ಇಡಿ ಜಿಲ್ಲೆಯಲ್ಲಿಯೇ ಭವಾನಿ ಎರಡನೆಯ ದೊಡ್ಡ ನಗರಸಭೆಯಾಗಿದೆ. ಕಾವೇರಿ ಮತ್ತು ಭವಾನಿ ನದಿಗಳ ದಡದಲ್ಲಿರುವುದೆ ಈ ನಗರಕ್ಕೆ ಒಂದು ಮುಖ್ಯವಾದ ಆಕರ್ಷಣೆಯಾಗಿದೆ. ಈ ನಗರವು ಐವತ್ತು ಸಾವಿರಕ್ಕಿಂತಲೂ ಹೆಚ್ಚಿನ ಜನಸಂಖ್ಯೆ ಹೊಂದಿದೆ. ಇದು ಮುಖ್ಯವಾಗಿ ಒಂದು ಪರ್ಯಾಯ ದ್ವೀಪದಂತಿರುವ ನಗರವಾಗಿದೆ. ಹಾಗೂ ಈರೋಡ್ ನಗರದ ಉತ್ತರ ದಿಕ್ಕಿಗಿದೆ. ಹಲವಾರು ಮಂದಿ ಈ ನಗರವನ್ನು ತ್ರಿವೇಣಿ ಸಂಗಮ ಎಂಬ ಹೆಸರಿನಿಂದಲೂ ಗುರುತಿಸುತ್ತಾರೆ. ಈ ನಗರವು ಸಂಗಮೇಶ್ವರ ದೇವಾಲಯದಿಂದಲೂ ಸಹ ಬಹಳ ಪ್ರಸಿದ್ಧಿಯನ್ನು ಪಡೆದಿದೆ. ಇದು ಶಿವನಿಗೆ ಸಮರ್ಪಿತವಾದ ದೇವಾಲಯವಾಗಿದೆ. ವೇದಗಿರಿ, ತಿರುಚೆಂಗೋಡ್, ಮಂಗಳಗಿರಿ, ಸಂಕಗಿರ್ ಮತ್ತು ಪದ್ಮಗಿರಿ ಈ ನಗರವನ್ನು ಸುತ್ತುವರೆದಿವೆ. ಕಾರ್ಪೆಟ್ ಉದ್ಯಮದ ಕಾರಣದಿಂದಲೂ ಈ ನಗರ ರಾಜ್ಯದಲ್ಲಿ ಪ್ರಖ್ಯಾತಿ ಪಡೆದಿದೆ. ಇಲ್ಲಿನ ಕಾರ್ಪೆಟ್ ಗಳು ದೇಶದಾದ್ಯಂತ ಉತ್ತಮ ಹೆಸರು ಗಳಿಸಿರುವ ಕಾರಣ ಇದನ್ನು ಕಾರ್ಪೆಟ್ ಸಿಟಿ ಎಂದೂ ಸಹ ಕರೆಯಲಾಗುತ್ತದೆ.