ಘನ ಬ್ರಹ್ಮಪುತ್ರ ನದಿಯ ದಂಡೆಯ ಮೇಲಿರುವ, ಪಿಕಾಕ್ ದ್ವೀಪದಲ್ಲಿರುವ (peacock island) ಉಮಾನಂದ ದೇವಾಲಯವು, ಮoತ್ರಮುಗ್ಧಗೊಳಿಸುವ ವಾಸ್ತುಶಿಲ್ಪದ ಮಾದರಿಯಾಗಿದ್ದು, ಗುವಾಹಾಟಿ ನಗರದ ಕ್ಷಿತಿಜವನ್ನು ಪ್ರಖರಗೊಳಿಸುತ್ತದೆ. ಭಗವಾನ್ ಶಿವನಿಗೆ ಅರ್ಪಿತವಾದ ಈ ದೇವಸ್ಥಾನವು ಅಹೋಮ್ ದೊರೆ ಗಧಾದರ್ ಸಿಂಹನ ಆಳ್ವಿಕೆಯ ಕಾಲದಲ್ಲಿ, ಬರ್ ಫುಕಾನ್ ಗಡಗನ್ಯಾ ಹಂಡೀಕ್ ನಿಂದ ಕಟ್ಟಲ್ಪಟ್ಟಿತು.
ಫೆಬ್ರವರಿ ಮಾಸದಲ್ಲಿ ಆಗಮಿಸುವ ಶಿವರಾತ್ರಿ ಹಬ್ಬಕ್ಕೆ ಪ್ರತಿವರ್ಷ ಅಸಂಖ್ಯಾತ ಶ್ರದ್ಧಾಳುಗಳು ಇಲ್ಲಿ ಕಾಣಸಿಗುತ್ತಾರೆ. ದೇವಸ್ಥಾನವು ಅವಿಸ್ಮರಣೀಯವಾದ ಸೊಬಗನ್ನು ಹೊಂದಿರುವುದು ಮಾತ್ರವಲ್ಲದೇ, ದೇವಳದ ಸುತ್ತಲಿರುವ ಬ್ರಹ್ಮಪುತ್ರ ನದಿಯ ನೋಟವು ಉಸಿರು ಬಿಗಿಹಿಡಿಯುವಂತೆ ಮಾಡುತ್ತದೆ. ಪ್ರವಾಸಿಗರು ಆದಷ್ಟರಮಟ್ಟಿಗೆ ಸೂರ್ಯಾಸ್ತಮಾನದ ವೇಳೆಗೆ ದೇವಸ್ಥಾನಕ್ಕೆ ಭೇಟಿ ನೀಡಲು ಪ್ರಯತ್ನಿಸಬೇಕು.
ದೇವಸ್ಥಾನದ ಗೋಡೆಗಳ ಮೇಲಿರುವ ಅನೇಕ ಸುಂದರ ಕೆತ್ತನೆಗಳು ದೇವಳದ ಒಂದು ಆಕರ್ಷಣೀಯ ಅಂಶ. ಅನೇಕ ಹಿಂದೂ ದೇವರುಗಳಾದ ಸೂರ್ಯ, ಶಿವ, ಗಣೇಶ, ಮತ್ತು ದೇವಿಯರ ಬಿಂಬಗಳು ದೇವಳದ ಗೋಡೆಗಳ ಮೇಲೆ ಕೆತ್ತಲ್ಪಟ್ಟಿವೆ. ದೇವಸ್ಥಾನಗಳನ್ನು ಸಣ್ಣ ದೋಣಿಗಳಿಂದ ಇಲ್ಲವೇ ಮೋಟಾರು ಲಾಂಚ್ ಗಳಿಂದ ಮಾತ್ರವೇ ತಲುಪಬಹುದು.


Click it and Unblock the Notifications