ಚೆನ್ನೈನ ಹೊರವಲಯದಲ್ಲಿ ನವಗ್ರಹಗಳಿಗೆಂದೆ ಮೀಸಲಾದ ಒಂಬತ್ತು ದೇವಾಲಯಗಳನ್ನು ಕಾಣಬಹುದು. ಈ ದೇವಾಲಯಗಳನ್ನು ಮುಖ್ಯವಾಗಿ ಚೆನ್ನೈನಿಂದ ಕುಂಭಕೋಣಂಗೆ ಪ್ರಯಾಣ ಮಾಡುತ್ತಿದ್ದ ಪ್ರಯಾಣಿಕರ ರಕ್ಷಣೆಯ ಉದ್ದೇಶದಿಂದಾಗಿ ನಿರ್ಮಿಸಲಾಗಿವೆ. ಪುರಾತನ ಕಾಲದಲ್ಲಿ ಈ ಪ್ರಯಾಣ ಮಾರ್ಗವು ಅತ್ಯಂತ ಕಷ್ಟಕರವಾಗಿತ್ತು, ಪ್ರಯಾಣಿಕರಿಗೆ ಹಲವಾರು ಅಡಚಣೆಗಳು ಎದುರಾಗುತ್ತಿದ್ದವು. ಈ ಎಲ್ಲ ಅಡೆತಡೆಗಳನ್ನು ನಿವಾರಿಸುವ ಉದ್ದೇಶದಿಂದಾಗಿ ಈ ದೇವಾಲಯಗಳನ್ನು ನಿರ್ಮಿಸಲಾಯಿತು. ನವಗ್ರಹ ದೇವಾಲಯಗಳಲ್ಲಿ ಪ್ರಾರ್ಥಿಸುವುದರಿಂದ ದುರಾದೃಷ್ಟ, ಕಷ್ಟಗಳು ದೂರವಾಗುತ್ತವೆಂದು ನಂಬಲಾಗಿದೆ.
ಚೋಳರ ಕಾಲದಲ್ಲಿ ನಿರ್ಮಿಸಲಾಗಿರುವ ಈ ಎಲ್ಲ ಒಂಭತ್ತು ದೇವಸ್ಥಾನಗಳ ವಾಸ್ತುಶಿಲ್ಪವು ವರ್ಣನಾತೀತ. ಆದರೆ ಕಾಲಚಕ್ರದಲ್ಲಿ ಸಿಲುಕಿದ ಈ ಎಲ್ಲ ದೇವಸ್ಥಾನಗಳ ಪೈಕಿ ಕೆಲವು ದೇವಾಲಯಗಳು ನಿರ್ಲಕ್ಷ್ಯದಿಂದಾಗಿ ಇಂದು ದುಸ್ಥಿತಿಯನ್ನು ತಲುಪಿವೆ. ಆದರೂ ಇವುಗಳ ಹೊರತಾಗಿ ಉಳಿದ ದೇವಾಲಯಗಳು ಇಂದಿಗೂ ಸುಸ್ಥಿತಿಯನ್ನು ಯಥಾವತ್ತಾಗಿ ಕಾಪಾಡಿಕೊಂಡು ಬಂದಿವೆ.
ಇಲ್ಲಿನ ಬೇರೆ ಬೇರೆ ದೇವಾಲಯಗಳಲ್ಲಿ ಬೇರೆ ಬೇರೆ ರೂಪದಲ್ಲಿ ಪೂಜಿಸಲಾಗುವ ಶಿವನೇ ಈ ದೇವಸ್ಥಾನಗಳ ಮುಖ್ಯ ದೇವತೆ. ಕೆಲವು ದೇವಸ್ಥಾನಗಳಲ್ಲಿ ಶಿವನೆ ಆಯಾ ಗ್ರಹಗಳನ್ನು ಪ್ರತಿನಿಧಿಸುತ್ತಿದ್ದು, ಆ ನಿರ್ದಿಷ್ಟ ಗ್ರಹಗಳ ಪ್ರತ್ಯೇಕವಾದ ದೇವಾಲಯಗಳಿಲ್ಲ.