2010ರಲ್ಲಿ ಅಂದಿನ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರು ಸ್ವಾತಂತ್ರ್ಯ ಹೋರಾಟಗಾರರ ಸ್ಮಾರಕವನ್ನು ಉದ್ಗಾಟಿಸಿದರು. ಕಟಕ್ ನ ದರ್ಗಾ ಬಜಾರ್ ಸಮೀಪದಲ್ಲಿರುವ ಹಳೆ ಸೆರೆಮನೆ ಸಂಕೀರ್ಣದಲ್ಲಿ ಈ ಸ್ಮಾರಕ ಉಪಸ್ಥಿತವಿದೆ. ನೇತಾಜಿ ಸುಭಾಶ್ ಚಂದ್ರ ಬೋಸ್ ರವರ ಜಯಂತಿ ದಿವಸದಂದು, ಜನವರಿ 23ರಂದು ಇದನ್ನು ಸಾರ್ವಜನಿಕರಿಗೆ ತೆರೆಯಲಾಯಿತು.
ಕೆಚ್ಚೆದೆಯ ಸ್ವಾತಂತ್ರ್ಯ ಹೋರಾಟಗಾರರಿಗೆ ಗೌರವ ಸೂಚಕವಾಗಿ ಈ ಸ್ಮಾರಕವನ್ನು ಸ್ಥಾಪಿಸಲಾಯಿತು. ತಮ್ಮ ಪ್ರಾಣವನ್ನೇ ತ್ಯಾಗಮಾಡಿದ ಚಳವಳಿಗಾರರ ಸ್ಮಾರಕ ಭೇಟಿ ಮಾಡಿದಾಗ ಪ್ರತಿಯೊಬ್ಬರಲ್ಲೂ ದೇಶಭಕ್ತಿ ಹಾಗು ಕೃತಜ್ಞತಾಭಾವ ಎದ್ದು ಕಾಣುತ್ತಿರುತ್ತದೆ. ಇಲ್ಲಿ ಉತ್ತಮವಾಗಿ ನಿರ್ವಹಿಸಿಕೊಂಡು ಬಂದ ಉದ್ಯಾನವನವಿದೆ. ಹಳೆಯ ಸೆರೆಮನೆಯ ಸಂಕೀರ್ಣವನ್ನು ಜೀರ್ಣೋದ್ಧಾರ ಮಾಡಿ, ಹಲವಾರು ಅಭಿವೃದ್ಧಿ ಕೆಲಸ ಕೈಗೊಂಡು, ಪ್ರವಾಸಿಗರಿಗೆ ಆಕರ್ಷಕವಾಗಿ ಕಾಣುವಂತೆ ಮಾಡಿದ್ದಾರೆ.
ಇಲ್ಲಿರುವ ವಸ್ತುಸಂಗ್ರಹಾಲಯದಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಫೋಟೋಗಳು ಮತ್ತು ಅವರಿಗೆ ಸಂಬಂಧಪಟ್ಟ ಅನೇಕ ವಸ್ತುಗಳು ಪ್ರದರ್ಶನಕ್ಕಿವೆ.


Click it and Unblock the Notifications