ಪಂಚಲಂಕುರಿಚಿ ಕೋಟೆ ಎಂದು ಕರೆಯಲ್ಪಡುತ್ತಿದ್ದ ಕಟ್ಟಬೊಮ್ಮನ್ ಸ್ಮಾರಕ ಕೋಟೆಯು ಸಲಿಕುಲಂ ನಲ್ಲಿನ ಒಂದು ಐತಿಹಾಸಿಕ ಯಾತ್ರಾಸ್ಥಳವಾಗಿದೆ. ಮಧುರೈ ನಾಯಕ್ ಸಾಮ್ರಾಜ್ಯದ ಪಾಳೆಯಗಾರನಾಗಿದ್ದ, ಪಂಚಲಂಕುರಿಚಿ ರಾಜ ವೀರ ಪಾಂಡ್ಯ ಕಟ್ಟಬೊಮ್ಮನ್ ಅವರು 18 ನೇ ಶತಮಾನದಲ್ಲಿ ಕಟ್ಟಿದ ಕೋಟೆಯಿದು.
1799 ರಲ್ಲಿ ಬ್ರಿಟೀಷರು ವೀರ ಪಾಂಡ್ಯ ಕಟ್ಟಬೊಮ್ಮನ್ ಅವರನ್ನು ಸೆರೆಹಿಡಿದು, ಈ ಕೋಟೆಯನ್ನು ನಾಶಗೊಳಿಸಿದರು. ನಂತರ ವೀರ ಪಾಂಡ್ಯ ಕಟ್ಟಬೊಮ್ಮನ್ ನ ಸಹೋದರ ಬ್ರಿಟೀಷರಿಂದ ಈ ಕೋಟೆಯನ್ನು ಪುನಃ ವಶಕ್ಕೆ ತೆಗೆದುಕೊಂಡರು. ಸ್ವಾತಂತ್ರ ಸಿಕ್ಕಿದ ಬಳಿಕ, ಭಾರತದ ಪುರಾವಸ್ತು ಗವೇಷಣ ಸಮೀಕ್ಷೆ ಈ ಕೋಟೆಯನ್ನು ಸಂರಕ್ಷಿಸುತ್ತದೆ.
1974 ರಲ್ಲಿ ತಮಿಳುನಾಡು ಸರಕಾರವು ಪಂಚಲಂಕುರಿಚಿ ಕೋಟೆಯ ನೆನಪಿಗೋಸ್ಕರ ಹೊಸ ಕೋಟೆಯನ್ನು ಕಟ್ಟಿ ಅದನ್ನು ಕಟ್ಟಬೊಮ್ಮನ್ ಮೆಮೋರಿಯಲ್ ಫೋರ್ಟ್ ಎಂದು ನಾಮಕರಣ ಮಾಡಿತು. ಕಟ್ಟಬೊಮ್ಮನ್ ಅವರ ಕುಲದೇವತೆಯಾಗಿದ್ದ ಜಕ್ಕಮ್ಮಾಳ್ ಗೆ ಈ ಕೋಟೆಯ ಪರಿಸರದಲ್ಲಿ ಒಂದು ಗುಡಿಯನ್ನೂ ಕಟ್ಟಲಾಗಿದೆ. ಐತಿಹಾಸಿಕ ಸ್ಥಳಗಳ ಭೇಟಿಯನ್ನು ಇಷ್ಟಪಡುವ ಯಾತ್ರಿಗಳು ಈ ಸ್ಥಳವನ್ನು ಭೇಟಿ ನೀಡಲೇಬೇಕು.


Click it and Unblock the Notifications