ಪ್ರವಾಸಿಗರು ದೇವರಾಯನದುರ್ಗ ಗ್ರಾಮಕ್ಕೆ ಭೇಟಿಕೊಟ್ಟಾಗ ತಪ್ಪದೆ ಇಲ್ಲಿನ ಭೋಗನರಸಿಂಹ ಸ್ವಾಮಿ ದೇವಾಲಯಕ್ಕೆ ಭೇಟಿ ಕೊಡಬೇಕು. ಇದು ಬೆಟ್ಟದ ಬುಡದಲ್ಲಿದೆ. ಈ ದೇವಾಲಯವನ್ನು ಚೋಳರು ಕಟ್ಟಿಸಿದರು. ಇಲ್ಲಿಗೆ ಹೋಗುವಾಗ ಪ್ರವಾಸಿಗರು ಲಕ್ಷೀ ದೇವಿಯ ವಿಗ್ರಹವನ್ನು ನೋಡಬಹುದು.ಸ್ಥಳೀಯ ದಂತಕತೆಗಳ ಪ್ರಕಾರ ಇಲ್ಲಿನ ಭೋಗನರಸಿಂಹ ಸ್ವಾಮಿ ಮೂರ್ತಿಯನ್ನು ಶಿವನ ಅವತಾರವೆಂದು ಹೆಸರಾದ ದೂರ್ವಾಸ ಮುನಿಯವರು ಪ್ರತಿಷ್ಠಾಪಿಸಿದರಂತೆ. ಇಲ್ಲಿನ ದೇವಾಲಯದಲ್ಲಿರುವ ಮೂಲದೇವರು ಮೈಸೂರು ಅರಸರ ’ಕುಲದೈವ’ವೆಂದು ನಂಬಲಾಗಿದೆ.ದೇಶದ ನಾನಾಮೂಲೆಗಳಿಂದ ಭಕ್ತಾದಿಗಳು ಪ್ರತಿವರ್ಷ ಭೋಗನರಸಿಂಹ ಸ್ವಾಮಿ ದೇವಾಲಯದ ಜಾತ್ರೆಯ ಸಮಯದಲ್ಲಿ ಜರುಗುವ ರಥೋತ್ಸವಕ್ಕೆ ಆಗಮಿಸುತ್ತಾರೆ. ಈ ರಥೋತ್ಸವವು ಮಾರ್ಚ್/ ಏಪ್ರಿಲ್ ತಿಂಗಳಲ್ಲಿ ಬರುವ ಫಲ್ಗುಣ ಮಾಸದ ಶುದ್ಧ ಪೂರ್ಣಿಮೆಯಂದು ನಡೆಯುತ್ತದೆ. ಈ ರಥೋತ್ಸವದ ಸಮಯದಲ್ಲಿ ಭೋಗನರಸಿಂಹ ಸ್ವಾಮಿಯನ್ನು ರಥದಲ್ಲಿ ಕುಳ್ಳಿರಿಸಿ ಬೆಟ್ಟದ ಮುಖ್ಯ ರಥ ಬೀದಿಯಲ್ಲಿ ಮೆರವಣಿಗೆ ಮಾಡುತ್ತಾರೆ.