ಝಜ್ಜರ್ ಜಿಲ್ಲೆಯ ಬೇರಿ ಪಟ್ಟಣದಲ್ಲಿ ನೆಲೆಗೊಂಡಿರುವ ಕಾರಣ ಬೇರಿ ಮಂದಿರ ಎಂದು ಕರೆಯುತ್ತಾರೆ . ಇದು ಭೀಮೇಶ್ವರಿ ದೇವಿಯನ್ನು ಪೂಜಿಸುವ ಪೂಜ್ಯನೀಯ ಸ್ಥಳ. ಪುರಾಣ ಗ್ರಂಥಗಳ ಪ್ರಕಾರ, ಭಗವಾನ್ ಕೃಷ್ಣ ಕುರುಕ್ಷೇತ್ರ ಯುದ್ಧದಲ್ಲಿ ಗೆಲುವನ್ನು ಹೊಂದಲು ತಮ್ಮ ಕುಲದೇವಿ ಅಥವಾ ಕುಟುಂಬ ದೇವತೆಯ ಆಶೀರ್ವಾದವನ್ನು ಪಡೆಯಲು ಭೀಮವ ಬಳಿ ಯುದ್ಧದ ಸ್ಥಳಕ್ಕೆ ದೇವಿಯನ್ನು ಕರೆತರಲು ಹೇಳಿದನು ಎನ್ನಲಾಗುತ್ತದೆ.
ನಂತರ ಭೀಮನು ಕಿಂಗ್ನಿ , ಪರ್ವತದಲ್ಲಿ ದೇವತೆಯ ನಿವಾಸ ಸ್ಥಳಕ್ಕೆ ಭೇಟಿ ನೀಡಿ ಅವಳನ್ನು ಯುದ್ಧಭೂಮಿಗೆ ಅವನ ಜತೆಗೂಡಲು ವಿನಂತಿಸಿದ ಎನ್ನಲಾಗುತ್ತದೆ .
ದೇವತೆಯು, ತನ್ನನ್ನು ನಿನ್ನ ತೊಡೆಯ ಮೇಲೆ ಕುರಿಸಿಕೊಂಡು ಹೋಗು ಹಾಗೂ ದಾರಿಯ ಮಧ್ಯದಲ್ಲಿ ಎಲ್ಲಿಯೂ ತನ್ನನ್ನು ಕೆಳಗಿಳಿಸಬಾರದೆಂಬ ಶರತ್ತನ್ನು ಒಡ್ಡಿ, ಭೀಮನ ಪ್ರಾರ್ಥನೆಗೆ ಒಪ್ಪುತ್ತಾಳೆ. ಮಹಾನ್ ಯೋಧ ಭೀಮ, ಇದು ತನಗೆ ಅತ್ಯಂತ ಸುಲಭವಾದ ಕೆಲಸ ಎಂದೆಣಿಸಿ ಆಕೆಯನ್ನು ಬೇರೆ ಮರದ ಕೆಳಗೆ ಇಳಿಸಿದ. ಆತ ಪುಃನ ತಿರುಗಿ ಬಂದಾಗ ದೇವತೆಯು ತನ್ನ ಶರತ್ತನ್ನು ಮುರಿದಿದ್ದಕ್ಕಾಗಿ ಆತನ ಜೊತೆ ಮುಂದುವರಿಯಲು ನಿರಾಕರಿಸುತ್ತಾಳೆ. ಆನಂತರ ತಾನು ಆ ಮರದಡಿಯಲ್ಲಿಯೇ ಉಳಿದು ಭೀಮನನ್ನು ಹಿಂತಿರುಗಿ ಕಳುಹಿಸುತ್ತಾಳೆ.
ಮಹಾಭಾರತ ಯುದ್ಧ ಮುಗಿದಾಗ , ಕೌರವರ ತಾಯಿ, ರಾಣಿ ಗಾಂಧಾರಿ, ಬೆರಿ ಮರದ ಅಡಿಯಲ್ಲಿ ದೇವಸ್ಥಾನವನ್ನು ನಿರ್ಮಿಸಿದಳು. ಇದೂ ಸಹ ಈ ಸ್ಥಳ ಬೇರಿ ಮಂದಿರ ಎಂಬ ಹೆಸರನ್ನು ಪಡೆಯಲು ಇನ್ನೊಂದು ಕಾರಣವಾಗಿರಬಹುದು. ಈ ದೇವಾಲಯದ ಒಂದು ಆಸಕ್ತಿದಾಯಕ ವೈಶಿಷ್ಟ್ಯವೆಂದರೆ ಮದುವೆಯಾದ ಜೋಡಿಗಳು ಈ ದೇವತೆಯ ಸಮ್ಮುಖದಲ್ಲಿ ಅವರ ಮದುವೆಯ ಬಂಧವನ್ನು ಇನ್ನಷ್ಟು ಗಟ್ಟಿ ಮಾಡುವಂತೆ ಪ್ರಾರ್ಥಿಸಲು ಬರುತ್ತಾರೆ.