ರಚಕೊಂಡ ಕೋಟೆಯು 14 ಮತ್ತು 15 ಶತಮಾನದಲ್ಲಿ ಈ ಪ್ರದೇಶವನ್ನು ಆಳಿದ ವೆಲ್ಮಾ ಅರಸರ ರಾಜಧಾನಿಯಾಗಿತ್ತು. ವೆಲ್ಮಾ ಅರಸರು ತಾವು ಮುಸ್ಲಿಮರಾದ ಬಹಮನಿ ಅರಸರೊಂದಿಗೆ ಮಾಡಿಕೊಂಡ ಸಂಧಿ ಮತ್ತು ಕೊಂಡವೀಡಿನ ರೆಡ್ಡಿ ರಾಜರ ವಿರುದ್ಧ ಹೂಡಿದ ಯುದ್ಧಗಳ ಕಾರಣದಿಂದ ಬಹಳ ಕುಖ್ಯಾತರಾಗಿದ್ದರು ಮತ್ತು ಇವರು ಸತತವಾಗಿ ವಾರಂಗಲ್ ನ ಕಾಪಯ್ಯ ನಾಯಕರ ವಿರುದ್ಧ ಹೋರಾಡಿದ್ದರು.
ಈ ಕೋಟೆಯನ್ನು ವೆಲ್ಮಾ ದೊರೆಗಳು ತಮ್ಮನ್ನು ತಾವು ಕಾಪಾಡಲು ಕಟ್ಟಿಕೊಂಡರು ಆದರೆ ಇವರು ಮುಸ್ಲಿಂ ಅರಸರ ಮೋಸಕ್ಕೆ ಒಳಗಾಗಿ ಅವರ ಸಾಮಂತರಾಗಿ ಉಳಿಯಬೇಕಾಯಿತು. ಇದಲ್ಲದೆ ಇವರಿಗೆ ಬ್ರಾಹ್ಮಣನೊಬ್ಬ ನೀವು ಇನ್ನೊಮ್ಮೆ ಅಧಿಕಾರಕ್ಕೆ ಬರಲಾರಿರಿ ಎಂಬ ಶಾಪವನ್ನೂ ನೀಡಿದ್ದ. ಹಲವಾರು ಮಂದಿ ಇದೇ ಶಾಪದ ಕಾರಣದಿಂದ ರಚಕೊಂಡ ಕೋಟೆ ಈ ಸ್ಥಿತಿ ತಲುಪಿದೆ ಎಂದು ಅಭಿಪ್ರಾಯ ಪಡುತ್ತಾರೆ. ಆದರೂ ದೊಡ್ಡ ಸಂಖ್ಯೆಯಲ್ಲಿ ಪ್ರವಾಸಿಗರು ಮತ್ತು ಇಲ್ಲಿನ ಸೂರ್ಯಾಸ್ತವನ್ನು ನೋಡಲಿಚ್ಛಿಸುವ ಸ್ಥಳೀಯರು ಇಲ್ಲಿಗೆ ಆಗಮಿಸುತ್ತಾರೆ.