ಸುಜನ್ಪುರ್ ಕೋಟೆಯನ್ನು ಕಂಗ್ರಾದ ರಾಜ ಅಭಯ ಚಂದ್ ಸುಮಾರು 1758 ರಲ್ಲಿ ನಿರ್ಮಿಸಿದರಂತೆ. ಇದು ಸುಜನ್ಪುರ್ ನಲ್ಲಿರುವ ಹಮೀರ್ ಪುರದಲ್ಲಿರುವ ಅತ್ಯಂತ ಸುಂದರ ಕಟ್ಟಡವಾಗಿದೆ. ಈ ಕೋಟೆಯು ತನ್ನಲ್ಲಿರುವ ವರ್ಣಚಿತ್ರಗಳಿಗೆ ಖ್ಯಾತಿ ಪಡೆದಿದೆ. 19 ನೇ ಶತಮಾನದಲ್ಲಿ ಪಹರಿ ಮಿನಿಯೇಚರ್ ವರ್ಣಚಿತ್ರಕಲೆಯ ಅನುಯಾಯಿಯಾಗಿದ್ದ ಕಂಗ್ರಾದ ರಾಜ ಸನ್ಸಾರ್ ಚಂದ್ ಇಲ್ಲಿ ವಾಸಿಸುತ್ತಿದ್ದನು. ಯಾವಾಗ ಬ್ರಿಟೀಷರು ಕಂಗ್ರಾದ ರಾಜನನ್ನು ಸೋಲಿಸಿ, ಕಂಗ್ರಾವನ್ನು ತಮ್ಮ ವಶಕ್ಕೆ ಪಡೆದರೊ, ಆಗ ಈ ಕೋಟೆಯು ಕಂಗ್ರಾದ ರಾಜ ಮತ್ತು ಅವನ ಕುಟುಂಬಸ್ಥರಿಗೆ ಆಶ್ರಯವನ್ನು ಒದಗಿಸಿತು.
ಈ ಕೋಟೆಯಲ್ಲಿ 12 ಕೊಠಡಿಗಳು ಮತ್ತು ಒಂದು ಹಜಾರ ಸಹ ಇದೆ. ಈ ಕೊಠಡಿಗಳನ್ನು ಕಂಗ್ರಾದ ಸನ್ಸಾರ್ ಚಂದ್ ರಾಜನನ್ನು ಭೇಟಿಯಾಗಲು ಬರುತ್ತಿದ್ದ ಅತಿಥಿಗಳಿಗಾಗಿ ನಿರ್ಮಿಸಲಾಗಿತ್ತು. ಬಿಯಾಸ್ ನದಿಯ ದಂಡೆಯ ಮೇಲೆ ನಿರ್ಮಾಣಗೊಂಡಿರುವ ಈ ಕೋಟೆಯಲ್ಲಿ ಒಂದು ಬರಹ್ದಾರಿ ಭವನ ಸಹ ಇದೆ. ಇಲ್ಲಿ ನ್ಯಾಯ ಪಂಚಾಯಿತಿಗಳು ನಡೆಯುತ್ತಿದ್ದವು ಎಂದು ಹೇಳಲಾಗುತ್ತದೆ. ಕೋಟೆಯು ವಿಶಾಲವಾದ ಪ್ರಾಂಗಣವನ್ನು ಹೊಂದಿದೆ. ಪ್ರಸ್ತುತ ಇದನ್ನು ಹೋಳಿ ಆಚರಣೆಗಾಗಿ ಬಳಸಲಾಗುತ್ತಿದೆ. ಇದು ಇಲ್ಲಿನ ಪ್ರಸಿದ್ಧ ಆಚರಣೆಗಳಲ್ಲಿ ಒಂದಾಗಿದ್ದು, 3-4 ದಿನಗಳ ಕಾಲ ಆಚರಿಸಲ್ಪಡುತ್ತದೆ.
ನರ್ಬದೇಶ್ವರ್, ಗೌರಿಶಂಕರ್ ಮತ್ತು ಮುರಳಿ ಮನೋಹರ್ ದೇವಾಲಯಗಳು ಇಲ್ಲಿರುವ ಇನ್ನಿತರ ಪ್ರಸಿದ್ಧ ಧಾರ್ಮಿಕ ಸ್ಥಳಗಳಾಗಿವೆ.