ಪ್ರಣ್ಮಲೈ ಶೇಖ್ ಒಲಿಯುಲ್ಲ ದರ್ಗಾವು ಮುಸಲ್ಮಾನರ ವಲಯದಲ್ಲಿ ಧಾರ್ಮಿಕ ಪ್ರಾಮುಖ್ಯತೆಯನ್ನು ಪಡೆದಿದೆ. ಈ ದರ್ಗಾವು ಕರೈಕುಡಿಯಿಂದ 40 ಕಿ.ಮೀ ದೂರದಲ್ಲಿ ನೆಲೆಗೊಂಡಿದೆ.
ಈ ದರ್ಗಾದಲ್ಲಿ ಹರಕೆ ಹೊತ್ತರೆ ಅದು ನೆರವೇರುತ್ತದೆ ಎಂಬ ನಂಬಿಕೆಯಿದೆ. ಹಾಗಾಗಿ ಇಲ್ಲಿಗೆ ಯಾವುದೇ ಜಾತಿ ಮತ್ತು ಧರ್ಮಗಳ ಮತ ಭೇದವಿಲ್ಲದೆ ಪ್ರವಾಸಿಗರು ಆಗಮಿಸುತ್ತಾರೆ. ಬಹಳಷ್ಟು ಮಂದಿ ತಮ್ಮ ಹರಕೆ ನೆರವೇರಿದ ನಂತರವೂ ಸಹ ಇಲ್ಲಿಗೆ ಬಂದು ಪೂಜೆ ಸಲ್ಲಿಸುತ್ತಾರೆ.
ದರ್ಗಾವು ಎಲ್ಲಾ ಧರ್ಮದವರಿಗು ತೆರೆದಿರುತ್ತದೆ. ಕರೈಕುಡಿಯ ಸ್ಥಳೀಯರು ಬಹುಸಂಖ್ಯೆಯಲ್ಲಿ ಇಲ್ಲಿಗೆ ಪ್ರತಿದಿನವು ಬಂದು ಪೂಜೆಸಲ್ಲಿಸುತ್ತಾರೆ. ಸ್ಥಳೀಯರ ನಂಬಿಕೆಗಳ ಪ್ರಕಾರ, ಇಲ್ಲಿ ಕೆಲಸಕ್ಕಾಗಿ, ಸಂತಾನಾಕ್ಕಾಗಿ, ಯೋಗ್ಯ ವಧು/ವರನಿಗಾಗಿ ಅಥವಾ ಜೀವನದಲ್ಲಿ ಎದುರಾಗಿರುವ ದುರಾದೃಷ್ಟವನ್ನು ತೊಲಗಲು ಪ್ರಾರ್ಥಿಸಿದರೆ ಅದು ತಪ್ಪದೆ ನೆರವೇರುವುದಂತೆ. ಹಲವು ರೋಗರುಜಿನಗಳಿಂದ ನರಳುತ್ತಿರುವವರು ಸಹ ಇಲ್ಲಿ ಬಂದು ಬೇಗ ಗುಣಮುಖರಾಗುವ ಸಲುವಾಗಿ ಪ್ರಾರ್ಥನೆ ಸಲ್ಲಿಸುತ್ತಾರೆ. ಇದನ್ನು ನೀವು ನಂಬದಿದ್ದರೆ, ಇಲ್ಲಿನ ಜನರು ಇದಕ್ಕೆ ಸಂಬಂಧಿಸಿದ ನೈಜ ಕಥೆಗಳನ್ನು ಮತ್ತು ಜೀವಂತ ಸಾಕ್ಷಿಗಳನ್ನು ನಿಮಗೆ ತೋರಿಸುತ್ತಾರೆ.


Click it and Unblock the Notifications