ಗುರುಕುಲ್ ಪುರಾತತ್ವ ಮ್ಯೂಸಿಯಂನ ಪ್ರಸ್ತುತ ನಿರ್ದೇಶಕ ಸ್ವಾಮಿ ಓಮಾನಂದ ಸರಸ್ವತಿ , ಮೂಲಕ 1959 ರಲ್ಲಿ ಈ ವಸ್ತು ಸಂಗ್ರಹಾಲಯವನ್ನು ಸ್ಥಾಪಿಸಲಾಯಿತು. ಇದು ಹರಿಯಾಣದ ಝಜ್ಜರ್ನಲ್ಲಿ ಅತಿದೊಡ್ಡದಾಗಿ ಬೆಳೆದಿದೆ. ವಸ್ತು ಸಂಗ್ರಹಾಲಯವು ದಣಿವಿಲ್ಲದ ಸಂಸ್ಥಾಪಕನ ಪ್ರದರ್ಶನಗಳ ಒಂದು ವ್ಯಾಪಕ ಸಂಗ್ರಹವನ್ನು ಹೊಂದಿದೆ. ಜೊತೆಗೆ ಇದು ರಾಜಸ್ಥಾನ , ಹರ್ಯಾಣ , ಪಂಜಾಬ್ , ಅಲಹಾಬಾದ್ ಮತ್ತು ಉತ್ತರ ಪ್ರದೇಶದ ಬರೇಲಿಯಲ್ಲಿ ಸೇರಿದಂತೆ ದೇಶದ ವಿವಿಧ ರಾಜ್ಯಗಳಿಂದ ತರಲಾದ ಪುರಾತನ ವಿಗ್ರಹಗಳು ಮತ್ತು ನಾಣ್ಯಗಳ ಒಂದು ದೊಡ್ಡ ಸಂಗ್ರಹವನ್ನು ಹೊಂದಿದೆ.
ವಸ್ತು ಸಂಗ್ರಹಾಲಯವು ಭಗವಾನ್ ರಾಮನ ಅವಧಿಗೆ ಸಂಬಂಧಿಸಿದ ವಿವಿಧ ದೊಡ್ಡ ಮತ್ತು ಸಣ್ಣ ವಿಗ್ರಹಗಳು ಒಂದು ದೊಡ್ಡ ನೆಲೆಯಾಗಿದೆ . ರಾವಣನು ಸೀತೆಯನ್ನು ಅಪಹರಿಸಲು ಕಾಣಿಸಿಕೊಂಡ ಪಂಚವಟಿ ಜಿಂಕೆಯ ಪ್ರತಿಮೆ ಇಲ್ಲಿ ಪ್ರದರ್ಶನಕ್ಕಿಡಲಾಗಿದೆ. ಮಹಾಭಾರತದ ಅವಧಿಯನ್ನು ಚಿತ್ರಿಸುವ ಅನೇಕ ಚಿತ್ರಗಳನ್ನು ಪ್ರದರ್ಶನಲ್ಲಿ ಇಡಲಾಗಿದೆ. ಉದಾಹರಣೆಗೆ , ಚಕ್ರವ್ಯೂಹದಲ್ಲಿ ಸಿಲುಕಿಸಿ ಕೊಲ್ಲಲ್ಪಟ್ಟ ಅಭಿಮನ್ಯುವಿನ ಒಂದು ವರ್ಣಚಿತ್ರ ಇಲ್ಲಿದೆ. ಚದುರಂಗ ಫಲಕದ ಚಿತ್ರವನ್ನು ಸಹ ಇಲ್ಲಿ ಕಾಣಬಹುದು.
ಇಲ್ಲಿ ನಂಬಲಸಾಧ್ಯವಾದ ಕುತೂಕಲಕಾರಿ ವಿಷಯಗಳು ಸಾಕಷ್ಟಿವೆ. ಉದಾಹರಣೆಗೆ ಒಂಟೆಯ ಚರ್ಮದಿಂದ ಮಾಡಿದ ನೀಲಗಿರಿಯ ಪೀಪಾಯಿಗಳು, ಕೊಂಡಿಯೇ ಇರದ ಸರಪಳಿ, ಕಿರಿದಾಗಿಸಲಾದ ಬಾಟಲಿನೊಳಗೆ ಹಾಕಿಡಲಾದ ಕೃಷಿ ಉಪಕರಣಗಳು ಹಾಗೂ ಕಲ್ಯಾಣದ ಬೆಟ್ಟಗಳಿಂದ ತರಲಾದ ಮೆತ್ತಗಾದ ಕಲ್ಲನ್ನು ನಾವಿಲ್ಲಿ ಕಾಣಬಹುದು. ಗಾಜಿನ ಪೆಟ್ಟಿಗೆಗಳಲ್ಲಿ ಪ್ರಾಚೀನ ನಾಣ್ಯಗಳನ್ನು ಸಂಗ್ರಹಿಸಿ ಇಡಲಾಗಿದೆ. ಈ ನಾಣ್ಯಗಳನ್ನು ಹಲವು ವಿವಿಧ ರಾಷ್ಟ್ರಗಳಿಂದ ತರಲಾಗಿದ್ದು, ಉದಾಹರಣೆಗೆ ನೇಪಾಳ , ಶ್ರೀಲಂಕಾ , ಭೂತಾನ್ , ಪಾಕಿಸ್ತಾನ , ಜಪಾನ್ , ಥೈಲ್ಯಾಂಡ್ , ರಶಿಯಾ , ಭರ್ಮಾ, ಕೆನಡಾ , ಫ್ರಾನ್ಸ್ , ಇಂಗ್ಲೆಂಡ್ , ಆಸ್ಟ್ರೇಲಿಯಾ ಮತ್ತು ಇತರ ಹಲವಾರು ದೇಶಗಳ ನಾಣ್ಯಗಳು ಇಲ್ಲಿನ ಪ್ರದರ್ಶನದಲ್ಲಿವೆ.