ಬಲಿದಾನ ಭವನ, ರಾಜೌರಿ ಪಟ್ಟಣದ ಗುಜ್ಜರ್ ಮಂಡಿ ಚೌಕದಲ್ಲಿರುವ ಜನಪ್ರಿಯ ಪ್ರವಾಸಿಗರ ಆಕರ್ಷಣೆ. ಯುದ್ಧ ಸ್ಮಾರಕ ಎಂದೂ ಕರೆಯಲ್ಪಡುವ ಈ ಸ್ಥಳ 1947-48 ರ ಯುದ್ಧದ ಸಮಯದಲ್ಲಿ ತಮ್ಮ ಜೀವವನ್ನು ಕಳೆದುಕೊಂಡ ನಾಗರಿಕರ ಸ್ಮರಣೆಗಾಗಿ ಕಟ್ಟಲಾಗಿದೆ. ಈ ಯುದ್ಧವು 1947 ರಲ್ಲಿ, ಹಿಂದೂ ದೀಪಗಳ ಹಬ್ಬವಾದ ದೀಪಾವಳಿ ಹಬ್ಬದ ದಿನ ನಡೆಯಿತು. ಆ ರಾತ್ರಿಯ ಸಮಯದಲ್ಲಿ, ಪಾಕಿಸ್ತಾನದ ಪಡೆಗಳು ಭಾರತೀಯ ಸೇನೆಯ ಅನುಪಸ್ಥಿತಿಯಲ್ಲಿ ಈ ಪಟ್ಟಣವನ್ನು ವಹಿಸಿಕೊಂಡಿದ್ದರು.
ಪಂಜಾಬ್ ನ ಸುಗ್ಗಿಯ ಉತ್ಸವ ಬೈಸಾಖಿಯ ಸಂದರ್ಭದಲ್ಲಿ ಅಂದರೆ 13 ಏಪ್ರಿಲ್, 1948 ರಂದು, ಭಾರತೀಯ ಸೇನೆಯು ಅಂತಿಮವಾಗಿ ಈ ಪಟ್ಟಣವನ್ನು ಸ್ವತಂತ್ರಗೊಳಿಸುವುದರಲ್ಲಿ ಯಶಸ್ವಿಯಾದರು. ಈ ಯುದ್ಧದಲ್ಲಿ ಹುತಾತ್ಮರಾದವರಿಗೆ ಗೌರವ ಸೂಚಿಸುವ ಸಲುವಾಗಿ ಈ ಸ್ಥಳದಲ್ಲಿ 'ತ್ಯಾಗ ಸ್ಮಾರಕ' ಎಂದು ಅರ್ಥವನ್ನು ಹೊಂದಿರುವ ’ಬಲಿದಾನ ಭವನ’ ವನ್ನು ನಿರ್ಮಿಸಲಾಗಿದೆ.