ನಗರದ ನಟ್ಟನಡುವೆ ಕಾವೇರಿ ನದಿಯ ಪಾತ್ರದಲ್ಲಿರುವ ಈ ಸ್ಥಳದಲ್ಲಿ ಮುಳುಗು ಹಾಕುವುದು ಪವಿತ್ರ ಹಾಗೂ ಪಾಪನಾಶಿನಿ ಎಂದು ನಂಬಲಾಗುತ್ತದೆ. ಅಲ್ಲದೇ ಮಹಾಮಹಂ ಉತ್ಸವದಲ್ಲಿ ಪಾಲ್ಗೊಳ್ಳಲು ಈ ಸ್ಥಳದಲ್ಲಿ ಮುಳುಗು ಹಾಕುವುದು ಕಡ್ಡಾಯವಾದ ವಿಧಿಯಾಗಿರುವುದರಿಂದ ಉತ್ಸವದ ಸಮಯದಲ್ಲಿ ಈ ಪಾತ್ರ ಜನರಿಂದ ಜಿಗಿಗುಡುತ್ತದೆ.
ಸ್ವಾಭಾವಿಕವಾಗಿ ಹೆಚ್ಚು ಜನರ ಆಗಮನದಿಂದ ಮಲಿನಗೊಳ್ಳುವ ನದಿಪಾತ್ರವನ್ನು ಶುಚಿಯಾಗಿಡಲು ಕುಂಬಕೋಣಂ ಪೌರಸಭೆ ಹೆಚ್ಚಿನ ಮುರುವರ್ಜಿ ವಹಿಸುತ್ತದೆ.