ಸರ್ದಾರ್ ಸರೋವರ ಅಣೆಕಟ್ಟಿನ ಸಮೀಪದಲ್ಲಿರುವ ರತನ್ ಮಹಲ್ ಕರಡಿ ಅಭಯಾರಣ್ಯ ನೀವು ಒಬ್ಬರೇ ಹೋದಲ್ಲಿ ಅಪಾಯಕಾರಿ ಸ್ಥಳ ಎಂದು ಗುರುತಿಸಲ್ಪಟ್ಟಿದೆ. ಇದು ಕರಡಿ ಮತ್ತು ಅಪಾಯಕಾರಿ ಪ್ರಾಣಿಗಳಾದ ಚಿರತೆ, ಪುನುಗು ಬೆಕ್ಕು, ಭಾರತೀಯ ಪುನುಗು ಬೆಕ್ಕು ನಾಲು ಕೊಂಬುಗಳುಳ್ಳ ಜಿಂಕೆ, ಲಂಗೂರಗಳು ಇತ್ಯಾದಿ ಇವೆ. ಇಲ್ಲಿಗೆ ಭೇಟಿ ನೀಡುವಾಗ ಗುಂಪಲ್ಲೇ ತೆರಳಿ ಹಾಗೂ ಗೈಡ್ ಅನ್ನು ಜೊತೆಗೆ ಕರೆದುಕೊಂಡು ಹೋಗುವುದು ಬಹಳ ಉತ್ತಮ.
ಈ ಅಭಯಾರಣ್ಯದ ಸುತ್ತಲೂ ಇರುವ ಹನ್ನೊಂದು ಗ್ರಾಮಗಳಲ್ಲಿ 7000 ಜನರು ವಾಸವಾಗಿದ್ದಾರೆ. ಈ ಅಭಯಾರಣ್ಯ ಒಟ್ಟು 55.56 ಚ. ಕೀ ವ್ಯಾಪಿಸಿದೆ. ಇದು ಗುಜರಾತಿನ ದಹೋದ್ ಗ್ರಾಮದಲ್ಲಿ ಇದೆ.