ಧನಬಾದ್ ಸುತ್ತಮುತ್ತಲ ಜನರಿಗೆ ಗಣಿಗಾರಿಕೆ ಪ್ರಮುಖ ಜೀವನೋಪಾಯ. ಗಣಿ ಮತ್ತು ಖನಿಜ ಸಂಪತ್ತು ಜಾರ್ಖಂಡ್ ರಾಜ್ಯದ ಪ್ರಮುಖ ಆದಾಯ. ಕಬ್ಬಿಣ, ಉಕ್ಕು, ಕಲ್ಲಿದ್ದಲು, ಮಿಕಾ ನಿಕ್ಷೇಪಗಳು ರಾಜ್ಯದ ಪ್ರಾಥಮಿಕ ಕೈಗಾರಿಕೆಗಳು. ಧನಬಾದ್ ಸುತ್ತಮುತ್ತಲಿನ ಪ್ರದೇಶಗಳು ಸಮೃದ್ದಿಯಾದ ಕಲ್ಲಿದ್ದಲು ಪ್ರದೇಶಗಳನ್ನು ಹೊಂದಿದೆ.112 ಕಲ್ಲಿದ್ದಲು ಗಣಿಗಳಿಂದ ನಗರ ಸದಾ ವಾಣಿಜ್ಯ ಚಟುವಟಿಕೆಯಿಂದ ಕೂಡಿರುತ್ತದೆ.
27.5 ಮಿಲಿಯನ್ ಟನ್ ಕಲ್ಲಿದ್ದಲು ಉತ್ಪಾದನೆಯ ಮೂಲಕ ರಾಜ್ಯಕ್ಕೆ 7000 ಮಿಲಿಯನ್ ಹಣ ಹರಿದು ಬರುತ್ತಿದೆ. ಕಲ್ಲಿದ್ದಲು ಪರಿಶುದ್ದ ಕೇಂದ್ರಗಳೂ ಇದ್ದು, ವಿದ್ಯುತ್ ಉತ್ಪಾದನಾ ಘಟಕಗಳೂ ನಗರದ ಇತರ ಭಾಗಗಳಲ್ಲಿವೆ. ಮೈಥಾನ್ ಮತ್ತು ಪಂಚೀತ್ ಎರಡು ಪ್ರಮುಖ ಜಲಸಂಪನ್ಮೂಲ ವಿದ್ಯುತ್ ಕೇಂದ್ರಗಳು. ಟಾಟಾ ಪವರ್ ಮತ್ತು ದಾಮೋದರ್ ಕಣಿವೆ ಕಾರ್ಪೋರೇಷನ್ ಗಳು ವಿದ್ಯುತ್ ಉತ್ಪಾದನೆಯ ಜವಾಬ್ದಾರಿಯನ್ನು ಹೊಂದಿರುತ್ತದೆ. ಇತರ ಘಟಕಗಳು ತಯಾರಿಸುವ ವಿದ್ಯುತ್ ಓ ಎನ್ ಜಿ ಸಿ ಮೂಲಕ ತಯಾರಾಗುತ್ತಿದ್ದು, ಅದನ್ನು ಸಿಬಿಎಂ ಬಳಸಿಕೊಳ್ಳುತ್ತಿದೆ.
ಬಿಸಿಸಿಎಲ್ ಸಂಸ್ಥೆ ಝಾರೀಯಾ ಮತ್ತು ರಾಣಿಗಂಜ್ ಗಣಿಯ ಎಲ್ಲಾ ಚಟುವಟಿಕೆಗಳಿಗೆ ಜವಾಬ್ದಾರಿಯಾಗಿದೆ. ಸರಕಾರೀ ಒಡೆತನದ ಡಿಜಿಎಂಎಸ್ ಗಣಿಯ ಸುರಕ್ಷಿತೆಯ ಜವಾಬ್ದಾರಿಯನ್ನು ಹೊಂದಿದೆ. ಸಿಸಿಎಲ್ (ಸೆಂಟ್ರಲ್ ಕೋಯಲ್ ಫೀಲ್ಡ್ಸ್ ಲಿಮಿಟೆದ್) ಎನ್ನುವ ದೇಶದ ಪ್ರಥಮ ಗಣಿಸಂಸ್ಥೆ ವಿದ್ಯುತ್ ಮತ್ತು ಕಬ್ಬಿಣ ತಯಾರಿಕಾ ಘಟಕಕ್ಕೆ ಕಲ್ಲಿದ್ದಲು ಸರಬಾರಾಜು ಮಾಡುತ್ತದೆ. ಧನಾಬಾದಿನಿಂದ ಹತ್ತು ಕಿ.ಮೀ ದೂರದಲ್ಲಿರುವ ಝರೀಯಾದಲ್ಲಿ ಶ್ರೀಮಂತ ಕಲ್ಲಿದ್ದಲಿನ ಉಗ್ರಾಣವಿದೆ. ಕೆಲವು ವರ್ಷಗಳ ಕೆಳಗೆ ಅಲ್ಲಿ ಅಗ್ನಿ ಅವಘಡ ಸಂಭವಿಸಿತ್ತು.ಇಂಡಿಯನ್ ಸ್ಕೂಲ್ ಆಫ್ ಮೈನ್ಸ್ ಎನ್ನುವ ತಾಂತ್ರಿಕ ಸಂಸ್ಥೆ ವಿಜ್ನಾನ, ಗಣಿಗಾರಿಕೆ, ಭೂತವಿಜ್ನಾನ ಶಾಸ್ತ್ರ, ಪೆಟ್ರೋಲಿಯಂ, ಖನಿಜಕ್ಕೆ ಸಂಬಂಧಪಟ್ಟ ತಾಂತ್ರಿಕ ಸಲಹೆಯನ್ನು ನೀಡುತ್ತದೆ.