ಮಟ್ಟಪಲ್ಲಿ ನಲ್ಗೊಂಡ ನಗರಕ್ಕೆ ಸಮೀಪವಾದ ಕೃಷ್ಣಾ ನದಿ ತೀರದಲ್ಲಿರುವ ಒಂದು ಸಣ್ಣ ಹಳ್ಳಿಯಾಗಿದೆ. ಇಲ್ಲಿರುವ ನರಸಿಂಹ ಸ್ವಾಮಿ ದೇವಾಲಯದ ಕಾರಣದಿಂದ ಇದು ಪ್ರವಾಸಿಗಳಲ್ಲಿ ಪ್ರಸಿದ್ಧ ತಾಣವಾಗಿದೆ.
ಈ ಊರು ಮನಸ್ಸಿಗೆ ಮತ್ತು ದೇಹಕ್ಕೆ ಮುದ ನೀಡುವಂತಿದ್ದು ಪ್ರವಾಸಿಗರು ಇದನ್ನು ಖಂಡಿತ ಭೇಟಿ ನೀಡುವ ತಾಣವಾಗಿ ಗುರುತಿಸಿಕೊಳ್ಳಬಹುದಾಗಿದೆ. ಕಾಡಿನ ನಡುವೆ ಮತ್ತು ಪವಿತ್ರ ನದಿ ತಟದಲ್ಲಿ ಇರುವ ಈ ಊರು ಮನಸ್ಸಿಗೆ ನೀಡುವ ಶಾಂತಿ ಮತ್ತು ಆಹ್ಲಾದಕರ ಅನುಭವ ಹೇಳ ತೀರದು. ಇದಕ್ಕೆ ಸಮನಾದ ಶಾಂತಿ ಮತ್ತು ನಿಸರ್ಗ ರಮಣೀಯ ಸೌಂದರ್ಯ ಬೇರೆಲ್ಲೂ ಸಿಗಲು ಸಾಧ್ಯವಿಲ್ಲವೆಂದರೆ ತಪ್ಪಾಗಲಿಕ್ಕಿಲ್ಲ.
ಹಿಂದೂ ಧರ್ಮಗ್ರಂಥಗಳ ಪ್ರಕಾರ ವೇದಾದ್ರಿ, ವೇದಪುರಂ, ಮಂಗಲಗಿರಿ ಮತ್ತು ವದಪಲ್ಲಿಯ ಜೊತೆಗೆ ಮಟ್ಟಪಲ್ಲಿ ಪಂಚನರಸಿಂಹ ಕ್ಷೇತ್ರಗಳಲ್ಲಿ ಒಂದು. ಈ ನಾಲ್ಕು ಕ್ಷೇತ್ರಗಳಿಗೆ ಮಟ್ಟಪಲ್ಲಿ ಕೇಂದ್ರ ಸ್ಥಳವಾಗಿದ್ದು ನಾಲ್ಕೂ ಕ್ಷೇತ್ರಗಳು ನಾಲ್ಕು ದಿಕ್ಕಿನಲ್ಲಿ ನೆಲೆಸಿವೆ. “ಮಟ್ಟಪಲ್ಲಿ ಈ ಕ್ಷೇತ್ರದ ಒಂದೇ ಯಾತ್ರಾ ಸ್ಥಳ ಮತ್ತು ಮಟ್ಟಪಲ್ಲಿಯಲ್ಲಿ ಕೇವಲ ಒಬ್ಬನೇ ದೇವರಿದ್ದಾರೆ. ಏನೇ ಆದರೂ ಈ ಸ್ಥಳಕ್ಕೆ ಸಮಾನವಾದ ಸ್ಥಳವಿಲ್ಲ ಹಾಗೂ ಈ ದೇವನಿಗೆ ಸಮಾನವಾದ ದೇವರಿಲ್ಲ” ಎಂದು ಹೇಳಿರುವುದು ಸರಿಯಾಗಿಯೇ ಇದೆ.