ಪ್ರವಾಸಿಗರಿಗೆ ಕಾಲಾವಕಾಶ ದೊರೆತರೆ ಇಲ್ಲಿನ ಸಂಜೀವರಾಯ ದೇವಸ್ಥಾನವನ್ನು ನೋಡಲು ಹೋಗಬಹುದು. ಇದು ಆಂಜನೇಯ ಸ್ವಾಮಿಯ ದೇವಾಲಯವಾಗಿದೆ. ಪ್ರವಾಸಿಗರು ಇಲ್ಲಿಗೆ ಭೇಟಿ ಕೊಟ್ಟಾಗ ಆಂಜನೇಯ ಸ್ವಾಮಿಯ ವಿಗ್ರಹ ನಮಸ್ಕಾರ ಭಂಗಿಯಲ್ಲಿ ನಿಂತಿರುವುದನ್ನು ಕಾಣಬಹುದು. ಸ್ಥಳೀಯರ ನಂಬಿಕೆಯಂತೆ ಸಂಜೀವರಾಯ ದೇವಾಲಯವು ಲಕ್ಷ್ಮಿನರಸಿಂಹ ದೇವಾಲಯಕ್ಕಿಂತ ಹಿಂದೆಯೆ ನಿರ್ಮಾಣವಾಯಿತಂತೆ.