ನಾಮ್ ಯೋಗ ಸಾಧನ ಮಂದಿರವನ್ನು ಜೈ ಗುರುದೇವ ಸ್ವಾಮಿಗಾಗಿ ಕಟ್ಟಿಸಲಾಯಿತು. ಇವರು ಚಾರಿಟೇಬಲ್ ಟ್ರಸ್ಟ್ ನಡೆಸುತ್ತಾರೆ ಮತ್ತು ಸರಳ ರೀತಿಯಲ್ಲಿ ಜೀವನವನ್ನು ನಡೆಸುವ ಕಲೆಯನ್ನು ಜನರಿಗೆ ಬೋಧಿಸುತ್ತಾರೆ. ಇವರು ಸಸ್ಯಾಹಾರ ಕ್ರಮವನ್ನು ಅನುಸರಿಸಿ ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರಗಳನ್ನು ಮೀರಿ ಮನುಷ್ಯ ಹೇಗೆ ಬೆಳೆಯಬಹುದು ಎಂಬುದನ್ನು ಉಪದೇಶಿಸುತ್ತಾರೆ. ಇಲ್ಲಿನ ಗೋಪುರಗಳು, ಆಧಾರ ಸ್ತಂಭಗಳು ಪಕ್ಕಾ ಹಿಂದೂ ಕಲೆಯ ದ್ಯೋತಕವಾಗಿವೆ.
ಈ ಮಂದಿರ ವಾರ್ಷಿಕವಾಗಿ ಆಚರಿಸುವ ಭಾಂಡರ ಹಬ್ಬಕ್ಕೆ ಪ್ರಸಿದ್ಧವಾಗಿದೆ. ಈ ದಿನದಂದು ವಿಶೇಷವಾಗಿ ಯಾತ್ರಾರ್ಥಿಗಳಿಗೆ ಮತ್ತು ಬಡಬಗ್ಗರಿಗೆ ಊಟದ ವ್ಯವಸ್ಥೆಯನ್ನು ಮಾಡಲಾಗುತ್ತದೆ. ಈ ಮಂದಿರ ಒಂದು ಟ್ರಸ್ಟ್ ಅನ್ನು ಹೊಂದಿದ್ದು, ಬಡವರ ಕಲ್ಯಾಣಕ್ಕೆ ಸರ್ವರೀತಿಯ ಕೆಲಸ ಮಾಡುತ್ತಿದೆ. ಹಾಗೆಯೆ, ಉಚಿತ ವೈದ್ಯಕೀಯ ಸೇವೆಯನ್ನು ಸಹ ಸಲ್ಲಿಸುತ್ತಿದೆ. ಈ ಸಂಸ್ಥೆ ಶಾಲೆಯನ್ನು ಸಹ ಉಚಿತವಾಗಿ ನಡೆಸುತ್ತಿದೆ. ಇಲ್ಲಿ ಯಾವುದೇ ಸೇವೆಗಳಿಗೆ ಶುಲ್ಕವನ್ನು ಪಡೆಯಲಾಗುವುದಿಲ್ಲ.