ನಲ್ಗೊಂಡ ಜಿಲ್ಲೆಯಲ್ಲಿರುವ ಸಣ್ಣ ಹಳ್ಳಿ ಪಿಲ್ಲಾಲಮರಿ. ಕಾಕತೀಯ ರಾಜರು ಕಟ್ಟಿಸಿದ ಹಲವಾರು ದೇವಾಲಯಗಳ ಕಾರಣಕ್ಕಾಗಿ ಈ ಊರು ಪ್ರಸಿದ್ಧವಾಗಿದೆ. ಈ ಹಳ್ಳಿಯ ಸಂಪದ್ಭರಿತ ಇತಿಹಾಸವನ್ನು ನೆನಪಿಸುವಂತಹ ಈ ದೇವಾಲಯಗಳೇ ಈ ಊರಿನ ಪ್ರಸಿದ್ಧಿಗೆ ಮೂಲ ಕಾರಣ.
ಕಾಕತೀಯರ ವಾಸ್ತುಶಿಲ್ಪದ ಶ್ರೇಷ್ಠತೆಗೆ ಈ ದೇವಾಲಯಗಳು ಸ್ಪಷ್ಟ ಉದಾಹರಣೆಗಳಾಗಿವೆ. ಹಲವಾರು ವರ್ಷಗಳ ಅಲಕ್ಷತೆಯ ಕಾರಣಕ್ಕಾಗಿ ಈ ದೇವಾಲಯಗಳಲ್ಲಿ ಕೆಲವು ಇಂದು ಪಾಳು ಬಿದ್ದಿವೆ. ಹಾಗಿದ್ದರೂ ಈ ಪ್ರದೇಶದ ಒಂದೇ ಒಂದು ದೇವಾಲಯ, ಕಾಲದ ಸವಾಲುಗಳನ್ನು ದಿಟ್ಟವಾಗಿ ಎದುರಿಸಿ ನಿಂತಿದೆ. ಈ ದೇವಾಲಯವೇ ಶಿವನ ಚೆನ್ನಕೇಶವ ಸ್ವಾಮೀ ದೇವಾಲಯ. ಈ ದೇವಾಲಯ ಕಾಕತೀಯರ ವಾಸ್ತು ಶಿಲ್ಪದ ಶ್ರೇಷ್ಠತೆಗೆ ಹಿಡಿದ ಕೈಗನ್ನಡಿಯಾಗಿದೆ.
ಇದು ನೆಲದಿಂದ ಸುಮಾರು ನಾಲ್ಕು ಅಡಿ ಎತ್ತರದಲ್ಲಿ ನಿಂತ ಅಡಿಪಾಯದಲ್ಲಿ ನಿಂತಿದೆ ಮತ್ತು ಪ್ರವೇಶ ದ್ವಾರದ ಬಳಿ ಇರುವ ದೊಡ್ಡದಾದ ನಂದಿಯ ಮೂರ್ತಿ ಪ್ರವಾಸಿಗಳನ್ನು ಸ್ವಾಗತಿಸುತ್ತದೆ.


Click it and Unblock the Notifications