ಗೋವಿಂದಗಡ್ ಕೋಟೆ ಮಧ್ಯ ಪ್ರದೇಶದ ರೇವಾ ನಗರದ ಪ್ರಮುಖ ಆಕರ್ಷಣೀಯ ಸ್ಥಳಗಳಲ್ಲೊಂದು. ಈ ಕೋಟೆಯು ಪೂರ್ವಾಜಿತ ಕಥೆಯನ್ನು ಹೊಂದಿದ್ದು, ರೇವಾ ಮಹಾರಾಜರ ಬೇಸಿಗೆ ಅರಮನೆ ಇದಾಗಿತ್ತು. ಈ ಅರಮನೆಯು ನೈಸರ್ಗಿಕವಾಗಿ ಮತ್ತು ಸುಂದರ ಜಲಪಾತದ ನಡುವೆಯಿದೆ. ಈ ಕೋಟೆಯು ವಾಸ್ತುಶಿಲ್ಪದ ಅದ್ಭುತವನ್ನು ಹೊಂದಿದ್ದು, ಇತ್ತೀಚೆಗೆ ಈ ಕೋಟೆಯನ್ನು ದೆಹಲಿ ಮೂಲದ ಕಂಪೆನಿಗೆ ಭೋಗ್ಯಕ್ಕೆಂದು ನೀಡಲಾಗಿದೆ. ಈ ಕೋಟೆಯನ್ನು ಪಾರಂಪರಿಕ ಕಟ್ಟಡ ಮತ್ತು ರಿಸಾರ್ಟ್ ಆಗಿ ಪರಿವರ್ತಿಸಲಾಗುವುದು.
ರಾಜ್ಯ ಸರಕಾರದ ಸಹಕಾರದೊಂದಿಗೆ ದೆಹಲಿ ಮೂಲದ ಸಂಸ್ಥೆಯು ಕೋಟೆಯ ಸಂಸ್ಕೃತಿ ಮತ್ತು ಸಂಪ್ರದಾಯಕ್ಕೆ ಧಕ್ಕೆ ಬರದ ರೀತಿಯಲ್ಲಿ ಅಭಿವೃದ್ದಿಗೆ ಭಾರೀ ಹಣವನ್ನು ಹೂಡಿದೆ. ಅಲ್ಲದೇ, ವಸ್ತು ಸಂಗ್ರಹಾಲಯದಲ್ಲಿರುವ ಆಯುಧಗಳನ್ನು ಶಾರೂಖ್ ಖಾನ್ ಅಭಿನಯದ ಖ್ಯಾತ ಹಿಂದಿ ಚಿತ್ರ ಅಶೋಕದಲ್ಲಿ ಬಳಸಿಕೊಳ್ಳಲಾಗಿದೆ.