ಗಾಂಧಿ ಬಾಗ್ ಮೀರತ್ ನ ಕೇಂದ್ರ ಭಾಗದಲ್ಲಿರುವ ಉದ್ಯಾನವಾಗಿದೆ. ನಗರದ ಪ್ರಮುಖ ರಸ್ತೆಯಲ್ಲೇ ಈ ಉದ್ಯಾನವಿದೆ. ಇದನ್ನು ಕಂಪೆನಿ ಗಾರ್ಡನ್ ಎಂದೂ ಕರೆಯಲಾಗುತ್ತದೆ. ಇಲ್ಲಿ ಪ್ರತೀ ದಿನ ಸಂಜೆ ಚಿಮ್ಮುವ ಸಂಗೀತ ಕಾರಂಜಿಯನ್ನು ನೋಡಲು ಸ್ಥಳೀಯರು ಹಾಗೂ ಪ್ರವಾಸಿಗರು ಭಾರೀ ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಉದ್ಯಾನಕ್ಕೆ ಮಹಾತ್ಮ ಗಾಂಧಿ...
ಮೀರತ್ ನಲ್ಲಿರುವ ಜೀವಪರಿಸರ ಉದ್ಯಾನ ಔರಂಗನಾಥ ದೇವಸ್ಥಾನದ ಸಮೀಪವಿರುವ ಜನಪ್ರಿಯ ಉದ್ಯಾನ. ಮೀರತ್ ನಲ್ಲಿ ನೇಮಿಸಲ್ಪಟ್ಟಿದ್ದ ಭಾರತೀಯ ಸೇನೆ ಮನರಂಜನೆ ಹಾಗೂ ಸಂರಕ್ಷಣೆ ಉದ್ದೇಶದಿಂದ ಇದನ್ನು ನಿರ್ಮಿಸಿತ್ತು. ಹಲವಾರು ಮಂದಿ ಇಲ್ಲಿಗೆ ದಿನಾಲೂ ಭೇಟಿ ನೀಡಿ ವಿಶ್ರಾಂತಿ ಪಡೆಯುತ್ತಾರೆ. ಈ ಉದ್ಯಾನದಲ್ಲಿ ವಿಭಿನ್ನ ಜಾತಿಯ ಮರ ಹಾಗೂ...
ಸೂರಜ್ ಕುಂಡ್ ಹಿಂದುಗಳಿಗೆ ಪ್ರಸಿದ್ಧ ಸ್ಥಳವಾಗಿದೆ. ಇದನ್ನು 1714ರಲ್ಲಿ ಸ್ಥಳೀಯ ವ್ಯಾಪಾರಿಯೊಬ್ಬರು ನಿರ್ಮಿಸಿದ್ದರು. ಕೊಳವನ್ನು ಮೊದಲು ಅಬು ನಾಳದಿಂದ ತುಂಬಿಸಲಾಗುತ್ತದೆ. ಆದರೆ ವರ್ಷ ಕಳೆದಂತೆ ಇದನ್ನು ಗಂಗಾ ಚಾನಲ್ ನಿಂದ ತುಂಬಿಸಲಾಗುತ್ತಿದೆ. ಹಲವಾರು ಹಿಂದೂ ದೇವಾಲಯಗಳು ಇಲ್ಲಿರುವ ಕಾರಣದಿಂದ ಇದು ಹಿಂದೂಗಳಿಗೆ...
ಜೈನ ಮಂದಿ ಸಲಾವ ಹಳೆ ನಗರ ಸಲಾವದಲ್ಲಿ ನಿರ್ಮಿಸಲಾಗಿರುವ ಪ್ರಾಚೀನ ಜೈನ ಮಂದಿರವಾಗಿದೆ. ಮೊದಲ ಜೈನ ತೀರ್ಥಂಕರ ರಿಶಬದೇವ್ ಸಮಯದಲ್ಲಿ ಈ ನಗರ ಬೆಳೆಯಿತು. ಕಾಕತಾಳೀಯವೆಂಬಂತೆ ಸಲಾವ ಜೈನ ಯಾತ್ರಾರ್ಥಿಗಳು ಹಾಗೂ ಅನುಯಾಯಿಗಳಿಗೆ ಪ್ರಮುಖ ಧಾರ್ಮಿಕ ಮತ್ತು ಆಧ್ಯಾತ್ಮಿಕ ಸ್ಥಳವಾಗಿದೆ. ಜೈನ ತೀರ್ಥಂಕರರಾದ ಶಾಂತಿನಾಥ, ಕುಂಥನಾಥ ಮತ್ತು...
ಪ್ರಸಿದ್ಧ ಮುಘಲ್ ರಾಣಿ ನೂರ್ ಜಹಾನ್ ಸ್ಥಳೀಯ ಮುಸ್ಲಿಂ ಹರ್ಜತ್ ಶಹಪೀರ್ ಗೆ ಗೌರವ ಸೂಚಕವಾಗಿ ಶಹಪೀರ್ ಶಹಬ್ ಕಿ ದರ್ಗಾವನ್ನು ನಿರ್ಮಿಸಿದಳು. ಇದರ ವಿಶಿಷ್ಠ ರೀತಿಯ ವಾಸ್ತುಶಿಲ್ಪಕ್ಕಾಗಿ ದರ್ಗಾವು ಪ್ರಸಿದ್ಧಿಯಾಗಿದೆ. ಇದರಲ್ಲಿ ಯಾವುದೇ ಕೊಠಡಿಗಳಿಲ್ಲ. ಆದರೆ ವಿಭಿನ್ನ ಶೈಲಿಯ ಕಲ್ಲಿನ ಚಿತ್ರಕಲೆಗಳಿವೆ. ಹರ್ಜತ್ ಶಹಪೀರ್ ನ...
ಮೀರತ್ ನಲ್ಲಿರುವ ಜಾಮಾ ಮಸೀದಿ ಉತ್ತರ ಭಾರತದ ಅತ್ಯಂತ ಪ್ರಾಚೀನ ಮಸೀದಿಯೆಂದೇ ಪರಿಗಣಿಸಲ್ಪಟ್ಟಿದೆ. 1019ರಲ್ಲಿ ವಝೀರ್ ನ ಸುಲ್ತಾನ ಮಹಮದ್ ಘಜ್ನವಿ ಇದನ್ನು ನಿರ್ಮಿಸಿದ್ದ. ಪ್ರಾರ್ಥನೆ ಸಲ್ಲಿಸಲು ಮತ್ತು ಆಶೀರ್ವಾದ ಪಡೆಯಲು ಮುಸ್ಲಿಮರು ಇಲ್ಲಿಗೆ ಭೇಟಿ ನೀಡುತ್ತಾರೆ. ಮುಘಲ್ ದೊರೆ ಹುಮಯೂನ ಮಸೀದಿಯ ಒಂದು ಭಾಗವನ್ನು...
ಚಂಡಿ ದೇವಿ ದೇವಸ್ಥಾನ ಸೂರಜ್ ಕುಂಡ್ ನಲ್ಲಿರುವ ಪ್ರಸಿದ್ಧ ಹಿಂದೂ ದೇವಸ್ಥಾನ. ಪ್ರತೀ ವರ್ಷ ಹೋಳಿ ಬಳಿಕ ನಡೆಯುವ ನೌಚಂಡಿ ವಾರ್ಷಿಕ ಮೇಳಕ್ಕೆ ಇದು ಪ್ರಸಿದ್ಧಿಯಾಗಿದೆ. ಈ ಸಮಯದಲ್ಲಿ ದೇವಸ್ಥಾನವನ್ನು ಹೂ ಹಾಗೂ ದೀಪಗಳಿಂದ ಅಲಂಕರಿಸಲಾಗುತ್ತದೆ ಮತ್ತು ವಿವಿಧ ಬಗೆಯ ಅಂಗಡಿಗಳು ಇಲ್ಲಿರುತ್ತದೆ. ಹಲವಾರು ವರ್ಷಗಳ ಮೊದಲು ದೇವಿ...
ಬಲೆ ಮಿಯನ್ ಕಿ ದರ್ಗಾ ಚಾಂದಿ ದೇವಿ ಮಂದಿರದ ಸಮೀಪವೇ ಇದೆ. ಇದು ತುಂಬಾ ಪ್ರಾಚೀನ ದರ್ಗಾವಾಗಿದ್ದು, 1194ರಲ್ಲಿ ಇದನ್ನು ದೆಹಲಿ ಸುಲ್ತಾನರಲ್ಲಿ ಮೊದಲನೇಯಾತ ನಿರ್ಮಿಸಿದ್ದ. ಪ್ರವಾಸಿಗಳು ಮತ್ತು ಮುಸ್ಲಿಮರು ಭಾರೀ ಸಂಖ್ಯೆಯಲ್ಲಿ ಈ ದರ್ಗಾಕ್ಕೆ ಭೇಟಿ ನೀಡುತ್ತಾರೆ. ನೌಚಂದಿ ಮೇಳದ ವೇಳೆ ನಡೆಯುವ ಉರುಸ್ ಉತ್ಸವ ವೇಳೆ ಇಲ್ಲಿಗೆ...
ಗಿಲೆಸ್ಪಿ ಸಮಾಧಿ ಸೇಂಟ್ ಜಾನ್ ಚರ್ಚ್ ಆವರಣದಲ್ಲಿದೆ ಮತ್ತು ಜನರಲ್ ಗಿಲೆಸ್ಪಿ ಜನ್ಮ ಮತ್ತು ಮರಣ ದಿನಾಂಕವನ್ನು ಇದರಲ್ಲಿ ಬರೆಯಲಾಗಿದೆ. ಗಿಲೆಸ್ಪಿ ಬ್ರಿಟಿಷ್ ಸೇನೆಯ ಜನಪ್ರಿಯ ಅಧಿಕಾರಿಯಾಗಿದ್ದರು.
ಪರೀಕ್ಷಿತ್ ಗಡ್ ಮೀರತ್ ಜಿಲ್ಲೆಯಲ್ಲಿರುವ ಮುಖ್ಯ ನಗರ. ಈ ನಗರ ಪರ್ವತದ ಮೇಲಿದೆ. ಇಲ್ಲಿ ಪ್ರಾಚೀನ ಕೋಟೆಯನ್ನು ಪರೀಕ್ಷಿತ ಎಂಬಾತ ನಿರ್ಮಿಸಿದನಂತೆ. ಇತ್ತೀಚೆಗೆ ನಡೆಸಿದ ಉತ್ಖನನ ವೇಳೆ ಮಡಕೆಯಲ್ಲಿ ನಾಣ್ಯ, ಮಡಕೆ ಚೂರುಗಳು ಮತ್ತು ಹಳೆ ಕಾಲದ ಅಲಂಕಾರಿಕ ವಸ್ತುಗಳು ಪತ್ತೆಯಾಗಿದ್ದವು. ಕೋಟೆ ಈಗ ನೆಲಸಮವಾಗಿದ್ದರೂ ಸ್ಥಳದ ಗತವೈಭವ...
ಶಾಹಿ ಈದ್ಗಾವು ಸುಮಾರು 600 ವರ್ಷ ಹಳೆಯ ಮಸೀದಿಯಾಗಿದ್ದು, ಮುಘಲ್ ದೊರೆ ಇತುಮಿಶ್ ನ ಮಗ ಇದನ್ನು ನಿರ್ಮಿಸಿದ್ದ. ಬೃಹತ್ ಮಸೀದಿಯಾಗಿರುವ ಇದರಲ್ಲಿ ಸುಮಾರು ಒಂದು ಲಕ್ಷ ಜನರಿಗೆ ಸ್ಥಳಾವಕಾಶವಿದೆ. ಇಲ್ಲಿನ ವಾಸ್ತುಶಿಲ್ಪ ಮತ್ತು ಮುಘಲ್ ಕೆತ್ತನೆಗಳು ಭಾರತದಲ್ಲಿ ದೆಹಲಿ ಸುಲ್ತಾನರ ಮತ್ತು ಮುಘಲ್ ದೊರೆಗಳ ಪ್ರಾಮುಖ್ಯತೆ ಮತ್ತು...
ಮೀರತ್ ನ ಮಧ್ಯಭಾಗದಲ್ಲಿರುವ ಅಪ್ಪು ಘರ್ ಮಕ್ಕಳಿಗಾಗಿ ನಿರ್ಮಿಸಲಾಗಿರುವ ಜನಪ್ರಿಯ ಅಮ್ಯೂಸ್ ಮೆಂಟ್ ಪಾರ್ಕ್ ಆಗಿದೆ. ರಜಾ ದಿನಗಳು ಹಾಗೂ ಬೇಸಿಗೆ ರಜಾ ದಿನಗಳಲ್ಲಿ ಈ ಪಾರ್ಕ್ ಜನರಿಂದ ತುಂಬಿತುಳುಕುತ್ತಿರುತ್ತದೆ. ಹಲವಾರು ಕುಟುಂಬಗಳು ವಾರಾಂತ್ಯಕ್ಕೆ ಈ ಪಾರ್ಕ್ ಗೆ ಬಂದು ಪರಿಣಾಮಕಾರಿ ವೆಚ್ಚದಲ್ಲಿ ರಜೆ ಹಾಗೂ ಸಮಯ ಕಳೆಯಲು...
ಕಾಳಿ ಪಲ್ತಾನ ಮಂದಿರವು ಸುಂದರ ಹಿಂದೂ ಮಂದಿರವಾಗಿದೆ. ಈ ಸ್ಥಳದಲ್ಲೇ 1857ರಲ್ಲಿ ಮೊದಲ ಸ್ವಾತಂತ್ರ್ಯ ಸಂಗ್ರಾಮದ ಹೋರಾಟ ಆರಂಭವಾಗಿತ್ತು. ವಿಶೇಷ ದಿನಗಳಲ್ಲಿ ಹಾಗೂ ಪ್ರತೀ ಸೋಮವಾರ ಇಲ್ಲಿ ಭಾರೀ ಜನ ಸೇರುತ್ತಾರೆ. ಅದ್ಭುತ ಹಾಗೂ ಜೀವವಿರುವಂತೆ ಕಾಣುವ ಶಿವ ಮತ್ತು ಪಾರ್ವತಿಯ ಮೂರ್ತಿಗಳು ಇಲ್ಲಿವೆ. ಹೆಚ್ಚಾಗಿ ಸ್ಥಳೀಯರು...
ಮಾನ್ಸಾ ದೇವಿ ದೇವಸ್ಥಾನ ಸೂರಜ್ ಕುಂಡ್ ನಲ್ಲಿರುವ ಅತ್ಯಂತ ಪ್ರಾಚೀನ ಹಿಂದೂ ದೇವಸ್ಥಾನ. ಹಿಂದೂ ಧರ್ಮಿಯರು ಇಲ್ಲಿಗೆ ಪ್ರತೀ ದಿನ ಭೇಟಿ ನೀಡುತ್ತಾರೆ. ಇಲ್ಲಿನ ಸುಂದರ ಮೂರ್ತಿಗಳು ಮತ್ತು ಕೆತ್ತನೆ ಕೆಲಸಗಳಿಗೆ ಇದು ಪ್ರಸಿದ್ದಿಯಾಗಿದೆ.
ಮೀರತ್ ನ ಮೈನ್ ಮಾಲ್ ರಸ್ತೆಯಲ್ಲಿ ಪೈನ್ ಚಿಲ್ಡ್ರನ್ ಪಾರ್ಕ್ ಇದೆ. ಇಲ್ಲಿರುವ ವಿಭಿನ್ನ ಬಗೆಯ ಹೂ ಹಾಗೂ ಸಸ್ಯಗಳನ್ನು ನೋಡಲು ಮಕ್ಕಳು ಹಾಗೂ ಅವರ ಕುಟುಂಬ ಇಲ್ಲಿಗೆ ಆಗಮಿಸುತ್ತದೆ. ಮಕ್ಕಳು ಇಲ್ಲಿಗೆ ಬಂದು ಹೊರಾಂಗಣ ಆಟದಲ್ಲಿ ತೊಡಗಿಕೊಂಡರೆ, ದೊಡ್ಡವರು ಉದ್ಯಾನದಲ್ಲಿನ ಪ್ರಶಾಂತ ವಾತಾವರಣವನ್ನು ಆನಂದಿಸುತ್ತಾರೆ. ಭಾರತೀಯ...