ಗೀತಾ ಭವನ್ ಎನ್ನುವುದು ಇಂದೋರಿನ ಒಂದು ಅನುಪಮವಾದ ರಚನೆಯಾಗಿದೆ. ಮೂಲತಃ ಇದು ಒಂದು ಗುಡಿಯಾಗಿದೆ. ಈ ಗುಡಿಯ ವೈಶಿಷ್ಟ್ಯತೆಯೇನೆಂದರೆ ಈ ಗುಡಿಯು ಯಾವುದೇ ಜಾತಿ, ಸಮುದಾಯ ಅಥವಾ ಧರ್ಮಕ್ಕೆ ಸೇರಿಲ್ಲ. ಅದಕ್ಕೆ ಬದಲಾಗಿ ಈ ಗುಡಿಯು ಜನರ ನಂಬಿಕೆಗಳಿಗೆ ಅರ್ಪಣೆಗೊಂಡಿದೆ. ಹಾಗಾಗಿ ಹಲವು ಧರ್ಮಗಳಿಗೆ ಸೇರಿದ ಜನರು ತಮ್ಮ ಭಗವಂತನಿಗೆ ಪ್ರಾರ್ಥನೆ ಸಲ್ಲಿಸುವ ಸಲುವಾಗಿ ಇಲ್ಲಿಗೆ ಆಗಮಿಸುತ್ತಾರೆ. ಈ ಗುಡಿಯಲ್ಲಿ ಹಲವಾರು ಧರ್ಮಗಳಿಗೆ ಸೇರಿದ ಶಿಲ್ಪಗಳು ಇವೆ. ನಯನ ಮನೋಹರವಾದ ಹಜಾರವನ್ನು ಪುರಾಣ, ರಾಮಾಯಣ ಮತ್ತು ಮಹಾಭಾರತಗಳಿಗೆ ಸೇರಿದ ವರ್ಣಚಿತ್ರಗಳಿಂದ ಅಲಂಕರಿಸಲಾಗಿದೆ.
ಈ ಗುಡಿಯು "ಪ್ರವಚನ"ಗಳನ್ನು ಪ್ರೋತ್ಸಾಹಿಸುತ್ತದೆ. ಆದ್ದರಿಂದ ಇಲ್ಲಿ ಸಾಮಾನ್ಯವಾಗಿ ಪ್ರವಚನಗಳು ನಡೆಯುತ್ತ ಇರುತ್ತದೆ. ಈ ಗುಡಿಯು ತನ್ನ ಸೌಂದರ್ಯ ಮತ್ತು ಸ್ಫೂರ್ತಿಯ ಸಲುವಾಗಿ ಸ್ಥಳಿಯರಲ್ಲು ಮತ್ತು ಪ್ರವಾಸಿಗರಲ್ಲು ಜನಪ್ರಿಯತೆಗೊಂಡಿದೆ. ಇಲ್ಲಿ ಪ್ರತಿ ವರ್ಷವು ಒಂದು ವಾರ್ಷಿಕ ಕಾರ್ಯಕ್ರಮ ನಡೆಯುತ್ತದೆ. ಆಗ ಇಲ್ಲಿಗೆ ಅಬಾಲ ವೃದ್ಧರಾದಿಯಾಗಿ ಎಲ್ಲಾ ವರ್ಗದ ಜನರು ಆಗಮಿಸುತ್ತಾರೆ.