ರಘುನಾಥ್ ದೇವಾಲಯವು ಮನಾಲಿಯ ಅತ್ಯಂತ ಪ್ರಮುಖ ಧಾರ್ಮಿಕ ಸ್ಥಳವಾಗಿದೆ. ಇದನ್ನು ಹಿಂದುಗಳ ದೇವರಾದ ರಘುನಾಥ್ ಜೀಯವರಿಗಾಗಿ ನಿರ್ಮಿಸಲಾಗಿದೆ. ಇಲ್ಲಿರುವ ವಿಗ್ರಹವನ್ನು ಉತ್ತರ ಪ್ರದೇಶದ ಅಯೋಧ್ಯೆಯ ತ್ರೇತ್ನಾಥ್ ದೇವಾಲಯದಿಂದ ತಂದು ಪ್ರತಿಷ್ಟಾಪಿಸಾಲಾಗಿದೆ ಎಂದು ಭಾವಿಸಲಾಗಿದೆ. ಸ್ಥಳೀಯ ದಂತಕತೆಗಳ ಪ್ರಕಾರ, ಈ ವಿಗ್ರಹವನ್ನು ವಿಷ್ಣುವಿನ ಏಳನೆ ಅವತಾರವಾದ ಶ್ರೀ ರಾಮನು ಒಮ್ಮೆ ಬಳಸಿದ್ದನಂತೆ. ಈ ದೇವಾಲಯವನ್ನು ಕ್ರಿ.ಶ 1650 ರಲ್ಲಿ ನಿರ್ಮಿಸಲಾಯಿತು. ಇದು ಪಹರಿ ಮತ್ತು ಪಿರಮಿಡ್ ಮಾದರಿಗಳ ಸಮ್ಮಿಶ್ರ ಶೈಲಿಯನ್ನು ಅತ್ಯದ್ಭುತವಾಗಿ ಪ್ರತಿನಿಧಿಸುತ್ತದೆ. ಇದು ಹಿಮಾಲಯ ಬೆಟ್ಟಗಳ ತಲದಲ್ಲಿರುವ ಅಸಂಖ್ಯಾತ ಬುಡಕಟ್ಟುಗಳು ಬಳಸಿಕೊಂಡು ಉಳಿಸಿಕೊಂಡು ಬಂದಿರುವ ವಾಸ್ತುಶೈಲಿಯಾಗಿದೆ.
ಸ್ಥಳೀಯರ ನಂಬಿಕೆಯಂತೆ ಇಲ್ಲಿರುವ ಮುಖ್ಯದೇವರು ಇಡೀ ಕಣಿವೆಯನ್ನು ಕಾಪಾಡುತ್ತಾನಂತೆ. ದಂತಕತೆಗಳ ಪ್ರಕಾರ, ರಾಜ ಜಗತ್ ಸಿಂಗ್ ತನ್ನ ಹಿಂದಿನ ಪಾಪಗಳನ್ನು ನಿವಾರಿಸಿಕೊಳ್ಳಲು ರಘುನಾಥ್ ದೇವಾಲಯವನ್ನು ನಿರ್ಮಿಸಿದನಂತೆ.