ಮೈಲಾಡುತುರೈನಲ್ಲಿ ತುಳು ಉತ್ಸವಂ ಎನ್ನುವುದು ಒಂದು ತಿಂಗಳ ಕಾಲ ನಡೆಯುವ ಹಬ್ಬ. ಇದು ಐಪ್ಪಾಸಿ (ಅಕ್ಟೋಬರ್ ಮತ್ತು ನವಂಬರ್ ತಿಂಗಳುಗಳ ಮಧ್ಯಭಾಗ) ತಿಂಗಳಲ್ಲಿ ನಡೆಯುತ್ತದೆ. ಇದಕ್ಕೆ ಲಕ್ಷಾಂತರ ಭಕ್ತಾದಿಗಳು ಬರುತ್ತಾರೆ. ಇದು ಕಾವೇರಿ ದಂಡೆಯಲ್ಲಿ ನಡೆಯುವ ದಕ್ಷಿಣ ಭಾರತದ ಕುಂಭ ಮೇಳ. ಈ ಉತ್ಸವದ ಕಡೆಯದಿನವನ್ನು ಕಡೈಮುಗಂ ಎಂದು ಆಚರಿಸಲಾಗುತ್ತದೆ. ಈ ದಿನದಂದು ಪವಿತ್ರ ನದಿಗಳಾದ ಗಂಗಾ, ಯಮುನಾ ಮತ್ತು ಸರಸ್ವತಿಗಳು ಕಾವೇರಿಯಲ್ಲಿ ಸೇರಿ ಅದನ್ನು ಪವಿತ್ರಗೊಳಿಸುತ್ತದೆ ಎಂದು ನಂಬಲಾಗುತ್ತದೆ. ಆ ದಿನ ಇಲ್ಲಿ ಸ್ನಾನ ಮಾಡಿದಲ್ಲಿ ನಾಲ್ಕು ಪವಿತ್ರ ನದಿಗಳಲ್ಲಿ ಸ್ನಾನ ಮಾಡಿದ ಪುಣ್ಯ ಲಭಿಸುತ್ತದೆ ಎಂದು ಹೇಳಲಾಗುತ್ತದೆ. ಕೊನೆದಿನದಂದು ಇಲ್ಲಿ ರಥೋತ್ಸವ ಕೂಡ ಇರುತ್ತದೆ. ವಲ್ಲಲಾರ್ ದೇವಸ್ಥಾನ, ಮಯೂರನಾಥಸ್ವಾಮಿ ದೇವಾಲಯ ಮತ್ತು ರಂಗನಾಥಸ್ವಾಮಿ ದೇವಾಲಯಗಳ ವಿಗ್ರಹಗಳನ್ನು ಈ ಸಮಯದಲ್ಲಿ ನಗರದ ತುಂಬಾ ವಿಶೇಷವಾಗಿ ಅಲಂಕರಿಸಿದ ರಥಗಳಲ್ಲಿ ಪ್ರದಕ್ಷಿಣೆ ಮಾಡಿಸಲಾಗುತ್ತದೆ.