ಕೊಡಿವೇರಿ ಜಲಾಶಯ ತಮಿಳುನಾಡಿನ ಒಂದು ದೊಡ್ಡ ಜಲಾಶಯವಾಗಿದೆ. ಇದು ಗೋಪಿಚೆಟ್ಟಿಪಾಳ್ಯಂನಲ್ಲಿದೆ. ಇದನ್ನು ಭವಾನಿ ನದಿಗೆ ಅಡ್ಡಲಾಗಿ ಕಟ್ಟಲಾಗಿದೆ. ಇದು ದೇವಾಲಯಗಳಿಗೆ ಪ್ರಸಿದ್ಧವಾಗಿರುವ ಈರೋಡ್ ನಗರದಿಂದ ಕೇವಲ ನಲವತ್ತೈದು ಕಿಲೋಮೀಟರ್ ದೂರದಲ್ಲಿದೆ. ಈ ಜಲಾಶಯವು ಮೈಸೂರು ಮಹಾರಾಜರಿಂದ ನಿರ್ಮಿತವಾಗಿದೆ. ಅಕ್ಕಿ ಮತ್ತು ಕಬ್ಬು ಇಲ್ಲಿನ ಎರಡು ಪ್ರಮುಖ ಕೃಷಿ ಬೆಳೆಗಳಾಗಿವೆ. ಈ ಜಲಾಶಯ ವಿಸ್ತಾರವಾದ ಪ್ರದೇಶದಲ್ಲಿ ಹರಡಿಕೊಂಡಿದೆ ಹಾಗೂ ಇದು ಇಲ್ಲಿನ ಸುತ್ತಮುತ್ತಲಿನ ಎಲ್ಲಾ ಪ್ರದೇಶಗಳಿಗೆ ನೀರಿನ ಮೂಲವಾದ ಕಾರಣ ಬಹಳ ಪ್ರಾಮುಖ್ಯತೆ ಪಡೆದಿದೆ.
ಈ ಪ್ರದೇಶದ ನೀರಾವರಿ ಕೃಷಿ ಭೂಮಿಗಳ ನಿರ್ವಹಣೆಯಲ್ಲಿ ಈ ಜಲಾಶಯ ಬಹಳ ಪ್ರಮುಖವಾದ ಪಾತ್ರ ವಹಿಸುತ್ತದೆ. ಅಲ್ಲದೆ ಈ ಜಲಾಶಯದ ನಿರ್ವಹಣಾ ಆಡಳಿತವು ಜಲಾಶಯದ ಅಭಿವೃದ್ಧಿಗಾಗಿ ಹಲವಾರು ಸುಧಾರಣೆಗಳನ್ನೂ ಕೂಡ ಮಾಡಿತ್ತಿದೆ. ಈ ಜಲಾಶಯ ಪ್ರದೇಶದಲ್ಲಿ ಮಕ್ಕಳ ಉದ್ಯಾನವನಗಳನ್ನು ಮತ್ತು ಕೊಠಡಿಗಲನ್ನು ಸರ್ಕಾರ ನಿರ್ಮಿಸಿದೆ. ಇದನ್ನು ಸಾಮನ್ಯ ಜನರ ಬಳಕೆಗೆ ಉಪಯುಕ್ತವಾಗುವಂತೆ ಸರ್ಕಾರ ಕ್ರಮಗಳನ್ನು ಕೈಗೊಂಡಿದೆ.