ಅಪ್ಪನ್ ತಾಂಪೂರಂ ಸ್ಮಾರಕಂ ಎಂಬುದು ತ್ರಿಶ್ಶೂರಿನ ನಿರ್ಮಾತೃವಾದ ರಾಮವರ್ಮ ಅಪ್ಪನ್ ತಾಂಪೂರನ್ ಅವರ ಸ್ಮಾರಕಾರ್ಥ ನಿರ್ಮಿಸಲಾಗಿರುವ ಒಂದು ಸಾಂಸ್ಕೃತಿಕ ವಸ್ತುಸಂಗ್ರಹಾಲಯವಾಗಿದೆ. ಈತ ಒಬ್ಬ ಸಮರ್ಥ ಆಡಳಿತಗಾರನಾಗಿದ್ದನು ಎಂದು ಸಾರುವ ಕಾರಣದಿಂದ ಇದನ್ನು ಸಕ್ಟನ್ ತಾಂಪೂರನ್ ಎಂದು ಸಹ ಕರೆಯುತ್ತಾರೆ.
ಅಪ್ಪನ್ ತಾಂಪೂರಂ ಸ್ಮಾರಕವನ್ನು ಕೇರಳ ಸಾಹಿತ್ಯ ಅಕಾಡೆಮಿಯು ಅಯ್ಯಂದೋಲ್ ನಲ್ಲಿ 1976ರಲ್ಲಿ ಸ್ಥಾಪಿಸಿದ್ದಲ್ಲದೆ, ಇಂದಿಗು ಅದರ ನಿರ್ವಹಣೆಯ ಉಸ್ತುವಾರಿಯನ್ನು ಹೊತ್ತಿದೆ. ಈ ಸಂಗ್ರಹಾಲಯವು ಪುಸ್ತಕಗಳನ್ನು, ನಿಯತಕಾಲಿಕೆಗಳನ್ನು, ಪುರವಣಿ, ಇತ್ಯಾದಿಗಳ ಸಂಗ್ರಹವನ್ನು ಹೊಂದಿದೆ. ಈ ಸಂಗ್ರಹಗಳು ಇಲ್ಲಿನ ಗತಕಾಲದ ಆಡಳಿತಗಾರನ ಜೀವನ ಚರಿತ್ರೆಯ ಕುರಿತು ಬೆಳಕು ಚೆಲ್ಲುತ್ತವೆ. ವಸಾಹತುಶಾಹಿ ಆಡಳಿತಕ್ಕೆ ಮುನ್ನ ಕೇರಳದ ಸಂಸ್ಕೃತಿ ಹೇಗಿತ್ತು ಎಂದು ತಿಳಿಯುವ ಕುತೂಹಲ ಹಾಗು ಬಿಡುವಿದ್ದರೆ ಒಂದು ಮಧ್ಯಾಹ್ನವನ್ನು ನೀವು ಇಲ್ಲಿ ಕಳೆಯಬಹುದು. ಅಯ್ಯಂದೋಲ್ ತ್ರಿಶ್ಶೂರಿಗೆ ಸಮೀಪದಲ್ಲಿದ್ದು, ಸುಲಭವಾಗಿ ಪ್ರಯಾಣಿಸಬಹುದು.