ಪ್ರವಾಸಿಗರಿಗೆ ಕಾಲಾವಕಾಶವಿದ್ದರೆ ಇಲ್ಲಿನ ಬೆಟ್ಟದ ಬುಡದಲ್ಲಿರುವ ನಮದ ಚಿಲುಮೆಗೆ ಭೇಟಿಕೊಡಬಹುದು. ನಮದ ಚಿಲುಮೆಯು ಜಯಮಂಗಲಿ ನದಿಯ ಮೂಲವೆಂದು ಪರಿಗಣಿಸಲ್ಪಟ್ಟಿದೆ. ಪ್ರಸಿದ್ಧ ಜನಪದ ಕಥೆಯೊಂದರ ಪ್ರಕಾರ ಶ್ರೀ ರಾಮನು ಲಂಕೆಗೆ ಹೋಗುವಾಗ ಈ ಸ್ಥಳದಲ್ಲಿ ನೆಲೆನಿಂತನಂತೆ. ರಾಮನು ತನ್ನ ಹಣೆಗೆ ’ನಾಮ’ ಇಡಲು ನೀರಿಗಾಗಿ ಹುಡುಕಾಡಿದನಂತೆ. ನೀರು ಎಲ್ಲಿ ಸಿಗದಿದ್ದಾಗ ತನ್ನ ಬಿಲ್ಲನ್ನು ತೆಗೆದು ಈ ಸ್ಥಳದಲ್ಲಿ ಬಾಣ ಬಿಟ್ಟಾಗ, ಇಲ್ಲಿನ ನೀರಿನ ಚಿಲುಮೆ ಹುಟ್ಟಿತಂತೆ. ಆದ್ದರಿಂದ ಇದನ್ನು ನಾಮದ ಚಿಲುಮೆ ಅಂದರೆ ರಾಮ ಚಿಲುಮೆ ಎಂದು ಕರೆಯುತ್ತಾರೆ. ಪ್ರವಾಸಿಗರು ಈ ಚಿಲುಮೆಯ ಬಳಿಯಲ್ಲಿ ಶ್ರೀ ರಾಮನ ಪಾದದ ಹೆಜ್ಜೆಗುರುತುಗಳನ್ನು ಕಾಣಬಹುದು.ನಾಮದ ಚಿಲುಮೆಯ ಎದುರಿಗೆ 1931ರಲ್ಲಿ ನಿರ್ಮಿಸಲಾದ ಒಂದು ಅತಿಥಿಗೃಹವಿದೆ. ಪ್ರಸಿದ್ಧ ಪಕ್ಷಿತಙ್ಞರಾದ ಸಲೀಂ ಅಲಿಯವರು 1938ರಲ್ಲಿ ತಮ್ಮ ಸಂಶೋಧನೆಯ ಸಲುವಾಗಿ ಇಲ್ಲಿ ಕೆಲ ಕಾಲ ತಂಗಿದ್ದರು.