ಇಲ್ಲಿ ಶಿವನನ್ನು ಜ್ಞಾನದ ಅಧಿದೇವತೆ ಗುರುವೆಂದು ಚಿತ್ರಿಸಲಾಗಿದೆ. ಶಿವನ ಈ ರೂಪ ದಕ್ಷಿಣ ಭಾರತದಲ್ಲಿ ಪ್ರಸಿದ್ಧವಾದದ್ದು. ದಕ್ಷಿಣಾಮೂರ್ತಿ ಎಂದರೆ “ದಕ್ಷಿಣದೆಡೆಗೆ ಮುಖ ಮಾಡಿರುವವನು” ಎಂದರ್ಥ. ಎಲ್ಲ ದಕ್ಷಿಣಾಮೂರ್ತಿ ದೇವಾಲಯಗಳಲ್ಲೂ ವಿಗ್ರಹವು ಪೂರ್ವಾಭಿಮುಖಕ್ಕೆ ಬದಲಾಗಿ ದಕ್ಷಿಣಾಭಿಮುಖವಾಗಿರುತ್ತದೆ. ದಕ್ಷಿಣಾಮೂರ್ತಿ ವಿಗ್ರಹವು ನಾಲ್ಕು ಕೈಗಳಿಂದ ಕೂಡಿದ್ದು ಅರಳೀ ಮರದ ಕೆಳಗೆ ಕೂತಂತಿರುತ್ತದೆ. ಅವನ ಬಲಗಾಲು ಅಪಸ್ಮಾರ ಎಂಬ ಅಜ್ಞಾನವನ್ನು ಪಸರಿಸುವ ಅಸುರನ ಮೇಲಿರುತ್ತದೆ. ಎಡಗಾಲು ತೊಡೆಯ ಮೇಲಿರುತ್ತದೆ. ಅವನ ಒಂದು ಕೈಯಲ್ಲಿ ಬೆಂಕಿ, ಹಾವು ಮತ್ತು ಜಪಮಾಲೆ ಅಥವ ಎರಡನ್ನೂ ಮತ್ತೊಂದು ಕೈಯಲ್ಲಿ ಹಿಡಿದಿರುತ್ತಾನೆ. ಅವನ ಬಲಗೈ ಸಾಮಾನ್ಯವಾಗಿ ಜ್ಞಾನಮುದ್ರೆಯಲ್ಲಿರುತ್ತದೆ ಮತ್ತು ಎಡಗೈ ಆದ್ಯ ಮುದ್ರೆಯಲ್ಲಿರುತ್ತದೆ. ಶಿವನನ್ನು ದಕ್ಷಿಣಾಮೂರ್ತಿಯಾಗಿ ಚಿತ್ರಿಸುವ ಈ ದೇವಾಲಯ ಅಪರೂಪದ್ದು.