ಈ ಪ್ರತಿಮೆಯು ಕನ್ಯಾಕುಮಾರಿಯ ಮುಖ್ಯ ಹೆಗ್ಗುರುತುಗಳಲ್ಲಿ ಒಂದು. ಈ ಪ್ರತಿಮೆಯು ಕಲ್ಲಿನಿಂದ ಮಾಡಿದ ಅತಿದೊಡ್ಡ ಪ್ರತಿಮೆಯಾಗಿದ್ದು ಜನಪ್ರಿಯ ಸಂತ, ತಮಿಳಿನ ಕವಿ ತಿರುವಳ್ಳುವರ್ ಅವರ ಪ್ರತಿಮೆಯಾಗಿದೆ. ಇದರ ಎತ್ತರ 133 ಅಡಿ. ಇದು ವಿವೇಕಾನಂದ ಸ್ಮಾರಕದ ಪಕ್ಕದಲ್ಲಿದೆ. ಈ ಪ್ರತಿಮೆಯ ಪೀಠದ ಎತ್ತರ ಸುಮಾರು 38 ಅಡಿ ಇದ್ದು, ಇದು ತಿರುವಳ್ಳುವರ್ ಬರೆದಿರುವ ತಿರುಕುಳಲ್ ಎಂಬ ಪುಸ್ತಕದ 8 ಅಧ್ಯಾಯದ ಆರಾಮವನ್ನು ಸೂಚಿಸುತ್ತದೆ. ಈ ಪೀಠದ ಮೇಲಿರುವ ಪ್ರತಿಮೆಯು 95 ಅಡಿ ಇದ್ದು ಇದು ತಿರುಕುಳಲ್ ಪುಸ್ತಕದ 25 ಅಧ್ಯಾಯ ಮತ್ತು ಪೋರುಲ್ ನ 75 ಅಧ್ಯಾಯವನ್ನು ತಿಳಿಸುತ್ತದೆ.
ಈ ಪ್ರತಿಮೆಯ ಶಿಲ್ಪಿ ಡಾ. ವಿ.ಗಣಪತಿ ಸ್ಥಪತಿ.