ಗೊಂಡಾಲ್ ಒಮ್ಮೆ ಭಾರತಕ್ಕೆ ಸ್ವಾತಂತ್ರ್ಯ ಬರುವ ಮೊದಲು ಕಾಥೈವಾರ್ ಎಂಬ ಎಂಟು ರಾಜ್ಯಗಳ ರಾಜಧಾನಿಯಾಗಿತ್ತು. ಇಲ್ಲಿನ ರಾಜರುಗಳಿಗೆ ಕಾರುಗಳ ಮೋಡಿಯಾಗಿತ್ತು. ಹಾಗೆಯೇ ಗುಜರಾತ್ ರಾಜ್ಯವು ಆ ಸಮಯದಲ್ಲಿ ಅತ್ತ್ಯುತ್ತಮ ಯೋಜಿತ ರಸ್ತೆಯ ವ್ಯವಸ್ತೆಯನ್ನೂ ಹೊಂದಿತ್ತು. ಠಾಕೂರ್ ಶ್ರೀ ಕುಂಭೋಜಿ ಮೆರಾಮಂಜಿ ಎಂಬ ರಾಜನು ಗೊಂಡಾಲ್ ರಾಜ್ಯವನ್ನು ಸ್ಥಾಪಿಸಿದನು ಮತ್ತು ನಮಗೆ ಸ್ವಾತಂತ್ರ್ಯ ಬರುವವರೆಗೂ ಆಳಿದ ಸರ್ ಭಗವತ್ಸಿಂಗ್ಜಿ ಅವರ ಕಾಲದಲ್ಲಿ ಈ ರಾಜ್ಯವು ಪ್ರಖ್ಯಾತಿಗೆ ಬಂದಿತು.
ಈ ರಾಜನು ತನ್ನ ಮಗ ಯುವರಾಜ್ ಭೋಜ್ರಾಜಿ ಅವನಿಗೆ ನದಿಯ ಪಕ್ಕದಲ್ಲಿ ಕಟ್ಟಿಸಿದ ’ರಿವರ್ಸೈಡ್ ಪ್ಯಾಲೇಸ್’ ಪ್ರಸ್ತುತದಲ್ಲಿ ಒಂದು ಹೆರಿಟೇಜ್ ಹೋಟೆಲ್ ಅಗಿದೆ. ಈ ಹೆರಿಟೇಜ್ ಹೋಟೇಲಿನಲ್ಲಿ ಪುರಾತನ ವಸಾಹತು ಶೈಲಿಯ ಪೀಠೋಪಕರಣ, ದೀಪಗುಚ್ಚಗಳು ಮತ್ತು ಇತರ ಅಲಂಕಾರಗಳು ನಿಜಕ್ಕೂ ವೀಕ್ಷಿಸಲು ಅತ್ಯಂತ ಯೋಗ್ಯವಾಗಿವೆ. ಈ ರಾಜಮನೆತನದವರಿಗೆ ಯಾವಾಗಲೂ ವಿಂಟೇಜ್ (ಪ್ರಾಚೀನತೆಯ) ಕಾರುಗಳನ್ನು ಸಂಗ್ರಹಣೆ ಮಾಡುವ ಮನೋಭಾವವಿತ್ತು.
ಈಗಲೂ ಸಹ ಈ ವಿಂಟೇಜ್ ಕಾರುಗಳು ಪ್ರವಾಸಿಗಳಿಗೆ ಒಂದು ಆಕರ್ಷಣೆಯಾಗಿಬಿಟ್ಟಿದೆ. ಹದಿನೇಳನೇ ಶತಮಾನದಲ್ಲಿ ನವ್ಲಖಾ ಎಂಬ ಅದ್ಭುತ ಅರಮನೆಯೊಂದನ್ನು ಇಲ್ಲಿ ಕಟ್ಟಲಾಯಿತು. ಈ ಅರಮನೆಯನ್ನು ಕಟ್ಟಲು ತಗುಲಿದ ವೆಚ್ಚ ಒಂಬತ್ತು ಲಕ್ಷ ರೂಪಾಯಿ ಯಾಗಿದ್ದರಿಂದ ಇದಕ್ಕೆ ನವ್ಲಖಾ ಎಂದು ಕರೆಯಲ್ಪಟ್ಟಿತು. ಈ ಭವ್ಯ ಅರಮನೆಯಲ್ಲಿ ಅದ್ಭುತ ಕಲ್ಲಿನ ಕೆತ್ತನೆಗಳು, ಮೊಗಸಾಲೆ ಅಥವ ಝಾರೋಖಾಗಳು, ಸುಂದರವಾಗಿ ಕೆತ್ತಲಾದ ಕಮಾನುಗಳು, ಸುರುಳಿಯಾಕಾರದ ಮೆಟ್ಟಿಲುಗಳು ಇವೆ.
ಪ್ರಸ್ತುತ, ರಾಜಕುಟುಂಬದ ನಿವಾಸವಾದ ಹುಜೂರ್ ಅರಮನೆಯು ಪುರಾತನ ಪೀಠೋಪಕರಣ, ವರ್ಣಚಿತ್ರಗಳು, ತೋಟಗಳು ಮತ್ತು ಉದ್ಯಾನಗಳಿಂದ ತುಂಬಿಹೋಗಿವೆ. ಸ್ವಾಮಿ ನಾರಾಯಣ ಸಂಪ್ರದಾಯಕ್ಕೆ ಸೇರಿದ ದೇವಾಲಯ ಅಕ್ಷರ್ ಮಂದಿರ, ಗುಣಾತೀತನಂದ ಸ್ವಾಮಿಯವರ ಸಮಾಧಿ ಸ್ಥಳ, ಸುರೇಶ್ವರ್ ಮಹಾದೇವ್ ದೇವಾಲಯ, ಧಾರೇಶ್ವರ್ ಮಹಾದೇವ್ ದೇವಾಲಯ ಮತ್ತು ಭುವನೇಶ್ವರಿ ಮಂದಿರ ಇವುಗಳು ಕೆಲವು ಪ್ರಮುಖ ಧಾರ್ಮಿಕ ಸ್ಥಳಗಳಾಗಿವೆ.