ಮೊದಲಿಗೆ ಪರ್ಭಾವತಿ ನಗರ ಎಂದು ಕರೆಯಿಸಿಕೊಳ್ಳುತ್ತಿದ್ದ ಪರ್ಭಾನಿಯು ಮಹಾರಷ್ಟ್ರ ರಾಜ್ಯದ ಒಂದು ಜಿಲ್ಲಾಕೇಂದ್ರವಾಗಿದೆ. ಇದು ಮರಾಠವಾಡ ಪ್ರಾಂತ್ಯದ ಎಂಟು ಜಿಲ್ಲೆಗಳಲ್ಲಿ ಒಂದಾಗಿದೆ. ಈ ಊರು ಸಮುದ್ರಮಟ್ಟದಿಂದ 357 ಅಡಿ ಎತ್ತರದಲ್ಲಿ ನೆಲೆಸಿದ್ದು, ಬಲಘಟ್ ಬೆಟ್ಟಗಳು ಮತ್ತು ಅಜಂತಾ ಬೆಟ್ಟಗಳಿಂದ ಸುತ್ತವರೆದಿದೆ.
ಪರ್ಭಾನಿಯು ಹಿಂದು ಪುರಾಣಗಳಲ್ಲಿ ಪ್ರಮುಖವಾಗಿ ಉಲ್ಲೇಖಗೊಂಡಿದೆ. ಅಲ್ಲದೆ ಇದು ಹಲವು ಸಂತರ ಜನ್ಮ ಸ್ಥಳವಾಗಿದೆ. ಸಾಯಿಬಾಬ ಇಲ್ಲಿ ಅತಿ ಹೆಚ್ಚು ಆರಾಧಿಸಲ್ಪಡುವ ದೈವಪುರುಷ. ಇಲ್ಲಿಗೆ ಸಮೀಪದಲ್ಲಿ ಹಲವು ದೇವಾಲಯಗಳು ನೆಲೆಸಿವೆ.
ದೇಗುಲಗಳ ನೆಲೆಬೀಡು
ಪರ್ಭಾನಿಯು ಆದಿ ಶಕ್ತಿ ಪಾರ್ವತಿ ದೇವಿಯಿಂದ ಈ ಹೆಸರು ಪಡೆದಿದೆ. ಈ ಪ್ರದೇಶವು ಸುಲ್ತಾನರ, ಮುಘಲರ ಮತ್ತು ಮುಸಲ್ಮಾನ ನಿಜಾಮರ ಕಾಲದಲ್ಲಿ ಅಷ್ಟಾಗಿ ಅಭಿವೃದ್ಧಿ ಹೊಂದಲಿಲ್ಲ. ಆದರೆ 1960 ರಲ್ಲಿ ಯಾವಾಗ ಈ ಪ್ರದೇಶ ಮಹಾರಷ್ಟ್ರದಲ್ಲಿ ಲೀನವಾಯಿತೊ ಅಂದಿನಿಂದ ಈ ಊರು ಶ್ರೀಮಂತಿಕೆಯನ್ನು ಪಡೆಯಿತು.
ಪರ್ಭಾನಿಯು ದತ್ತಾತ್ರೇಯರ ಪುನರಾವತಾರವೆಂದು ನಂಬಲಾದ ಸಾಯಿಬಾಬರ ಪವಿತ್ರ ಜನ್ಮಸ್ಥಳವನ್ನು ಹೊಂದಿದೆ. ಅದು ಇಲ್ಲಿಂದ 45 ಕಿ.ಮೀ ದೂರದಲ್ಲಿದೆ. ಜಬರೇಶ್ವರ್ ಬಲೇಶ್ವರ್ ಮಹಾದೇವ್, ಮೋಟ ಮಾರುತಿ ಮತ್ತು ಪರ್ದೇಶ್ವರ ಎಂಬ ಕೆಲವು ದೇವಾಲಯಗಳನ್ನು ನಾವು ಇಲ್ಲಿ ಕಾಣಬಹುದು.
ಇಲ್ಲಿಂದ 40 ಕಿ.ಮೀ ದೂರದಲ್ಲಿರುವ ಜಿಂತುರ್ ನ ಜೈನದೇವಾಲಯವು ನೋಡಲು ಅತ್ಯಂತ ಸುಂದರವಾಗಿದೆ. ಇಲ್ಲಿಗೆ ಸಮೀಪದಲ್ಲಿ ಮುದ್ಗಲ್ ಎಂಬ ಹಳ್ಳಿಯಿದೆ. ನಂಬಿಕೆಗಳ ಪ್ರಕಾರ ಇಲ್ಲಿ ವಿಷ್ಣು ಮತ್ತು ಮಹೇಶ್ವರರು ಇಬ್ಬರು ಕೂಡಿ ಇಲ್ಲಿ ಪೂಜಾ ವಿಧಿಗಳನ್ನು ನಿರ್ವಹಿಸಿದ ಏಕೈಕ ಸ್ಥಳವೆಂದು ಭಾವಿಸಲಾಗಿದೆ. ಇಲ್ಲಿನ ನರಸಿಂಹ ದೇವಾಲಯವು ಮತ್ತೊಂದು ಪ್ರಸಿದ್ಧ ದೇವಾಲಯವಾಗಿದೆ.
ಪರ್ಭಾನಿಯಿಂದ 45ಕಿ.ಮೀ ದೂರದಲ್ಲಿರುವ ಸೆಲು ಎಂಬಲ್ಲಿ ಶ್ರೀ ಕೇಶವರಾಜ್ ಬಾಬಾಸಾಹೇಬರ ದೇವಾಲಯವನ್ನು ನಿರ್ಮಿಸಲಾಗಿದೆ. ಇದು ಅತ್ಯಂತ ಜನಪ್ರಿಯ ದೇವಾಲಯವಾಗಿದ್ದು, ಸಾಯಿಬಾಬಾರ ಗುರುಗಳಾದ ಶ್ರೀ ಕೇಶವರಾಜ್ ಬಾಬಾಸಾಹೇಬರ ನೆನಪಿಗಾಗಿ ನಿರ್ಮಿಸಲಾಗಿದೆ.