ಗ್ವಾಲಿಯರ್ ಪ್ರದೇಶದ ಖಜಾಂಚಿಯಾಗಿದ್ದ ಸೇಠ್ ಗೋಕುಲದಾಸ್ ಪಾರೀಖ್ ಎಂಬಾತ 1814ನೇ ಇಸ್ವಿಯಲ್ಲಿ ಈ ದ್ವಾರಕಾಧೀಶ ಮಂದಿರವನ್ನು ಕಟ್ಟಿಸಿದ. ಈ ಮಂದಿರ ವಿಶ್ರಾಮ್ ಘಾಟ್ಗೆ ಬಹಳ ಸಮೀಪದಲ್ಲಿದೆ. ಶ್ರೀಕೃಷ್ಣನು ದ್ವಾರಕಾಧೀಶ ಅಥವಾ ದ್ವಾರಕಾದ ದೊರೆ ಎಂದು ಕರೆಯಲಾಗುವುದರಿಂದ ಈ ಮಂದಿರಕ್ಕೆ ಈ ಹೆಸರು ಬಂದಿದೆ. ಮಂದಿರದ ಎಲ್ಲಾ...
ಪ್ರಸಿದ್ಧ ಕೃಷ್ಣ ಜನ್ಮಭೂಮಿ ಮಂದಿರ ಅಥವಾ ಕೃಷ್ಣ ಜನ್ಮಸ್ಥಾನ ಭಾರತದಲ್ಲಿನ ಹಿಂದೂಗಳ ಹಲವಾರು ಪೂಜಾ ಸ್ಥಳಗಳಲ್ಲಿ ಬಹುಮುಖ್ಯವಾದದ್ದು. ಮಂದಿರದ ಸಂಕೀರ್ಣದಲ್ಲಿ ಒಂದು ಸಣ್ಣ ಸೆರೆಮನೆಯಂತಹ ಕಟ್ಟಡವು ಇದೆ. ಇದೇ ಸ್ಥಳದಲ್ಲಿ ಶ್ರೀಕೃಷ್ಣನು ಜನ್ಮ ತಾಳಿದ್ದು ಎಂಬ ನಂಬಿಕೆ ಇದೆ. ಈ ಮಂದಿರವನ್ನು ಆರ್ಚಾದ ರಾಜಾ ವೀರ ಸಿಂಗ್ ಬಂಡೇಲನು...
ಸರಿಯಾಗಿ ಪಟ್ಟಣದ ಮುಖ್ಯ ಅಂಚೆ ಕಚೇರಿಯ ಮುಂಭಾಗದಲ್ಲಿ ಈ ರಂಗಭೂಮಿಯು ಉಪಸ್ಥಿತವಿದೆ. ಇದು ಧಾರ್ಮಿಕ ಹಾಗು ಐತಿಹಾಸಿಕ ಪ್ರಾಮುಖ್ಯತೆಯನ್ನು ಹೊಂದಿದೆ. ಪೌರಾಣಿಕ ಕಥೆಯ ಪ್ರಕಾರ, ಇದೇ ಸ್ಥಳದಲ್ಲಿ ಶ್ರೀಕೃಷ್ಣ ತನ್ನ ಸೋದರಮಾವ ಕಂಸನ ಜೊತೆ ಕುಸ್ತಿಯಾಡಿದ್ದು.
ಈ ಪಟ್ಟಣದಲ್ಲಿ ಕಂಸನನ್ನು ಕೊಂದು ತನ್ನ ತಂದೆ ತಾಯಿಯನ್ನು...
ಮಥುರಾ ಪಟ್ಟಣ ಪ್ರಾಚೀನ ತಾಣಗಳು, ಧಾರ್ಮಿಕ ಪೂಜಾ ಸ್ಥಳಗಳಿಗೆ ಪ್ರಸಿದ್ಧಿ ಹೊಂದಿದ್ದರೂ ಈ ಗೀತಾ ಮಂದಿರವು ಇತ್ತೀಚೆಗಷ್ಟೆ ಸೇರ್ಪಡೆಯಾಗಿದೆ. ಭಾರತದ ಪ್ರಸಿದ್ಧ ಕೈಗಾರಿಕೋದ್ಯಮಿ ಪರಿವಾರವಾದ ಬಿರ್ಲಾ ಪರಿವಾರವು ಈ ಗೀತಾ ಮಂದಿರವನ್ನು ಕಟ್ಟಿಸಿದೆ.
ಈ ಗೀತಾ ಮಂದಿರದ ಗೋಡೆಗಳ ಮೇಲೆ ಹಿಂದೂಗಳ ಪವಿತ್ರ ಗ್ರಂಥವಾದ...
ಯಮುನಾ ನದಿಯ ತಟದಲ್ಲಿ ಕಂಸ ಕಿಲ್ಲಾ ಉಪಸ್ಥಿತವಿದೆ. ಈಗ ಈ ಕಟ್ಟಡ ನಾಶವಾಗಿದ್ದರೂ ಆಗಿನ ಕಾಲದಲ್ಲಿ ಇದು ಶ್ರೀಕೃಷ್ಣದ ಸೋದರಮಾವ ಕಂಸನ ಮನೆಯಾಗಿತ್ತು. ಈ ಕೋಟೆಯನ್ನು ದೊಡ್ಡ ಪ್ರದೇಶದಲ್ಲಿ ಕಟ್ಟಲಾಗಿದ್ದು ಸುತ್ತಲೂ ಭದ್ರವಾದ ಗೋಡೆಗಳಿವೆ. ಹಿಂದೂ ಹಾಗು ಮುಸಲ್ಮಾನರ ಶಿಲ್ಪಕಲೆಯ ಶೈಲಿಯನ್ನು ಈ ಕೋಟೆ ಪ್ರತಿಬಿಂಬಿಸುತ್ತದೆ....
ರಂಗೇಶ್ವರ ಮಹದೇವ ದೇಗುಲ ಕಲ್ಲಿನಿಂದ ಕಟ್ಟಲಾದ ಸುಂದರ ಮಂದಿರ. ಇದನ್ನು ಶಿವನಿಗೆ ಸಮರ್ಪಿಸಲಾಗಿದೆ. ಮಥುರಾ ಪಟ್ಟಣದ ದಕ್ಷಿಣ ಭಾಗದಲ್ಲಿ ಇದು ಉಪಸ್ಥಿತವಿದೆ. ಈ ಮಂದಿರದಲ್ಲಿ ಹಿಂದೂ ಶೈಲಿಯ ಚಿತ್ರಕಲೆ ಮತ್ತು ಕೆತ್ತನೆಯನ್ನು ಗೋಡೆಗಳ ಮೇಲೆ ಕಾಣಬಹುದು. ಪಟ್ಟಣದಲ್ಲಿರುವ ಕೆಲವೇ ಕೆಲವು ಶಿವನ ಮಂದಿರಗಳಲ್ಲಿ ಇದೂ ಒಂದು. ಮಥುರಾ...
ಮಥುರಾ ಪಟ್ಟಣವನ್ನು ಹಿಂದೂಗಳ ಪವಿತ್ರ ಕ್ಷೇತ್ರ ಎಂದು ಪರಿಗಣಿಸಲಾಗುತ್ತಿದೆ. ಅನೇಕ ಪ್ರಾಚೀನ ಮಂದಿರಗಳಿಗೆ ಈ ಕ್ಷೇತ್ರ ಮನೆಯಾಗಿದೆ. ಇಲ್ಲಿಯ ಹಲವಾರು ಮಂದಿರಗಳು ಅಸಂಖ್ಯಾತ ಭಕ್ತ ಸಮೂಹವನ್ನು ವರ್ಷವಿಡೀ ಆಕರ್ಷಿಸುತ್ತಿವೆ. ಅಂತಹ ಮಂದಿರಗಳಲ್ಲಿ ಪೋಟರ ಕುಂಡವೂ ಒಂದು.
ಪೋಟರ ಕುಂಡ ಎಂದರೆ 'ಪವಿತ್ರ ದ್ವಾರ' ಎಂಬರ್ಥ....
ಸಾಕಷ್ಟು ಪ್ರವಾಸಿಗರಿಗೆ ಭಾರತ ಆದ್ಯಾತ್ಮಿಕ ಕೇಂದ್ರವಾಗಿದೆ. ಮಥುರಾ ನಗರ ಭಾರತದ ಎಲ್ಲ ಪವಿತ್ರ ಕ್ಷೇತ್ರಗಳಲ್ಲಿ ಮುಖ್ಯವಾದದ್ದು. ಇದು ಶಾಂತಿ ಹಾಗು ಜ್ಞಾನೋದಯವನ್ನು ಬಯಸುವ ಸಾಕಷ್ಟು ಸಂದರ್ಶನಕಾರರನ್ನು ತನ್ನತ್ತ ಸೂಜಿಗಲ್ಲಿನಂತೆ ಆಕರ್ಷಿಸುತ್ತಿದೆ. ಬಹಳಷ್ಟು ಪ್ರವಾಸಿಗರು ಜೈ ಗುರುದೇವ ಆಶ್ರಮಕ್ಕೆ ದಿನಂಪ್ರತಿ ಬರುತ್ತಾರೆ....
ರಂಗೇಶ್ವರ ಮಹದೇವ ಮಂದಿರದಂತೆ ಭೂತೇಶ್ವರ ಮಹದೇವ ಮಂದಿರ ಕೂಡ ಶಿವನಿಗೆ ಸಮರ್ಪಿಸಲಾಗಿದೆ. ಇದು ಭಾರತದಲ್ಲಿ ಇರು ಪ್ರಾಚೀನ ಮಂದಿರಗಳಲ್ಲಿ ಒಂದು. ಯಾತ್ರಾರ್ಥಿಗಳು ತಮ್ಮ ಪ್ರಾರ್ಥನೆಯನ್ನು ಸಲ್ಲಿಸಲು ಶಿವರಾತ್ರಿಯ ಶುಭಸಂದರ್ಭದಲ್ಲಿ ಇಲ್ಲಿಗೆ ಬರುತ್ತಾರೆ. ಮಥುರೆಗೆ ಕೃಷ್ಣನ ಜನ್ಮಸ್ಥಾನವನ್ನು ನೋಡಲೆಂದೇ ಜನರು ಬರುತ್ತಾರಾದರೂ...
ಮಥುರಾ-ಆಗ್ರಾ ರಸ್ತೆಯ ಮೇಲೆ ಉಪಸ್ಥಿತವಿರುವ ಈ ಕೇಶವಜೀ ಗೌಡಿಯಾ ಮಠ ಮತ್ತೊಂದು ಪ್ರಸಿದ್ಧ ಮತ್ತು ಪ್ರೇಕ್ಷಣೀಯ ಸ್ಥಳಗಳಲ್ಲಿ ಒಂದು. ಮಥುರಾ ಪಟ್ಟಣದ ಮುಖ್ಯ ದೈವವಾಗಿರುವ ಭಗವಾನ್ ಶ್ರೀಕೃಷ್ಣನ ಹೆಸರನ್ನೇ ಮಠಕ್ಕೂ ಇಡಲಾಗಿದೆ. ಶ್ರೀಮದ್ ಭಕ್ತವೇದಾಂತ ನಾರಾಯಣ ಮಹಾರಾಜರನ್ನು ಹಿಂದಿ ಮಾತನಾಡುವ ಉತ್ತರ ಭಾರತದ ಭಕ್ತರಲ್ಲಿ ನಿರ್ಮಲ...
ಮಥುರಾ ವಸ್ತುಸಂಗ್ರಹಾಲಯ ನಗರದ ಹೃದ್ಭಾಗದಲ್ಲಿ ಉಪಸ್ಥಿತವಿದೆ. ಇಲ್ಲಿ ಪ್ರಾಚೀನವಾದ ಪ್ರತಿಮೆಗಳು, ವಸ್ತುಗಳು ಪ್ರದರ್ಶನಕ್ಕಿವೆ. ಇಲ್ಲಿರುವ ಕೆಲವು ಅಪರೂಪದ ವಸ್ತುಗಳು ಪುರಾತನ ಕಾಲಕ್ಕೆ ಅಂದರೆ ಕ್ರಿ.ಪೂ.3ನೇ ಶತಮಾನಕ್ಕೆ ಸಂಬಂಧಪಟ್ಟದ್ದಾಗಿವೆ.
ಈ ಮ್ಯೂಸಿಯಂ ಅನ್ನು ಒಂದು ಬಗೆಯ ಕಂದು ಬಣ್ಣದ ಕಲ್ಲಿನಿಂದ ಕಟ್ಟಲಾಗಿದೆ....
ಮಥುರಾ ಪಟ್ಟಣ ಹಿಂದೂತ್ವದ ಮುಖ್ಯ ವೇದಿಕೆಯಾಗುವ ಮುನ್ನ ಬೌದ್ಧ ಮತ್ತು ಜೈನ ಧರ್ಮದ ಕೇಂದ್ರವಾಗಿತ್ತು. ಮುಘಲರ ಆಳ್ವಿಕೆ ಕಾಲದಲ್ಲಿ ಸಾಕಷ್ಟು ಬೌದ್ಧಧಾಮಗಳು, ಮಂದಿರಗಳು ನಾಶವಾಗಿದ್ದರೂ ಇಂದಿಗೂ ಸಹ ಕೆಲವು ಉಳಿದಿರುವ ಮಂದಿರಗಳು ಇನ್ನೂ ಯಾತ್ರಾರ್ಥಿಗಳನ್ನು ವರ್ಷವಿಡೀ ಆಕರ್ಷಿಸುತ್ತಿವೆ. ಮಥುರಾ ಚೌರಾಸಿ ಎಂಬುದು ಒಂದು ಜೈನ...
ಮಥುರಾದಲ್ಲಿರುವ ಎಲ್ಲ ಘಟ್ಟಗಳಲ್ಲಿ ವಿಶ್ರಾಮ್ ಘಾಟ್ ಬಹಲ ಜನಪ್ರಿಯವಾದದ್ದು. ಇಲ್ಲೇ ಕಂಸನನ್ನು ಸೋಲಿಸಿ ಶ್ರೀಕೃಷ್ಣನು ಕೆಲಹೊತ್ತು ವಿಶ್ರಮಿಸಿಕೊಂಡ ಎಂಬ ಕಥೆ ಜನಜನಿತವಾಗಿದೆ. ಅತ್ಯಂತ ಜನಪ್ರಿಯ ಮಂದಿರಗಳು, ಗುಡಿಗಳು ಈ ವಿಶ್ರಾಮ್ ಘಾಟ್ ನ ಸುತ್ತಮುತ್ತಲೂ ಇವೆ. ಮುಂಜಾನೆ ಮತ್ತು ಸಂಜೆ ಹೊತ್ತಿನಲ್ಲಿ ಬೆಳಗುವ ಆರತಿ ನಿಜಕ್ಕೂ...
ನಾಮ್ ಯೋಗ ಸಾಧನ ಮಂದಿರವನ್ನು ಜೈ ಗುರುದೇವ ಸ್ವಾಮಿಗಾಗಿ ಕಟ್ಟಿಸಲಾಯಿತು. ಇವರು ಚಾರಿಟೇಬಲ್ ಟ್ರಸ್ಟ್ ನಡೆಸುತ್ತಾರೆ ಮತ್ತು ಸರಳ ರೀತಿಯಲ್ಲಿ ಜೀವನವನ್ನು ನಡೆಸುವ ಕಲೆಯನ್ನು ಜನರಿಗೆ ಬೋಧಿಸುತ್ತಾರೆ. ಇವರು ಸಸ್ಯಾಹಾರ ಕ್ರಮವನ್ನು ಅನುಸರಿಸಿ ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರಗಳನ್ನು ಮೀರಿ ಮನುಷ್ಯ ಹೇಗೆ ಬೆಳೆಯಬಹುದು...
ಮಂದಿರಗಳನ್ನು ಹೊರತುಪಡಿಸಿ ಮಥುರಾ ನಗರವು ವಿಸ್ತಾರವಾದ ಘಾಟ್ ಗಳಿಗೆ ಪ್ರಸಿದ್ಧವಾಗಿದೆ. ಈ ನಗರ ಯಮುನಾ ನದಿಯ ಉದ್ದಕ್ಕೂ ವಿಸ್ತರಿಸಿಕೊಂಡಿದೆ. ಉದ್ದನೆಯ ಕಲ್ಲಿನ ಮೆಟ್ಟಿಲುಗಳನ್ನು ಹೊಂದಿರುವ ಈ ಘಾಟ್ ಗಂಗಾ ನದಿಯನ್ನು ತಲುಪುತ್ತದೆ. ಹಿಂದೂಗಳ ನಂಬಿಕೆಯ ಪ್ರಕಾರ, ಗಂಗೆಯಲ್ಲಿ ಮಿಂದು ಏಳುವುದು ಮನುಷ್ಯನ ಎಲ್ಲಾ ಪಾಪಗಳನ್ನು...