ಮುಗ್ಧಳೇಶ್ವರ್ ದೇವಾಲಯವು ಪರ್ಭಾನಿಯ ಸಮೀಪದಲ್ಲಿ ಗೋದಾವರಿ ನದಿ ದಂಡೆಯಲ್ಲಿ ನೆಲೆಸಿದೆ. ಈ ದೇವಾಲಯವು ನದಿಯ ಮಧ್ಯ ಭಾಗದಲ್ಲಿ ನೆಲೆಸಿದ್ದು, ಸರಿ ಸುಮಾರು 900 ವರ್ಷಗಳಷ್ಟು ಹಳೆಯದಾಗಿದೆ. ಈ ದೇವಾಲಯವನ್ನು ನರಸಿಂಹ ಸ್ವಾಮಿಯ ರೂಪವಾದ ಒಂದು ಲಿಂಗಕ್ಕಾಗಿ ನಿರ್ಮಿಸಲಾಗಿದೆ.
ಈ ದೇವಾಲಯದ ವಾಸ್ತುಶಿಲ್ಪವು ಈ ದೇವಾಲಯದ ಇತಿಹಾಸವನ್ನು ಸಾರುತ್ತಿದೆ. ಈ ದೇವಾಲಯವು ಸುಂದರ ಕೆತ್ತನೆಗಳಿಂದ ಕೂಡಿದ್ದು ಕಲ್ಲಿನ ಪ್ರವೇಶದ್ವಾರದ ನಿದರ್ಶನವೊಂದೇ ಸಾಕು, ಇಲ್ಲಿನ ಕೆತ್ತನೆಗಳ ಬಗ್ಗೆ ತಿಳಿಸಲು.
ಮಳೆಗಾಲದಲ್ಲಿ ಇಲ್ಲಿನ ದೇವಾಲಯವು ನದಿಯ ಪ್ರವಾಹದಿಂದ ಸಂಪೂರ್ಣವಾಗಿ ಜಲವೃತವಾದರೂ, ಭಕ್ತಾಧಿಗಳ ಭಕ್ತಿ ಪರವಶತೆಗೆ ಯಾವುದೇ ಭಂಗ ಬರುವುದಿಲ್ಲ. ಕೆಲವು ಭಕ್ತರು ಈಜಿ ದೇವಾಲಯದ ದ್ವಾರದವರೆಗು ಬಂದು ದೇವರ ಅನುಗ್ರಹಕ್ಕಾಗಿ ಪ್ರಾರ್ಥಿಸುತ್ತಾರೆ.
ಈ ದೇವಾಲಯವು ಹಿಂದೆ ಇಲ್ಲಿನ ಸ್ಥಳೀಯ ಪ್ರಮುಖರಾದ – ಶ್ರೀ ಸಾಹೇಬ್ ರಾವ್ ಮುದ್ಗಲ್ ಕರ್ ಮತ್ತು ಶ್ರೀ ಸುಭಾಷ್ ರಾವ್ ಮುದ್ಗಲ್ ಕರ್ ರವರಿಂದ ನಿರ್ವಹಿಸಲ್ಪಡುತ್ತಿತ್ತು.