ದಸರಾ ರಜೆ ಈಗಾಗಲೇ ಆರಂಭವಾಗಿದೆ. ಮಕ್ಕಳು ಅಜ್ಜ-ಅಜ್ಜಿ ಮನೆಗೆ ಅಥವಾ ಪ್ರವಾಸಕ್ಕೆಂದು ಹೊರಡಲು ತಯಾರಿ ನಡೆಸುತ್ತಿರಬಹುದು. ಇದು ಒಂದು ರೀತಿ ಒಳ್ಳೆಯದೇ. ಇಲ್ಲದಿದ್ದರೆ ಮಕ್ಕಳು ದಿನವಿಡೀ ಫೋನ್ ಮತ್ತು ಟಿವಿ ಮುಂದೆ ಕುಳಿತರೆ ಪೋಷಕರಿಗೂ ಒಂದು ರೀತಿ ಚಿಂತೆ. ಅದಕ್ಕೆ ಅವರನ್ನು ಹೊರಗೆ ಸುತ್ತಾಡಿಸುವ ಪ್ಲಾನ್ ಮಾಡಿಕೊಳ್ಳುವುದು ಒಳಿತು. ಇದು ಅವರ ಆರೋಗ್ಯವನ್ನು ಸುಧಾರಿಸುತ್ತದೆ. ಜೊತೆಗೆ ದೈಹಿಕ, ಮಾನಸಿಕ ಮತ್ತು ಭಾವನಾತ್ಮಕ ಬೆಳವಣಿಗೆಗೆ ಕಾರಣವಾಗುತ್ತದೆ. ವಿಶೇಷವಾಗಿ ಮಕ್ಕಳನ್ನು ಪ್ರಕೃತಿಯೊಂದಿಗೆ ಬೆರೆಯುವ ಕೆಲಸ ಮಾಡಿಸುವುದು ಒಳ್ಳೆಯದು. ಅದರಲ್ಲೂ ಅವರಿಗೆ ರಾಷ್ಟ್ರೀಯ ಉದ್ಯಾನವನವು ಅತ್ಯುತ್ತಮ ತಾಣವಾಗಿದೆ. ಏಕೆಂದರೆ ಇಲ್ಲಿ ಅವರು ಮರಗಳು, ಸಸ್ಯಗಳು, ಪ್ರಾಣಿಗಳು ಮತ್ತು ಪ್ರಕೃತಿಯ ಹೊಸ ವಿಷಯಗಳನ್ನು ತಿಳಿದುಕೊಳ್ಳುವ ಅವಕಾಶವನ್ನು ಪಡೆಯುತ್ತಾರೆ.
ಸಾಮಾನ್ಯವಾಗಿ ಮಕ್ಕಳು ಪುಸ್ತಕಗಳಿಂದ ಉತ್ತಮ ಜ್ಞಾನವನ್ನು ಪಡೆಯುತ್ತಿದ್ದಾರೆ ಎಂದು ಭಾವಿಸಲಾಗುತ್ತದೆ. ಆದರೆ ತಜ್ಞರ ಪ್ರಕಾರ ಮಕ್ಕಳು ಪುಸ್ತಕಗಳ ಹೊರತಾಗಿ, ನಿಜವಾದ ಮತ್ತು ಆಳವಾದ ತಿಳುವಳಿಕೆ ಪಡೆಯುವುದು ಮನೆಯ ಹೊರಗೆ ಮಾತ್ರ. ಈ ಮೊದಲೇ ಹೇಳಿದ ಹಾಗೆ ರಾಷ್ಟ್ರೀಯ ಉದ್ಯಾನವನದಲ್ಲಿ ಮಕ್ಕಳು ಪ್ರಾಣಿಗಳನ್ನು ಅವುಗಳ ನೈಸರ್ಗಿಕ ಆವಾಸಸ್ಥಾನದಲ್ಲಿ ನೋಡುತ್ತಾರೆ. ಇದರಿಂದ ಅವರ ಜ್ಞಾನ ಹೆಚ್ಚುತ್ತದೆ. ಒಂದು ವೇಳೆ ನಿಮ್ಮ ಮಕ್ಕಳನ್ನು ಕರ್ನಾಟಕದ ಉತ್ತಮ ರಾಷ್ಟ್ರೀಯ ಉದ್ಯಾನವನಕ್ಕೆ ಕರೆದೊಯ್ಯಲು ನೀವು ಯೋಜಿಸುತ್ತಿದ್ದರೆ ಈ ಲೇಖನವು ನಿಮಗೆ ಉಪಯುಕ್ತವಾಗುತ್ತದೆ. ಏಕೆಂದರೆ ಇಂದಿನ ಲೇಖನದಲ್ಲಿ ನಾವು ನಿಮಗೆ ಬಂಡೀಪುರ ರಾಷ್ಟ್ರೀಯ ಉದ್ಯಾನವನದ ಬಗ್ಗೆ ವಿವರವಾದ ಮಾಹಿತಿಯನ್ನು ನೀಡುತ್ತೇವೆ.
ಬಂಡೀಪುರ ರಾಷ್ಟ್ರೀಯ ಉದ್ಯಾನವನ
ಬಂಡೀಪುರ ರಾಷ್ಟ್ರೀಯ ಉದ್ಯಾನವನವು ಮಕ್ಕಳೊಂದಿಗೆ ಪ್ರಯಾಣಿಸಲು ಉತ್ತಮ ಸ್ಥಳವಾಗಿದೆ. ಇದು ವಿಶಾಲವಾದ ಹಸಿರು ಪ್ರದೇಶಗಳು ಮತ್ತು ಸುರಕ್ಷಿತ ಪರಿಸರಕ್ಕೆ ಹೆಸರುವಾಸಿಯಾಗಿದೆ. ಬಂಡೀಪುರ ರಾಷ್ಟ್ರೀಯ ಉದ್ಯಾನವನದ ಒಟ್ಟು ವಿಸ್ತೀರ್ಣ ಸುಮಾರು 880 ಚದರ ಕಿ.ಮೀ. ಇಲ್ಲಿ ಮಕ್ಕಳು ಸಾಂಬಾರ್, ಚಿತಾಲ್, ಇಲಿ ಜಿಂಕೆ, ನಾಲ್ಕು ಕೊಂಬಿನ ಜಿಂಕೆ, ಕಾಡು ನಾಯಿ, ಕಾಡು ಹಂದಿ, ನರಿ, ಸೋಮಾರಿ ಕರಡಿ, ಪ್ಯಾಂಥರ್, ಮಲಬಾರ್ ಅಳಿಲು, ಮುಳ್ಳುಹಂದಿ ಮತ್ತು ಕಪ್ಪು-ನ್ಯಾಪ್ಡ್ ಮತ್ತು ಮೊಲಗಳನ್ನು ನೋಡಬಹುದು.

ಅಷ್ಟೇ ಅಲ್ಲ, ಕಾಡು ಕೋಳಿ ಮತ್ತು ಹಸಿರು ಪಾರಿವಾಳದಂತಹ ಅನೇಕ ಜಾತಿಯ ಪಕ್ಷಿಗಳನ್ನು ಸಹ ನೋಡಬಹುದು. ಬಂಡೀಪುರ ರಾಷ್ಟ್ರೀಯ ಉದ್ಯಾನವನವು ನಾಗರಹೊಳೆ ರಾಷ್ಟ್ರೀಯ ಉದ್ಯಾನವನ, ವಯನಾಡ್ ರಾಷ್ಟ್ರೀಯ ಉದ್ಯಾನವನ ಮತ್ತು ಮುದುಮಲೈ ರಾಷ್ಟ್ರೀಯ ಉದ್ಯಾನವನದ ಇತರ 3 ರಾಷ್ಟ್ರೀಯ ಉದ್ಯಾನವನಗಳೊಂದಿಗೆ ಗಡಿಯನ್ನು ಹಂಚಿಕೊಂಡಿದೆ. ಬಂಡೀಪುರ ರಾಷ್ಟ್ರೀಯ ಉದ್ಯಾನವನ್ನು 1974 ರಲ್ಲಿ ಸ್ಥಾಪಿಸಲಾಯಿತು. ಈ ಉದ್ಯಾನವನವನ್ನು ಮೊದಲು ಬಂಡೀಪುರ ವನ್ಯಜೀವಿ ಅಭಯಾರಣ್ಯ ಎಂದು ಕರೆಯಲಾಗುತ್ತಿತ್ತು. ಇಲ್ಲಿ ನೀವು ಕಾಲ್ನಡಿಗೆಯಲ್ಲಿ ಹೋಗಬಹುದು ಮತ್ತು ಜೀಪ್ ಸಫಾರಿಯೂ ಮಾಡಬಹುದು. ಇದು ಸಫಾರಿಗೆ ಉತ್ತಮ ಸ್ಥಳವಾಗಿದೆ.

ಹುಲಿ ಸಂರಕ್ಷಿತ ಪ್ರದೇಶ
1973ರಲ್ಲಿ ಅಂದಿನ ಪ್ರಧಾನಿ ಇಂದಿರಾಗಾಂಧಿ ಅವರು ಬಂಡೀಪುರವನ್ನು ಹುಲಿ ಸಂರಕ್ಷಿತ ಪ್ರದೇಶ ಎಂದು ಘೋಷಿಸಿದ್ದರು. ಹುಲಿಗಳ ಸಂಖ್ಯೆ ಕಡಿಮೆಯಾಗುವುದನ್ನು ತಡೆಯಲು ಈ ರಾಷ್ಟ್ರೀಯ ಉದ್ಯಾನವನವನ್ನು ಹುಲಿ ಸಂರಕ್ಷಿತ ಪ್ರದೇಶವೆಂದು ಘೋಷಿಸಲಾಯಿತು. ಪ್ರಾಜೆಕ್ಟ್ ಟೈಗರ್ ಅನ್ನು ಪ್ರಾರಂಭಿಸಿದಾಗ, ಬಂಡೀಪುರದಲ್ಲಿ 12 ಹುಲಿಗಳಿದ್ದವು ಮತ್ತು ಪ್ರಸ್ತುತ ಸಂಖ್ಯೆ 724 ಕ್ಕಿಂತ ಹೆಚ್ಚಿದೆ. ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶವು ಮೈಸೂರು ಆನೆ ಸಂರಕ್ಷಿತ ಪ್ರದೇಶದ ಭಾಗವಾಗಿದೆ. ಈ ಉದ್ಯಾನವನವು ಉತ್ತರದಲ್ಲಿ ಕಬಿನಿ ನದಿ ಮತ್ತು ದಕ್ಷಿಣದಲ್ಲಿ ಮೋಯರ್ ನದಿಯ ನಡುವೆ ಇದೆ. ಈ ಉದ್ಯಾನವನದ ಮೂಲಕ ನುಗು ನದಿ ಹರಿಯುತ್ತದೆ. ಪ್ರವಾಸಿಗರು ಇಲ್ಲಿ ಸಫಾರಿಯ ಜೊತೆಗೆ ದೋಣಿ ವಿಹಾರವನ್ನು ಆನಂದಿಸಬಹುದು.
ಬಂಡೀಪುರ ರಾಷ್ಟ್ರೀಯ ಉದ್ಯಾನವನದ ಪ್ರಮುಖ ವಿವರಗಳು
ಸ್ಥಳ- ಕರ್ನಾಟಕದ ಚಾಮರಾಜನಗರ ಜಿಲ್ಲೆಯ ಮೈಸೂರು-ಊಟಿ ಹೆದ್ದಾರಿಯಲ್ಲಿದೆ.
ಉದ್ಯಾನವನ ತೆರೆಯುವ ಸಮಯ- ಬೆಳಗ್ಗೆ 6:00 ರಿಂದ ಸಂಜೆ 6:00 ರವರೆಗೆ ತೆರೆದಿರುತ್ತದೆ.
ಸಫಾರಿ ಸಮಯ- ಸಫಾರಿ ಬೆಳಗ್ಗೆ 6:00 ರಿಂದ 9:00 ರವರೆಗೆ ಮತ್ತು ಸಂಜೆ 4:00 ರಿಂದ 6:00 ರವರೆಗೆ. ಹವಾಮಾನ ಮತ್ತು ಭದ್ರತಾ ಕಾರಣಗಳಿಂದಾಗಿ ಸಫಾರಿ ಸಮಯ ಬದಲಾವಣೆಗೆ ಒಳಪಟ್ಟಿರುತ್ತದೆ. ಸಫಾರಿ ಸಾಮಾನ್ಯವಾಗಿ ಬೆಳಗ್ಗೆ ಮತ್ತು ಸಂಜೆ ಮಾತ್ರ ನಡೆಯುತ್ತದೆ. ಏಕೆಂದರೆ ಈ ಸಮಯದಲ್ಲಿ ನೀವು ಪ್ರಾಣಿಗಳನ್ನು ನೋಡಲು ಸಾಧ್ಯವಾಗುತ್ತದೆ.

ಬಂಡೀಪುರ ರಾಷ್ಟ್ರೀಯ ಉದ್ಯಾನವನ ಟಿಕೆಟ್ ಬೆಲೆ
ಪ್ರವೇಶ ಶುಲ್ಕ-ಭಾರತೀಯರಿಗೆ 250 ರೂ. ಮತ್ತು ವಿದೇಶಿಯರಿಗೆ 1,500 ರೂ.
ಬಂಡೀಪುರ ರಾಷ್ಟ್ರೀಯ ಉದ್ಯಾನವನದ ಸಫಾರಿ ಬೆಲೆ
ಬಸ್ ಮೂಲಕ ಸಫಾರಿಗೆ ಶುಲ್ಕ 100 ರೂ. ಜೀಪ್ ಸಫಾರಿ 3,000 ರೂ.


Click it and Unblock the Notifications

















