ನೀವು ಸಾಕಷ್ಟು ಭಯಾನಕ ಕೋಟೆಯ ಕಥೆಯನ್ನು ಕೇಳಿರುವಿರಿ. ನಮ್ಮ ದೇಶದಲ್ಲಿ ಅನೇಕ ಪುರಾತನ ಕೋಟೆಗಳಿವೆ. ಅವುಗಳಿಗೆಲ್ಲಾ ತಮ್ಮದೇ ಆದ ಇತಿಹಾಸವಿದೆ. ಕೆಲವು ಕೋಟೆಗಳು ಇತಿಹಾಸವನ್ನು ಸಾರುವಂತವುಗಳಾಗಿದ್ದರೆ ಇನ್ನೂ ಕೆಲವು ಭೂತಬಂಗಲೆಯಂತಾಗಿವೆ. ಇಂದು ನಾವು ಅಂತಹದ್ದೇ ಒಂದು ವಿಶೇಷವಾದ ಅಸೀರ್ಘಡ್ ಕೋಟೆಯ ಬಗ್ಗೆ ನಾವಿಂದು ತಿಳಿಸಲಿದ್ದೇವೆ. ಸಾವಿರಾರು ವರ್ಷಗಳ ಹಿಂದಿನ ರಹಸ್ಯ ಇಲ್ಲಿದೆ ಎನ್ನಲಾಗುತ್ತದೆ. ಹಾಗಾದ್ರೆ ಆ ಕೋಟೆಯಲ್ಲಿ ಅಂತಹ ರಹಸ್ಯ ಏನಿದೆ ಅನ್ನೋದು ನಿಮಗೆ ಗೊತ್ತಾ?

ಅಚಾನಕ್ಕಾಗಿ ಕಿರುಚಾಡುವ ವ್ಯಕ್ತಿ
ಕೋಟೆಯಲ್ಲಿ ಯಾರೋ ತಿರುಗಾಡುತ್ತಿದ್ದಾರೆ. ಅಚಾನಕ್ಕಾಗಿ ಕಿರುಚಾಡುವ ಸದ್ದು ಕೇಳಿಸುತ್ತದೆ. ಹಾಗಾದ್ರೆ ಆ ವ್ಯಕ್ತಿ ಯಾರು ಅನ್ನೋದು ನಿಮಗೇನಾದ್ರೂ ಗೊತ್ತಾ? ಅಸೀರ್ಘಡ್ ಕೋಟೆಯೊಳಗಿರುವ ಹಳೆಯ ಶಿವನ ಮಂದಿರವಿದೆ. ಅದಕ್ಕೂ ಆ ವ್ಯಕ್ತಿಗೂ ಏನ್ ಸಂಬಂಧ ಅನ್ನೋದನ್ನು ತಿಳಿಯಬೇಕಾದ್ರೆ ಮುಂದೆ ಓದಿ.

ಎಲ್ಲಿದೆ ಈ ಅಸೀರ್ಘಡ್ ಕೋಟೆ
PC- Yashasvi nagda
ಮಧ್ಯಪ್ರದೇಶದ ಬುರನ್ಪುರ್ ನಲ್ಲಿರುವ ಅಸೀರ್ಘಡ್ ಕೋಟೆ ಕೆಲವರಿಗೆ ಒಂದು ಭಯಾನಕ ತಾಣವಾಗಿದ್ದರೆ ಇನ್ನೂ ಕೆಲವರಿಗೆ ಪ್ರವಾಸಿ ತಾಣವಾಗಿದೆ. ಶ್ರೀಕೃಷ್ಣನ ಶಾಪದ ಕಾರಣದಿಂದಾಗಿ ಇಲ್ಲಿ ಅಶ್ವಥಮ ಯುಗ ಯುಗಗಳಿಂದ ಅಲೆಯುತ್ತಿದ್ದಾನೆ ಎನ್ನುತ್ತಾರೆ ಸ್ಥಳೀಯರು.

ಐತಿಹಾಸಿಕ ಕೋಟೆ
PC- Abdoali ezzy
ಅಸಿರ್ಘಡ್ ಕೋಟೆಯು ಭಾರತದ ವಿಶೇಷ ರಚನೆಗಳಲ್ಲಿ ಒಂದಾಗಿದೆ. ಇದು ಬರೆಯಲು ಭಾರತದ ಆ ನಿಗೂಢ ಕೋಟೆಗಳು ನಿಖರ ಕಳೆದ ಇತಿಹಾಸಕಾರರೊಂದಿಗೆ ಒಂದಾಗಿದೆ ಸಾಧ್ಯವಾಗುತ್ತದೆ ಸಾಧ್ಯವಿಲ್ಲ. ಈ ಕೋಟೆಯ ಇತಿಹಾಸ ಮಹಾಭಾರತ ಅವಧಿಗೆ ಸಂಬಂಧಿಸಿದೆ ಎಂದು ತಜ್ಞರು ನಂಬಿದ್ದಾರೆ. ಹಲವು ವರ್ಷಗಳ ಹಿಂದಿನ ರಹಸ್ಯ ಈ ಕೋಟೆಯಲ್ಲಿದೆ. ಇಲ್ಲಿನ ನಿಶ್ಯಬ್ಧ ವಾತಾವರಣ ನಿಮ್ಮನ್ನು ಭಯಭೀತರನ್ನಾಗಿಸುತ್ತದೆ..

ಅಸಿರ್ಘಡ್ ಹೆಸರು ಬಂದಿದ್ದು ಹೇಗೆ?
PC- Yashasvi nagda
ವಿದ್ವಾಂಸರು ಹೇಳುವಂತೆ ಅಸೀರ್ಘಡ್ ಕೋಟೆಯ ನಿರ್ಮಾಣವು ರಾಮಾಯಣದ ಅವಧಿಯಲ್ಲಿ ನಡೆದಿದೆ. ಅಸಿರ್ಘಡ್ ನಾಮನಿರ್ದೇಶನಕ್ಕಿಂತ ಹಿಂದಿನ ಇತಿಹಾಸಕ್ಕೆ ಸಂಬಂಧಿಸಿದ ಒಂದು ಕಥೆಯೂ ಇದೆ. ಕಥೆಯ ಪ್ರಕಾರ, ಇಲ್ಲಿ ಸಾವಿರ ಪ್ರಾಣಿಗಳನ್ನು ಹೊಂದಿದ್ದ ಆಶಾ ಎಂಬ ವ್ಯಕ್ತಿ ಇದ್ದನು. ಆತನು ತನ್ನ ಪ್ರಾಣಿಗಳ ರಕ್ಷಣೆಗಾಗಿ ಮಣ್ಣಿನ ಮತ್ತು ಸುಣ್ಣದ ಕಲ್ಲನ್ನು ಬಳಸಿ ಅಹಿರ್ ಇಟ್ಟಿಗೆಯ ಗಾರೆ ಬಳಸಿ ಗೋಡೆಗಳನ್ನು ನಿರ್ಮೀಸಿದನು ಎಂದು ಹೇಳಲಾಗುತ್ತದೆ. ಈ ದಂತಕಥೆಯ ಪ್ರಕಾರ, ಈ ಕೋಟೆಯನ್ನು ಅಹಿರ್ ಹೆಸರಿನಲ್ಲಿ ಅಸಿರ್ಘಡ್ಎಂದು ಕರೆಯಲಾಗುತ್ತಿತ್ತು.

ಗುಪ್ತೇಶ್ವರ ಮಹಾದೇವ್ ದೇವಾಲಯ
PC- Yashasvi nagda
ಈ ಕೋಟೆಯಲ್ಲಿ ಒಂದು ಜಲಾಶಯವಿದೆಇದು ಯಾವತ್ತೂ ಬತ್ತೋದಿಲ್ಲ ಎಂದು ಹೇಳಲಾಗುತ್ತದೆ. ಅಶ್ವತಥ ಪ್ರತಿದಿನ ಇಲ್ಲಿ ಸ್ನಾನ ಮಾಡುತ್ತಾನೆ. ನಂತರ ಇಲ್ಲಿನ ಸಮೀಪದ ಶಿವ ಮಂದಿರದಲ್ಲಿ ಪೂಜೆಗೆ ಮಾಡುತ್ತಾನೆ ಎಂದು ಜನರು ನಂಬುತ್ತಾರೆ. ಇಲ್ಲಿನ ಶಿವನ ದೇವಾಲಯವನ್ನು ಗುಪ್ತೇಶ್ವರ ಮಹಾದೇವ್ ಮಂದಿರ ಎಂದು ಕರೆಯಲಾಗುತ್ತದೆ,

ತಲುಪುವುದು ಹೇಗೆ?
PC- LRBurdak
ಅಸಿರ್ಘಡ್ ಕೋಟೆಯು ಸಮುದ್ರ ಮಟ್ಟದಿಂದ 750 ಅಡಿ ಎತ್ತರದಲ್ಲಿದ್ದು, ಉತ್ತರದಲ್ಲಿ ಸತ್ಪುರಾ ಬೆಟ್ಟಗಳ ತುದಿಯಲ್ಲಿ ಬುರಾನ್ಪುರದಿಂದ ಸುಮಾರು 20 ಕಿ.ಮೀ ದೂರದಲ್ಲಿದೆ. ಬುರ್ದಾನ್ಪುರ್ ಖಾಂಡ್ವಾದಿಂದ ಸುಮಾರು 80 ಕಿ.ಮೀ ದೂರದಲ್ಲಿದೆ. ರೈಲು, ಬಸ್ಸುಗಳು ಮತ್ತು ಟ್ಯಾಕ್ಸಿಗಳು ಇಲ್ಲಿಂದ ಸುಲಭವಾಗಿ ಬುರನ್ಪುರ್ ಕ್ಕೆ ಲಭ್ಯವಿದೆ. ಹತ್ತಿರದ ವಿಮಾನ ನಿಲ್ದಾಣ ಇಂದೋರ್ ಆಗಿದೆ, ಇದು ಸುಮಾರು 180 ಕಿ.ಮೀ ದೂರದಲ್ಲಿದೆ. ಬುರನ್ಪುರ್ ಮಧ್ಯ ಪ್ರದೇಶದ ಎಲ್ಲಾ ಪ್ರಮುಖ ನಗರಗಳಿಗೆ ರೈಲು ಸಂಪರ್ಕ ಹೊಂದಿದೆ.


Click it and Unblock the Notifications
















