ಸಿದ್ಧೇಶ್ವರ ಎಂಬ ಹೆಸರಿನಿಂದಲೂ ಕರೆಯಲ್ಪಡುವ ಈ ದೇವಸ್ಥಾನವು ಕಾರವಾರ ಪಟ್ಟಣದಿಂದ 4 ಕಿ.ಮೀ ದೂರದಲ್ಲಿದೆ. ಸ್ಥಳೀಯ ನಂಬಿಕೆ ಪ್ರಕಾರ ಇದು ಗೋಕರ್ಣ ಪೌರಾಣಿತ್ಯಕ್ಕೆ ಸಂಬಂಧಪಟ್ಟ 5 ದೇವಸ್ಥಾನಗಳಲ್ಲಿ ಒಂದಾಗಿದೆ. ಮತ್ತೊಂದು ಕಥೆಯ ಪ್ರಕಾರ ಅಸುರ ರಾಜನಾದ ರಾವಣನು ಆತ್ಮಲಿಂಗವನ್ನು ಕೊಂಡೊಯ್ಯುವಾಗ ಅದರ ಒಂದು ಭಾಗ ಇಲ್ಲಿ ಬಿದ್ದಿತ್ತೆಂದು ಹೇಳಲಾಗುತ್ತದೆ. ಆದ್ದರಿಂದ ಶಿವನ ದರ್ಶನಕ್ಕೆ ಪ್ರಸಿದ್ಧವಾಗಿದ್ದು ಪ್ರತಿ ಮಹಾಶಿವರಾತ್ರಿ ಸಮಯದಲ್ಲಿ ದೇಶದ ವಿವಿಧೆಡೆಯಿಂದ ಸಾವಿರಾರು ಭಕ್ತಾದಿಗಳು ಇಲ್ಲಿಗೆ ಆಗಮಿಸುತ್ತಾರೆ.