ಕುಂಬಕೋಣದಿಂದ ಸುಮಾರು ಏಳು ಕಿ.ಮೀ ದೂರದಲ್ಲಿರುವ ಈ ದೇವಾಲಯದಲ್ಲಿ ವಿಷ್ಣು ಮತ್ತು ಲಕ್ಷ್ಮಿಯರನ್ನು ಜೊತೆಯಾಗಿ ಪೂಜಿಸಲಾಗುತ್ತದೆ. ವಿಷ್ಣುವಿನ ಒಂದು ಹೆಸರಾದ ತಿರುವಿನ್ನಗರಪ್ಪನ್ ಅಥವಾ ವೆಂಕಟಾಚಲಪತಿ ಹಾಗೂ ಲಕ್ಷ್ಮಿದೇವಿಯನ್ನು ಭೂಮಿದೇವಿಯ ಹೆಸರಿನಲ್ಲಿ ಆರಾಧಿಸಲಾಗುತ್ತದೆ. ಅತಿ ಎತ್ತರದ ಗೋಪುರುಗಳು, ವಿಶಾಲವಾದ ಹಜಾರಗಳು ಮತ್ತು ಆಕರ್ಷಕ ಕೆತ್ತನೆಯ ಕೆಲಸಗಳು ದೇವಾಲಯದ ಭವ್ಯತೆಯನ್ನು ಸಾರುತ್ತವೆ.
ವಿಶೇಷವೆಂದರೆ ಈ ಕೆತ್ತನೆಗಳಲ್ಲಿ ವಿವಿಧ ವೇದಗಳ ವರ್ಣನೆಗಳನ್ನು ಬಿಂಬಿಸಲಾಗಿದೆ. ಈ ಕೆತ್ತನೆಗಳು ಕಂಭ, ಗೋಡೆಗಳಲ್ಲಿ ಮಾತ್ರವಲ್ಲದೇ ಛಾವಣಿಯಲ್ಲಿಯೂ ಖಾಲಿಜಾಗಕ್ಕೆ ಆಸ್ಪದವಿಲ್ಲದಂತೆ ಕಂಡುಬರುತ್ತವೆ. ಈ ಕೆತ್ತನೆಗಳ ಮೂಲಕ ಹಿಂದೂ ಧರ್ಮದ ವಿವಿಧ ಸಂಸ್ಕಾರಗಳನ್ನು ಅರಿಯಬಹುದಾಗಿದೆ. ಈ ದೇವಾಲಯದಲ್ಲಿಯೂ ಉಪ್ಪಿನ ಬಳಕೆ ನಿಷಿದ್ಧವಾಗಿದೆ.


Click it and Unblock the Notifications