ನಲ್ಗೊಂಡ ಜಿಲ್ಲೆಯಲ್ಲಿರುವ ಸಣ್ಣ ಹಳ್ಳಿ ಪಿಲ್ಲಾಲಮರಿ. ಕಾಕತೀಯ ರಾಜರು ಕಟ್ಟಿಸಿದ ಹಲವಾರು ದೇವಾಲಯಗಳ ಕಾರಣಕ್ಕಾಗಿ ಈ ಊರು ಪ್ರಸಿದ್ಧವಾಗಿದೆ. ಈ ಹಳ್ಳಿಯ ಸಂಪದ್ಭರಿತ ಇತಿಹಾಸವನ್ನು ನೆನಪಿಸುವಂತಹ ಈ ದೇವಾಲಯಗಳೇ ಈ ಊರಿನ ಪ್ರಸಿದ್ಧಿಗೆ ಮೂಲ ಕಾರಣ.
ಕಾಕತೀಯರ ವಾಸ್ತುಶಿಲ್ಪದ ಶ್ರೇಷ್ಠತೆಗೆ ಈ ದೇವಾಲಯಗಳು ಸ್ಪಷ್ಟ ಉದಾಹರಣೆಗಳಾಗಿವೆ. ಹಲವಾರು ವರ್ಷಗಳ ಅಲಕ್ಷತೆಯ ಕಾರಣಕ್ಕಾಗಿ ಈ ದೇವಾಲಯಗಳಲ್ಲಿ ಕೆಲವು ಇಂದು ಪಾಳು ಬಿದ್ದಿವೆ. ಹಾಗಿದ್ದರೂ ಈ ಪ್ರದೇಶದ ಒಂದೇ ಒಂದು ದೇವಾಲಯ, ಕಾಲದ ಸವಾಲುಗಳನ್ನು ದಿಟ್ಟವಾಗಿ ಎದುರಿಸಿ ನಿಂತಿದೆ. ಈ ದೇವಾಲಯವೇ ಶಿವನ ಚೆನ್ನಕೇಶವ ಸ್ವಾಮೀ ದೇವಾಲಯ. ಈ ದೇವಾಲಯ ಕಾಕತೀಯರ ವಾಸ್ತು ಶಿಲ್ಪದ ಶ್ರೇಷ್ಠತೆಗೆ ಹಿಡಿದ ಕೈಗನ್ನಡಿಯಾಗಿದೆ.
ಇದು ನೆಲದಿಂದ ಸುಮಾರು ನಾಲ್ಕು ಅಡಿ ಎತ್ತರದಲ್ಲಿ ನಿಂತ ಅಡಿಪಾಯದಲ್ಲಿ ನಿಂತಿದೆ ಮತ್ತು ಪ್ರವೇಶ ದ್ವಾರದ ಬಳಿ ಇರುವ ದೊಡ್ಡದಾದ ನಂದಿಯ ಮೂರ್ತಿ ಪ್ರವಾಸಿಗಳನ್ನು ಸ್ವಾಗತಿಸುತ್ತದೆ.