್ವಾಮಿ ಈ ದೇವಸ್ಥಾನದಲ್ಲಿ ಯಾಗ ನಡೆಸಿದ್ದರು. ಈ ಸಮಯದಲ್ಲಿ ಅವರು ಶಿವಲಿಂಗವನ್ನು ಉತ್ಖನನ ಮಾಡಿದರು. ಇಪ್ಪತ್ತು ಅಡಿ ಅಗೆದರೂ ಶಿವಲಿಂಗದ ಅಂತ್ಯ ಕಾಣಲಿಲ್ಲ. ಇದಾದ ನಂತರ ಉತ್ಖನನವನ್ನು ನಿಲ್ಲಿಸಲಾಯಿತು. ಉತ್ಖನನದ ಸಮಯದಲ್ಲಿ ಒಂದು ಗುಹೆ, ಇಪ್ಪತ್ನಾಲ್ಕು ಮುಖದ ಶಂಖವನ್ನು ಕಂಡುಹಿಡಿಯಲಾಯಿತು. ಚಂದ್ರಸ್ವಾಮಿ ಹಲವು ಬಾರಿ ಇಲ್ಲಿಗೆ ಬಂದು ಪೂಜೆ ಸಲ್ಲಿಸಿದ್ದರು. ಇವರಲ್ಲದೆ ಮಾಜಿ ಪ್ರಧಾನಿ ಚಂದ್ರಶೇಖರ್ ಕೂಡ ಶಿವಾಲಯಕ್ಕೆ ಬಂದು ಪೂಜೆ ಸಲ್ಲಿಸುತ್ತಿದ್ದರು, ಶಿವನ ದೇವಸ್ಥಾನದಲ್ಲಿ ಯಾರು ಪೂಜೆ ಮಾಡುತ್ತಾರೋ ಅವರ ಇಷ್ಟಾರ್ಥಗಳು ಈಡೇರುತ್ತವೆ ಎಂಬ ನಂಬಿಕೆ ಇದೆ.

ಶಿವನಿಂದ ರಾವಣನಿಗೆ ಸಿಕ್ಕ ಆಶೀರ್ವಾದ
ಈ ದೇವಾಲಯದಲ್ಲಿಯೇ ರಾವಣನಿಗೆ ಬುದ್ಧಿವಂತಿಕೆ ಮತ್ತು ಶಕ್ತಿಯು ಲಭಿಸಿದ್ದು ಎಂದು ನಂಬಲಾಗಿದೆ. ರಾವಣನು ಎಂಟು ತೋಳುಗಳ ಶಿವಲಿಂಗವನ್ನು ಪೂಜಿಸಲು ಈ ಗ್ರಾಮಕ್ಕೆ ಬರುತ್ತಿದ್ದನು. ಇದರ ನಂತರ, ರಾವಣನ ಆರಾಧನೆಯಿಂದ ಸಂತುಷ್ಟನಾದ ಶಿವನು ರಾವಣನಿಗೆ ಈ ಸ್ಥಳದಲ್ಲಿಯೇ ಬುದ್ಧಿವಂತ ಮತ್ತು ಪರಾಕ್ರಮಿ ಎಂಬ ವರವನ್ನು ನೀಡಿದನು. ಈ ದೇವಾಲಯದ ಟ್ರಸ್ಟ್ ಪ್ರಕಾರ, ಇಂದಿಗೂ ಸಹ ಗ್ರಾಮದಲ್ಲಿ ಅಗೆಯುವಾಗ, ಕೆಲವೊಮ್ಮೆ ಶಿವಲಿಂಗಗಳು ಕಂಡುಬರುತ್ತವೆ. ಈ ಕಾರಣಕ್ಕಾಗಿ, ಪ್ರತಿ ವರ್ಷವೂ ಗ್ರಾಮಕ್ಕೆ ಪ್ರಾರ್ಥನೆ ಸಲ್ಲಿಸಲು ಅಪಾರ ಸಂಖ್ಯೆಯ ಭಕ್ತರು ಬರುತ್ತಾರೆ.
ಜಾತ್ರೆಯಂತಹ ವಾತಾವರಣ
ಶ್ರಾವಣ ಮಾಸದಲ್ಲಿ ಪುರಾತನ ಶಿವನ ದೇವಸ್ಥಾನದಲ್ಲಿ ಜಾತ್ರೆಯಂತಹ ವಾತಾವರಣವಿರುತ್ತದೆ. ಶಿವನ ಜಲಾಭಿಷೇಕ ಕಣ್ತುಂಬಿಕೊಳ್ಳಲು ವಿವಿಧ ರಾಜ್ಯಗಳಿಂದ ಜನರು ಬರುತ್ತಾರೆ. ಪ್ರತಿ ಸೋಮವಾರ ಶ್ರಾವಣ ಸಾಮೂಹಿಕ ರುದ್ರಾಭಿಷೇಕ ಮಾಡಲಾಗುತ್ತದೆ ಎಂದು ದೇವಸ್ಥಾನ ಸಮಿತಿಯ ಮಾಧ್ಯಮ ಪ್ರಭಾರಿ ತಿಳಿಸಿದ್ದಾರೆ. ಮೊದಲು ಮುಂಜಾನೆ ನಾಲ್ಕು ಗಂಟೆಗೆ ದೇವಾಲಯದ ಬಾಗಿಲು ತೆರೆಯಲಾಗುತ್ತದೆ, ನಂತರ ದೇವರನ್ನು ಅಲಂಕರಿಸಲಾಗುತ್ತದೆ ಮತ್ತು ಮಂಗಳ ಆರತಿ ಮಾಡಲಾಗುತ್ತದೆ. ಬಳಿಕ ಬೆಳಗ್ಗೆ 6 ಗಂಟೆಯಿಂದ ಭಕ್ತರು ಶಿವನಿಗೆ ಜಲಾಭಿಷೇಕ ನೆರವೇರಿಸುತ್ತಾರೆ. ಸಂಜೆ 4 ಗಂಟೆಗೆ ಭಜನೆ-ಕೀರ್ತನೆ, ಸಂಜೆ 5 ಗಂಟೆಯಿಂದ ಸಾಮೂಹಿಕ ರೂಪದ್ರಾಭಿಷೇಕ ನಡೆಯಲಿದೆ.

ಶಿವ ದೇವಾಲಯವನ್ನು ತಲುಪುವುದು ಹೇಗೆ?
ಬಿಸ್ರಖ್ ಗ್ರಾಮಕ್ಕೆ ಗ್ರೇಟರ್ ನೋಯ್ಡಾದಿಂದ ಸುಲಭವಾಗಿ ತಲುಪಬಹುದು. ಕಿಸಾನ್ ಚೌಕ್ನಿಂದ ಬಿಸ್ರಖ್ ಗ್ರಾಮಕ್ಕೆ ಕೇವಲ ಐದು ಕಿಲೋಮೀಟರ್ ದೂರವಿದೆ. ಇಲ್ಲಿಗೆ ಕಾರು ಅಥವಾ ಆಟೋ ಮೂಲಕ ಸುಲಭವಾಗಿ ಹೋಗಬಹುದು.


Click it and Unblock the Notifications
















